Pages

Saturday, December 6, 2014

ಬಾಳಿನ ‘ಘಟನೆಗಳು’ ಕಾಡುವ ‘ಶಕುನಗಳು’


ಬೆಳಿಗ್ಗೆ ಎದ್ದಾಗಿನಿಂದ ಯಾಕೋ ಮನಸ್ಸೇ ಸರಿ ಇಲ್ಲ, ಏನೋ ಬೇಸರ, ಭಯ, ಆತಂಕ, ದ್ವಂಧ್ವ, ಏನು ಕೆಲಸ ಮಾಡಲು ಮನಸ್ಸಿಲ್ಲ, ಕೆಲಸ ಮಾಡಿದರೂ ಎಲ್ಲಿ ತಪ್ಪು ಮಾಡಿಬಿಡುತ್ತೇವೋ ಎನ್ನುವ ಆತಂಕ, ಏನು ಮಾಡಬೇಕೆಂದು ತೋಚುತ್ತಿಲ್ಲ, ಇತ್ತೀಚೆಗೆ ಯಾಕೋ ಪದೇ ಪದೇ ಹೀಗೆ ಆಗುತ್ತಿರುತ್ತದೆ, ಕಾರಣ ಗೊತ್ತಾಗುತ್ತಿಲ್ಲ, ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿ ಜಗಳವಾಯ್ತು, ಯಾಕೋ ಶಕುನವೇ ಸರಿ ಇಲ್ಲ, ಒಂದು ರೀತಿ ಮನಸ್ಸಿಗೆ ಮಂಕು ಕವಿದಿದೆ, ಎಂದು ಕೆಲವೊಮ್ಮೆ ಮನಸ್ಸಿಗೆ ಅನ್ನಿಸಿ ಮಂಕಾಗಿ ಕುಳಿತಿರುತ್ತೇವೆ ಅಲ್ಲವೆ?
ಇದು ಕೆಲವೊಮ್ಮೆ ಬೆಳ್ಳಂಬೆಳಿಗ್ಗೆಯೇ ಶುರುವಾಗಿ ಇಡೀ ದಿನ ಕಾಡುತ್ತಿರುತ್ತದೆ. ಒಂದು ರೀತಿಯ ‘ಮಾರ್ನಿಂಗ್ ಫೋಬಿಯಾ! ರಾತ್ರಿ ಬಿದ್ದ ಯಾವುದೋ ನಮಗೆ ಸಂಬಂಧವಿಲ್ಲದ ಕನಸು, ಬೆಳಗಿನಜಾವದ ಕೆಟ್ಟ ಕನಸು, ರಾತ್ರಿ ಟೀವಿಯಲ್ಲಿ  ನೋಡಿದ ಕ್ರೈಂ ಕಾರ್ಯಕ್ರಮದ ಪರಿಣಾಮ, ಬೆಳಗ್ಗೆ ಎದ್ದು ಹೊರಹೋದ ತಕ್ಷಣ ಕಂಡ ಎದುರು ಮನೆಯ ಬೆಕ್ಕು, ಅಥವಾ ಹಾಸಿಗೆಯಿಂದ ಏಳುವಾಗ ಎಡಗಡೆ ಎದ್ದದ್ದು, ಬೆಳಗ್ಗೆ ಎದ್ದ ಕೂಡಲೇ ಮೊಬೈಲಿಗೆ ಬಂದ ಯಾವುದೋ ಸಾವಿನ ಸುದ್ದಿ, ತುಂಬಾ ಸಮಯ ಮಲಗಿಬಿಟ್ಟೆ ಎಂದು ತಡಬಡಾಯಿಸಿ ಎದ್ದು ಕೂರುವ ಪರಿ, ಹೀಗೆ ಅನೇಕ ವಿಚಾರಗಳು ನಾವು ಎಷ್ಟೆ ಗಟ್ಟಿಗರೆಂದುಕೊಂಡರು ನಮ್ಮ ಮನಸ್ಸನ್ನು ಕೆಲವೊಮ್ಮೆ ಆತಂಕಕ್ಕೆ ದೂಡಿಬಿಡುತ್ತವೆ. ಬೆಳಗ್ಗೆ ಹಾಲು ತರಲು ಹೊರ ಹೋದಾಗ ಬೆಕ್ಕು ಅಡ್ಡ ಬಂತು ಎನ್ನುವ ವಿಚಾರ ನಮಗೆ ಗೌಣ ಎನಿಸಿದರೂ, ನಾವು ಅದನ್ನು ನಂಬುವುದಿಲ್ಲ ಎಂದು ಮನದಲ್ಲಿ ಅಂದು ಕೊಂಡರೂ ಒಂದು ದಿನ ನನಗೆ ಬೆಕ್ಕು ಅಡ್ಡ ಬಂದಿದ್ದರಿಂದ ನನಗೆ ಅಪಘಾತವಾಗಿತ್ತು ಗೊತ್ತಾ? ಎಂದು ಯಾರೋ ಹೇಳಿರುವ ‘ಒಂದು ಬೆಕ್ಕಿನ ಕಥೆ’ ನಮ್ಮನ್ನು ಒಂದು ಕ್ಷಣ ನಿಂತು ನಡೆಯುವಂತೆ ಮಾಡಿಬಿಡುತ್ತದೆ.
ಶಕುನ ಎನ್ನುವ ಈ ಪದ ಶುಭ ಮತ್ತು ಅಶುಭ ಎನ್ನುವ ಎರಡು ಭಾಗಗಳಾಗಿ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಲೇ ಇರುತ್ತದೆ. ನಮ್ಮನ್ನು ಕಾಡುತ್ತಲೇ ಇರುತ್ತದೆ! ಅಶುಭ ಶಕುನಗಳು ಎಂದು ಪರಿಭಾವಿಸಿರುವ ಕೆಲವು ಉದಾಹರಣೆಗಳನ್ನು ಚರ್ಚಿಸುವುದಾದರೆ, ಒಳ್ಳೆಯ ಕಾರ್ಯಕ್ಕೆ ಹೊರಟಾಗ ಖಾಲಿ ಕೊಡ ಅಡ್ಡ ಬಂದರೆ, ಸೌದೆ ಅಡ್ಡ ಬಂದರೆ, ಬೆಕ್ಕು ಅಡ್ಡ ಬಂದರೆ, ಏನಾದರು ವಿಚಾರ ಮಾತನಾಡುವಾಗ ಒಂಟಿ ಸೀನು ಬಂದರೆ, ಮನೆಯಿಂದ ಹೊರಗೆ ಕಾಲಿಡುವಾಗ ಎಡವಿದರೆ, ಗಂಡಸರಿಗೆ ದೇಹದ ಎಡಭಾಗ, ಹೆಂಗಸರಿಗೆ ದೇಹದ ಬಲಭಾಗ ಅದುರಿದರೆ, ಮನೆಯಲ್ಲಿ ಕುಂಕುಮ ಅಕಸ್ಮಾತಾಗಿ ಚೆಲ್ಲಿಬಿಟ್ಟರೆ, ಒಂಟಿ ಕತ್ತೆ ಕಂಡು ಬಿಟ್ಟರೆ, ಕಾಗೆ ಮೈಗೆ ತಾಗಿಬಿಟ್ಟರೆ, ಹೀಗೆ ಅನೇಕ ನಂಬಿಕೆಗಳು ನಮಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುತ್ತವೆ. ಅವು ಮೂಢ ನಂಬಿಕೆಗಳಾ? ನಮ್ಮ ದುರ್ಬಲ ಮನಸ್ಥಿತಿಯ ಸಂಕೇತವಾ? ನಾವು ಕೇಳಿದ ಅಂತೆ-ಕಂತೆ ಕಥೆಗಳ ಪ್ರಭಾವವಾ? ಯೋಚಿಸಬೇಕಿದೆ.
ಇನ್ನು ಶುಭ ಶಕುನಗಳ ಬಗ್ಗೆ ಚರ್ಚಿಸುವುದಾದರೆ ಸುಮಂಗಲಿಯರು ಎದುರು ಸಿಕ್ಕರೆ, ನರಿ ಕಂಡರೆ, ತುಂಬಿದ ಕೊಡ ಎದುರಿಗೆ ಸಿಕ್ಕರೆ,  ಹೀಗೆ ಬೆಳೆಯುತ್ತಾ ಹೋಗುತ್ತದೆ ಪಟ್ಟಿ. ಈ ರೀತಿಯ ಶುಭ ಶಕುನಗಳು ಬೆಳಗ್ಗೆ ಎದ್ದ ತಕ್ಷಣ ಅನೇಕರ ಮನಸ್ಸಿಗೆ ಪ್ರಫುಲ್ಲತೆ ಕೊಟ್ಟರೆ, ಅಶುಭ ಶಕುನಗಳು ಮನಸ್ಸಿಗೆ ಘಾಸಿ ಮಾಡಿ ಇಡೀ ದಿನದ ನೆಮ್ಮದಿಯನ್ನು ಕೆಡಿಸುವಂತಹದು.
ಇಂತಹ ಸಂದರ್ಭದಲ್ಲಿ ನಾವು ಯೋಚಿಸಬೇಕಿರುವುದು, ಊರಿನ ಮಧ್ಯೆ ಬದುಕುತ್ತಿರುವ, ವಾಸಿಸುತ್ತಿರುವ ನಮಗೆ ಬೆಳಗ್ಗೆ ಎದ್ದು ಹೊರ ಹೋದಾಗ ಬೆಕ್ಕು ಕಾಣಿಸದೆ ಹುಲಿ ಸಿಂಹಗಳು ಕಾಣಿಸಲು ಸಾಧ್ಯವೆ? ಎಂದು.  ಊರು ಅಂದ ಮೇಲೆ ಜನ ಓಡಾಡುವುದು ಸಹಜ, ನೀರಿಗಾಗಿ ಖಾಲಿ, ಭರ್ತಿ ಕೊಡ ಹೊತ್ತೊಯ್ಯುವುದು ಕೂಡ ಮಾಮೂಲು, ರಸ್ತೆ ಅಂದ ಮೇಲೆ ಅಲ್ಲಿ ಎಲ್ಲ ರೀತಿಯ ಮಂದಿ ಓಡಾಡುತ್ತಾರೆ, ಬೆಳಿಗ್ಗೆ ಒಲೆ ಹಚ್ಚಲು ಸೌದೆ ಇಲ್ಲದಿದ್ದರೆ ಅದನ್ನು ಕೊಂಡೊಯ್ಯಲೇ ಬೇಕು, ಕುಂಕುಮ ಹಚ್ಚುವಾಗ ಕೈ ಜಾರುತ್ತದೆ, ಮನುಷ್ಯ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು, ದೇಹದಲ್ಲಿ ವಾಯು ಜಾಸ್ತಿಯಾದರೆ ಬಲವೋ? ಎಡವೋ? ಯಾವದೋ ಒಂದು ಭಾಗ ಅದುರುತ್ತದೆ, ಶೀತವದಾಗ ಒಂಟಿಯೋ, ಜಂಟಿಯೋ ಸೀನು ಬರುತ್ತದೆ, ನಡೆಯುವವರು ಎಡವುವುದು ಸಹಜ?  ಅದಕ್ಕೆ ಶುಭ, ಅಶುಭ ಎನ್ನುವ ‘ಶಕುನ’ದ ಟ್ಯಾಗ್ ಅಂಟಿಸಿ ನಮ್ಮ ಮನಸ್ಸಿನ ನೆಮ್ಮದಿ ಹಾಳುಮಾಡಿಕೊಂಡು ಇಡೀ ದಿನ ಒದ್ದಾಡುವುದು ಎಷ್ಟು ಸರಿ?
ಇದು ನಾವು ಬೆಳೆದ ಪರಿಸರ, ಸಮಾಜ, ಭಯಗ್ರಸ್ಥ ಜನರ ಸಂಗ, ನಮ್ಮ ಕುಟುಂಬದ ಹಿನ್ನೆಲೆ, ನಾವು ಕೇಳಿದ ಕಥೆಗಳು, ಯಾರೋ ಬೆದರಿದ ಮಂದಿ ಅವರ ತಲೆಯಲ್ಲಿನ ಒತ್ತಡವನ್ನು ನಮ್ಮ ತಲೆಗೆ ವರ್ಗಾಯಿಸಿದ ಸಂದರ್ಭ, ಊಹಾಪೋಹದ ಕಥೆಗಳು ಇವೆಲ್ಲವೂ ಸೇರಿ ನಮ್ಮನ್ನು ಮತ್ತಷ್ಡು ಅಧೀರರನ್ನಾಗಿಸುತ್ತವೆ. ಇವು ಭಯ ಪಟ್ಟ ವ್ಯಕ್ತಿಯ ಮೇಲೆ ಹಗ್ಗ ಎಸೆದರೂ ಹಾವೆಂದು ಭ್ರಮಿಸುತ್ತಾರಲ್ಲ ಆ ರೀತಿಯ ಸಂದರ್ಭಗಳು.
ಅಸಲಿಗೆ ಯಾಕೆ ಇಂತಹ ಭಯಗಳು ನಮ್ಮನ್ನು ಕಾಡುತ್ತವೆ ಎನ್ನುವುದನ್ನು ನೋಡೋಣ, ತುಂಬ ಸಲ ನಾವು ಯಾರೋ ಒಬ್ಬರು ಒಂದು ದೆವ್ವದ ಕಥೆ ಹೇಳಿದರೆ ಇರುವಲ್ಲಿಯೇ ನಮ್ಮ ದೇಹ ಕಂಪಿಸುತ್ತಿರುತ್ತದೆ, ರಾತ್ರಿ ಲೈಟ್ ಆಫ್ ಮಾಡಿ ಹಾಸಿಗೆಯ ಮೇಲೆ ಬಿದ್ದ  ತಕ್ಷಣ ದೆವ್ವದ ಕಥೆ ನೆನಪಾಗುತ್ತದೆ, ಇವೆಲ್ಲವೂ ಕೂಡ ನಮ್ಮ ದ್ವಂಧ್ವ ಮನಸ್ಸಿನ ಸಂಕೇತ. ಒಬ್ಬರು ಒಂದು ವಿಚಾರ ಹೇಳಿದ ತಕ್ಷಣ ನಮ್ಮದೇ ಆದ ಕಲ್ಪನಾ ಲೋಕಕ್ಕೆ ಹೋಗಿ, ಒಂದು ಚಿತ್ರಣವನ್ನು ಕಲ್ಪಿಸಿಕೊಂಡು ಅದನ್ನು ಪ್ರತಿನಿತ್ಯ ಮನಸ್ಸಿನಲ್ಲೆ ರೀಕಾಲ್ ಮಾಡಿಕೊಳ್ಳುತ್ತಿರುತ್ತೇವೆ, ಅದಕ್ಕೆ ನಮ್ಮದೂ ಒಂದಷ್ಟು ಚಿತ್ರಕಥೆ, ಸಂಭಾಷಣೆ, ಸನ್ನಿವೇಷ ಸೇರಿಸಿಕೊಂಡು ದೊಡ್ಡದು ಮಾಡಿಬಿಟ್ಟಿರುತ್ತೇವೆ, ಅದರ ಪ್ರಭಾವ ನಮ್ಮ ಮನಸ್ಸಿನ ಮೇಲೆ ಪದೇ ಪದೇ ಆಗುತ್ತಿರುತ್ತದೆ. ಈ ರೀತಿಯ ಫೋಬಿಯಾ ಹೆಚ್ಚಾಗಿ ‘ಖಾಲಿ’ ಕೂತಿರುವಾಗ ಮಾತ್ರ ಕಾಡುತ್ತದೆ. ಅದಕ್ಕೆ ಹೇಳುವುದು ‘Idle Mind is Devils Workshop’ ಅಂತ.
ಇನ್ನು ಒಂದು ವಿಚಾರವನ್ನು ನಾವು ಯೋಚಿಸಬೇಕಿದೆ, ಬೆಕ್ಕು ಅಪಶಕುನ ಎನ್ನುವ, ನರಿ ಶುಭಶಕುನ ಎನ್ನುವ ನಾವುಗಳು ಮನೆಯಲ್ಲಿ ಬೆಕ್ಕನ್ನು ಸಾಕುತ್ತೇವೆಯೇ ಹೊರತು ನರಿಯನ್ನಲ್ಲ. ಹಾಗೆಯೇ ಯಾವುದೇ ಕೆಲಸವಾಗಲಿ ಸಮಚಿತ್ತದಿಂದ, ಪರಿಶ್ರಮದಿಂದ, ಶ್ರದ್ಧೆಯಿಂದ ಮಾಡಿದರೇ ಫಲ ಸಿಕ್ಕೇ ಸಿಗುತ್ತದೆ. ಫಲ ಸಿಗಬೇಕಾದರೆ ತುಂಬಿದ ಕೊಡ ಅಡ್ಡ ಬರಲೇಬೇಕು ಎಂಬ ನಿಯಮವಿಲ್ಲ, ಇನ್ನು ಕುಂಕುಮ ಹಚ್ಚುವಾಗ ಕೈಜಾರಿದರೆ, ಅದು ಕೇವಲ ನಮ್ಮ ಮೈಮರೆವೇ ಹೊರತು ಪ್ರಳಯಕ್ಕೆ ಮುನ್ನುಡಿಯಲ್ಲ ಎನ್ನುವ ಅನೇಕ ವಿಚಾರಗಳನ್ನು ನಾವು ಮನಗಾಣಬೇಕಿದೆ. ಇನ್ನು ಬೆಳಗ್ಗೆ ಬಲಗಡೆ ಏಳಬೇಕು ಎನ್ನಲು ನಮ್ಮ ನಂಬಿಕೆಗಿಂತ ವೈಜ್ಣಾನಿಕ ಕಾರಣವಿದೆ ಎನ್ನುವುದು ಕೂಡ ನಾವು ಮರೆಯಬಾರದು.
ಎಲ್ಲಿಯವರೆಗೆ ನಮ್ಮಲ್ಲಿ ಭಯ, ಆತಂಕ, ಅಪರಾಧಿ ಮನೋಭಾವ, ಪದೇ ಪದೇ ತಪ್ಪು ಮಾಡುವ ಮನಸ್ಥಿತಿ ಕಾಡುತ್ತಿರುತ್ತದೆಯೋ ಅಲ್ಲಿಯವರೆಗೂ ಈ ರೀತಿಯ ‘ಶಕುನ’ಗಳು ನಮ್ಮನ್ನು ಆವರಿಸಿಕೊಂಡಿರುತ್ತವೆ, ಒಮ್ಮೆ ಅವನ್ನೆಲ್ಲ ಸರಿಸಿ ಮುಕ್ತ, ನಿರ್ಭೀತ ಹಾಗು ಧೃಢ ಮನಸ್ಥಿತಿಯೊಂದಿಗೆ ನಾವು ದಿನವನ್ನು ಆರಂಭಿಸಿದ್ದೇ ಆದರೆ, ಶಕುನಗಳನ್ನು ಹೊರತುಪಡಿಸಿದ, ಖುಷಿಯ ಮನಸ್ಥಿತಿಯ ದಿನ ಖಂಡಿತಾ ನಮ್ಮದಾಗುತ್ತದೆ.
ಏನಂತೀರಿ?
-ಹೆಚ್. ಆರ್. ಪ್ರಭಾಕರ್

‘ಹೊಟ್ಟೆಕಿಚ್ಚು’ ಎನ್ನುವ ‘ಮೊಟ್ಟೆಕೋಳಿ’


ಮನುಷ್ಯ ಭೂಮಿಗೆ ಬಂದಾಗಿನಿಂದ ಕೊನೆಯ ಘಳಿಗೆಯವರೆಗೆ ಬದುಕಿನ ವಿವಿಧ ಘಟ್ಟಗಳಲ್ಲಿ, ಹಲವರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುವ, ಕೆಲವರು ಬದುಕು ಪೂರಾ ಹಾಸು ಹೊದ್ದು ಮಲಗಿರುವ ಭಾವ ಈ ಹೊಟ್ಟೆಕಿಚ್ಚು. ಮೊದಲು ನನಗೆ ಬೇಕು ಎಂಬ ಸಣ್ಣ ಸ್ವಾರ್ಥ, ನನ್ನನ್ನೇ ಗಮನಿಸಲಿ ಎಂಬ ನಿರೀಕ್ಷೆ, ನಾನೆ ಪ್ರಮುಖನಾಗಬೇಕೆಂಬ ಹಂಬಲ ಅಥವಾ ನಮಗಿಲ್ಲದ್ದು ಅವರಿಗೇಕೆ ಸಿಕ್ಕಿತೆಂಬ ಅಸಹನೆ, ಅವರು ಅದಕ್ಕೆ ಅರ್ಹರಲ್ಲ ಆದರೂ ಅವರಿಗೆ ಆ ಮನ್ನಣೆ ದಕ್ಕಬಾರದಿತ್ತು ಎಂಬ ಚಿಂತನೆ, ನನಗಿಲ್ಲದ್ದು ಅವರಿಗೇಕೆ? ಎಂಬ ಅಹಂ ಹೀಗೆ ಕಾಡುತ್ತ ಅದು ಹೆಚ್ಚಾದಾಗ ನಮ್ಮ ವ್ಯಕ್ತಿತ್ವದಲ್ಲಿ ವ್ರಣವಾಗಿ ಕಾಡುತ್ತದೆ. ಹೊಟ್ಟೆಕಿಚ್ಚು ಎನ್ನುವುದು ನಮ್ಮಲ್ಲಿ ಛಲ ಹುಟ್ಟಿಸುವ ಕಿಚ್ಚಾಗಬೇಕೇ ವಿನಃ ನಮ್ಮ ವ್ಯಕ್ತಿತ್ವವನ್ನು ಸುಡುವ ಕಿಚ್ಚಾಗಬಾರದು ಅಲ್ಲವೆ?
ಇದು ಮನುಷ್ಯನ ಸಹಜ ಗುಣ ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಅಳತೆ ಮೀರಿದರೆ ಸಹ್ಯವಲ್ಲ ಹಾಗು ಆರೋಗ್ಯಕರವೂ ಅಲ್ಲ! ಇದು ಮನುಷ್ಯನ ಲೊಲುಪತನದ, ಲಂಪಟತನದ ಹಾಗು ಮತ್ತೊಬ್ಬರ ಏಳ್ಗೆ, ಯಶಸ್ಸು ಹಾಗು ಉದ್ಧಾರವನ್ನು ಸಹಿಸದ ಮಂದಿಯ ಮನಸ್ಥಿತಿಯ ಪರಮಾವಧಿಯೇ ಸರಿ!  ಇದು ಎಲ್ಲ ಕಾಲಕ್ಕೂ, ಎಲ್ಲರಲ್ಲೂ ಇರುತ್ತದೆ ಎಂದು ಹೇಳಲು ಬಾರದು, ಕೆಲವರು ಇದಕ್ಕೆ ತದ್ವಿರುಧ್ಧವಾಗಿ, ತಟಸ್ಥವಾಗಿ ತಮ್ಮ ಪಾಡಿಗೆ ತಾವು ಬದುಕುತ್ತಿರುತ್ತಾರೆ ಆದರೆ ಇವರ ಸಂಖ್ಯೆ ತುಂಬಾ ಕಡಿಮೆ. ನಾನು ಹೇಳಲು ಹೊರಟದ್ದು ‘ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ’ ಎಂದು ಕರೆಯಿಸಿಕೊಳ್ಳುವ, ಅಥವಾ ಅವರ ಹಾವ-ಭಾವ, ಮಾತು-ನಡೆ ಕೊಂಕು ನುಡಿ-ವ್ಯಕ್ತಿತ್ವ ಹೀಗೆ ನೋಡಿದ ತಕ್ಷಣ ಎಂತಹವರಿಗೂ ಅನ್ನಿಸಿಬಿಡುತ್ತದಲ್ಲ ಹೌದು ಇವರು ಇತರರ ಏಳ್ಗೆ ಸಹಿಸುವುದಿಲ್ಲ ಎಂದು, ಅಂತಹವರ ಬಗ್ಗೆ!
ಇಂತಹ ಮನಸ್ಥಿತಿಯವರು, ಮೊಸರಲ್ಲಿ ಕಲ್ಲು ಹುಡುಕುವ ಹುಕಿ ಇರುವವರು, ಇವರಿಗೆ ಯಾರು ಏನೇ ಸಾಧಿಸಿದರೂ, ಮುಂದಡಿ ಇಟ್ಟರೂ ಅನುಮಾನ ಮತ್ತು ಅಸಹನೆಯಿಂದ ನೋಡುತ್ತಿರುತ್ತಾರೆ. ಅದು ವಿದ್ಯೆ, ಉದ್ಯೋಗ, ವ್ಯಾಪಾರ, ಹಣ, ಅಂತಸ್ತು, ಸಾಮಾಜಿಕ ಸ್ಥಾನಮಾನ, ಬುದ್ಧಿಮತ್ತೆ, ಧೈರ್ಯ, ಸಾಹಸೀ ಪ್ರವೃತ್ತಿ, ಒಳ್ಳೆಯ ಗಂಡ/ ಹೆಂಡತಿ ಸಿಕ್ಕಾಗ, ಬುಧ್ಧಿವಂತ ಮಕ್ಕಳು ಹುಟ್ಟಿದಾಗ, ನಮ್ಮ ಮಕ್ಕಳು ಸಾಧಿಸದ್ದನ್ನು ಇತರರ ಮಕ್ಕಳು ಸಾಧಿಸಿದಾಗ,  ಒಟ್ಟಾರೆ ಹೇಳುವುದಾದರೆ ನಾನು ಯಾವ ಸ್ಥಿತಿಯಲ್ಲಿ ಇದ್ದೇನೋ ನನ್ನ ಓರಗೆಯವರೂ ಅದೇ ಸ್ಥಿತಿಯಲ್ಲಿ ಇರಬೇಕು ಎಂದು ಬಯಸುವವರು ಹಾಗು ತಮ್ಮ ಓರಗೆಯವರು ಒಂದು ಹೆಜ್ಜೆ ಮುಂದಿದ್ದಾರೆ ಎಂದ ತಕ್ಷಣ ಇವರು ಇರುವಲ್ಲಿಯೇ ವಿಲವಿಲ ಒದ್ದಾಡಲು ಶುರುಮಾಡುತ್ತಾರೆ, ಅಸಹನೆಯ ಕೂಪದಲ್ಲಿ ಬೀಳುತ್ತಾರೆ, ಅಂದಿನಿಂದ ಇವರ ಕಾಯಕ ಒಂದೇ ಆಗುತ್ತದೆ ಅದು ಮುನ್ನುಗ್ಗುದವರ ಸಾಧನೆಯನ್ನು ಹೀಗೆಳೆದು, ಅಪಪ್ರಚಾರ ಮಾಡಿ ಹೇಗಾದರು ಮಾಡಿ ಅವರ ಬೆಳವಣಿಗೆಯನ್ನು ಕುಂಠಿತಗೊಳಿಸಬೇಕು ಎಂಬುದಾಗುತ್ತದೆ! ಇದು ಎಲ್ಲಿಯವರೆಗೂ ಹೋಗುತ್ತದೆ ಎಂದರೆ, ನನ್ನ ಒಂದು ಕಣ್ಣು ಹೋದರೂ ಚಿಂತೆಯಿಲ್ಲ ಅವರ ಎರಡೂ ಕಣ್ಣು ಹೋಗಲಿ ಅದೇ ನನಗೆ ಸಮಾಧಾನ ಎನ್ನುವ ಕಥೆ ಕೇಳಿದ್ದೀರಲ್ಲ, ಅಂತಹ ಹಂತದವರೆಗೆ ಕೊಂಡೊಯ್ದುಬಿಡುತ್ತದೆ ಇದು ನಿಜಕ್ಕೂ ಅಪಾಯಕಾರಿ!
ತುಂಬಾ ಸಲ ಬದುಕಲ್ಲಿ ನಿದ್ದೆಕೆಟ್ಟು, ಶ್ರಮಪಟ್ಟು, ವಿಶ್ರಾಂತಿಯಿಲ್ಲದೆ ದುಡಿದು, ವಯಕ್ತಿಕ ಬದುಕನ್ನು ಬದಿಗಿಟ್ಟು ಸಾಧಿಸಲು ಹೊರಟವರಿಗೆ ಇಂತಹ ಮಂದಿ ತಣ್ಣೀರೆರೆಚುವ ಕೆಲಸ ಮಾಡಿಬಿಡುತ್ತಾರೆ. ಇವರು ಒಂದು ರೀತಿ ಹೊಂಚು ಹಾಕಿ ಸಂಚು ಮಾಡುವವರು.  ತಟಸ್ಥವಾಗಿ ತಮ್ಮ ಋಣಾತ್ಮಕ ಮಾತಿನ, ನಡವಳಿಕೆಯ ಮೂಲಕ ಸಾಧಿಸುವವರ ಗುರಿ ತಪ್ಪುವಂತೆ ಮಾಡಿಬಿಡುವ ಚಾಕಚಕ್ಯತೆ ಇವರಿಗೆ ಒಲಿದುಬಿಟ್ಟಿರುತ್ತದೆ.
ಇಂತಹವರ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದನ್ನು ಚರ್ಚಿಸುವುದಾದರೆ, ಇವರು ನಾಟಕೀಯತೆ ಮೈಗೂಡಿಸಿಕೊಂಡಿರುತ್ತಾರೆ, ಮಾತು ತುಂಬಾ ನಯವಾಗಿರುತ್ತದೆ, ಅತಿ ವಿನಯವಂತಿಕೆ ತೋರ್ಪಡಿಸುತ್ತಾರೆ, ತಕ್ಷಣಕ್ಕೆ ನಿಮ್ಮ ಮಾತಿಗೆ ಸ್ಪಂದಿಸದೆ ಅಳೆದೂ ತೂಗಿ ಮಾತನಾಡುತ್ತಾರೆ, ಪ್ರತಿ ನಡೆ ನುಡಿಯಲ್ಲೂ ಕೂಡ ನಿಮ್ಮ ಸಿಂಪತಿ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ, ನಿಮ್ಮ ಎದುರಿಗೆ ಇತರರನ್ನು ದೂರುತ್ತಾ ನಿಮಗೆ ಖುಷಿಪಡಿಸಲು ವೃಥಾ ಪ್ರಯತ್ನಿಸುತ್ತಾರೆ, ಹಾಗು ನಿಮ್ಮ ಪ್ರತಿ ಬೆಳವಣಿಗೆಯನ್ನೂ ಕೆಟ್ಟ ಕುತೂಹಲದಿಂದ ಗಮನಿಸಿ ತಮ್ಮ ಅಭಿಪ್ರಾಯವನ್ನು ಪರೋಕ್ಷವಾಗಿ ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿರುತ್ತಾರೆ ಹಾಗು ನಿಮ್ಮ ಎದುರಿಗೆ ಮಾತ್ರ ನೀವು ಏನೇ ಮಾಡಿದರೂ ಸರೀ ಎಂದು ಹೊಗಳುತ್ತಾರೆ! ಅಪ್ಪಿ ತಪ್ಪಿ ನೀವೆಲ್ಲಾದರೂ ನಿಮ್ಮ ಕಾರ್ಯದಲ್ಲಿ ಎಡವಿ ಮನಸ್ಸಿಗೆ ನೋವಾದರೆ ಆ ನೋವನ್ನು ನಿಮಗೆ ಅರಿವಿಲ್ಲದಂತೆಯೇ ಇಮ್ಮಡಿಗೊಳಿಸುತ್ತಾರೆ, ಆದರೆ ವಿಪರ್ಯಾಸ ಎಂದರೆ ತುಂಬಾ ಸಲ ನಾವಿದನ್ನು ಗಮನಿಸುವ ಗೋಜಿಗೇ ಹೋಗಿರುವುದಿಲ್ಲ. ಆದರೆ ನೆನಪಿರಲಿ ಇವನ್ನೆಲ್ಲ ಮಾಡುವವರು ಹೊರಗಿನವರಲ್ಲ, ಕೇವಲ ನಿಮ್ಮ ಅಕ್ಕ ಪಕ್ಕದವರು, ಸಹೋದ್ಯೋಗಿಗಳೂ , ಅಥವಾ ನಿಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡ ನೀವು ಅವರನ್ನು ಆಪ್ತರು ಎಂದು ನಂಬಿದ ಹಿತಶತ್ರುಗಳು
ಇಂತಹ ವಾಸನೆ ನಿಮ್ಮ ಮೂಗಿಗೆ ಬಡಿಯಿತೋ ತಕ್ಷಣಕ್ಕೆ ಎಚ್ಚೆತ್ತುಕೊಳ್ಳವುದು ಎಲ್ಲ ರೀತಿಯಿಂದಲೂ ಕ್ಷೇಮ, ಕಾರಣ ನೀವು ತುಂಬಾ ಆಳಕ್ಕೆ ನಂಬಿದ ಒಬ್ಬ ಗೆಳೆಯನೋ, ಗೆಳತಿಯೋ, ಬಂಧುವೋ, ಸಹೋದ್ಯೋಗಿಯೋ ಈ ಗುಂಪಿಗೆ ಸೇರಿದವರೂ ಎಂದು ಮನಗಂಡ ತಕ್ಷಣ ಮನಸ್ಸಿಗೆ ತುಂಬಾ ನೋವಾದರೂ ಖಂಡಿತ ಮತ್ತೊಬ್ಬರ ಬಳಿ ಇದನ್ನು ಚರ್ಚಿಸದೆ ಅಂತಹ ಸವತಿ ಮತ್ಸರದ ಮನಸ್ಥಿತಿಯವರ ಸಂಗದಿಂದ ಎದ್ದು ನಡೆದುಬಿಡಿ.
ಆಪ್ತವಲಯದಲ್ಲಿ ಇರುವಂತಹ ಹಿತಶತ್ರುಗಳನ್ನು ಹೊರತುಪಡಿಸಿ ಮತ್ತೂ ಒಂದು ವರ್ಗವಿದೆ, ಅವರೆಂದರೆ ನಿಮ್ಮನ್ನು ಕಣ್ಣಲ್ಲೇ ದೂರದಿಂದ ಗಮನಿಸುತ್ತಾ ನಿಮ್ಮ ಬೆಳವಣಿಗೆಯ ಬಗ್ಗೆ ಊರಿಗೆಲ್ಲ ಗಾಸಿಪ್ ಮೂಲಕ ಅನುಮಾನ ಹುಟ್ಟುಹಾಕುವವರು. ಒಬ್ಬ ವ್ಯಕ್ತಿ ಹಣ ಮಾಡಿದ್ದರೆ ಯಾರನ್ನೋ ಮೋಸ ಮಾಡಿದನೆಂದೂ, ಅಧಿಕಾರಕ್ಕೆ ಏರಿದನೆಂದರೆ ಲೋಲುಪತನಕ್ಕೆ ಸಿಕ್ಕ ಪ್ರತಿಫಲ ಎಂದೂ ಅಥವಾ ಮನೆ ಕಟ್ಟಿದರೆ ಯಾರನ್ನೋ ಮುಳುಗಿಸಿದ ದುಡ್ಡು ಎಂದು ತಮಗೆ ಇಷ್ಟ ಬಂದ ರೀತಿ ಕಥೆ ಕಟ್ಟಿ ಪ್ರಚಾರ ಮಾಡುತ್ತಿರುತ್ತಾರೆ, ಇದು ಒಂದು ರೀತಿಯ ಗೀಳು, ಅವರಿಗೆ ಕೊಡುವ ವಿಘ್ನ ಸಂತೋಷ! ಆದರೆ ನೆನಪಿರಲಿ ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೇ ಎಷ್ಟು ಶ್ರಮ, ತ್ಯಾಗ ಅಥವಾ ತಪಸ್ಸು, ನಿದ್ದೆಗೆಟ್ಟ ರಾತ್ರಿಗಳು, ಅವನನ್ನು ಆ ಮಟ್ಟಕ್ಕೆ ಏರಿಸಿರುತ್ತದೆ ಎನ್ನುವುದು ಕೇವಲ ಎತ್ತರಕ್ಕೆ ಏರಿರುವವರಿಗೆ ಮಾತ್ರ ಅರಿವಿರುತ್ತದೆಯೇ ವಿನಃ ಇತರರಿಗಲ್ಲ!
ಇನ್ನು ನಾವು ಅರಿಯಬೇಕಾದ ಬಹಳ ಮುಖ್ಯ ವಿಚಾರ ಎಂದರೆ ಇಂತಹ ಸಂದರ್ಭದಲ್ಲಿ ನಮ್ಮ ಕಿವಿಗೆ ಇಂತಹ ವಿಚಾರ ಬಿದ್ದಾಗ ಕೇವಲ ಮುಗುಳ್ನಕ್ಕು ಮುನ್ನಡೆಯಬೇಕೇ ವಿನಃ ಅಂತಹವರಿಗೆ ಅಥವಾ ಅಂತಹ ಸುದ್ದಿ ತಲುಪಿಸಿದವರಿಗೆ ವಿವರಣೆ ಕೊಡಲು ಹೋಗಬಾರದು!  ಜಸ್ಟ್ ಇಗ್ನೋರ್ ದೆಮ್! ಕಾರಣ ನಿಮ್ಮ ಬಗ್ಗೆ ಯಾರೋ ಮಾತನಾಡುತ್ತಿದ್ದಾರೆ ಎಂದರೆ ಅದರರ್ಥ ನೀವು ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೀರಿ ಎಂದು! ಇಂತಹ ಸಂದರ್ಭದಲ್ಲಿ ಒಂದು ಸಣ್ಣ ಮುಗುಳ್ನಗೆಯ ದೃಷ್ಟಿ ಬೀರಿ ಮುನ್ನಡೆಯುತ್ತಿರಬೇಕು.
ಬದುಕಿನ ವಿವಿಧ ಹಂತಗಳಲ್ಲಿ ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ಆಗಿಯೇ ಇರುತ್ತದೆ, ಕಾರಣ ನಾವು ಬದುಕುತ್ತಿರುವುದು ಸಮಾಜದ ನಡುವೆಯೆ ಅಲ್ಲವೆ?  ಬೇಡವೆಂದರೂ ಹೊಟ್ಟೆಕಿಚ್ಚಿನ ಮಂದಿ ಸಿಗುತ್ತಲೇ ಇರುತ್ತಾರೆ, ಆದರೆ ಅಂತಹವರ ಅಸಹನೆಗೆ ಕಾರಣವಾದ ನಿಮ್ಮ ಯಶಸ್ವೀ ಸಾಧನೆಯ ಹಾದಿಯನ್ನು ಬದುಕಿನ ರಹದಾರಿ ಮಾಡಿಕೊಂಡು ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಬೇಕೇ ವಿನಃ ಮತ್ತೊಬ್ಬರ ಹೊಟ್ಟೆಕಿಚ್ಚಿಗೆ ಆಹಾರವಾಗಿ ನಮ್ಮ ಸಾಧನೆ ಎಂದಿಗೂ ಕುಂಟಿತವಾಗಬಾರದು.
ಏನಂತೀರಿ?
-ಹೆಚ್. ಆರ್. ಪ್ರಭಾಕರ್

Friday, March 8, 2013

ಸುಳಿ

ಕನಸುಗಳ ಬೆನ್ನೇರಿ ವಾಸ್ತವದ ಅಡಿಯಲ್ಲಿ ಉತ್ಸಾಹದ ಉತ್ತುಂಗದಲಿ ತಣ್ಣನೆಯ ಗಾಳಿಯಲಿ ನಿನ್ನೆಡೆಗೆ ನೋಡುತ್ತಾ ಮುಂಗುರುಳ ಅಂಗಳದಲಿ ಬಿಸಿಯುಸಿರ ಬಂಧನದಲಿ ಆಂತರ್ಯದ ಅಂಕೆಯಲಿ ತಂಪೆರೆವ ನಿನ್ನ ನೋಟ ಬೀಳಿಸಿತೆನ್ನ ಪ್ರೀತಿಯೆಂಬ ಆ ನಿನ್ನ ಕೆನ್ನೆಯ ಗುಳಿಯಲ್ಲಿ ಬಿದ್ದು ಭಾವ ಪರವಶನಾಗಿ ಅರ್ಪಿಸಿಕೊಂಡಿದ್ದೇನೆ ನನ್ನನು ನಾನೇ ನಿನ್ನೆಡೆಗೆ ....!!!! -ಹೆಚ್. ಆರ್. ಪ್ರಭಾಕರ್

Friday, January 11, 2013

ನಾನು ...ಮತ್ತು ನಾನೂ ...........

ಬದುಕಿನ ಬಂಡಿ ಸಾಗುತ್ತಿದೆ ಸಾಗುತ್ತಿದೆ ಪ್ರತಿ ನಿತ್ಯ ಸ್ವಾರ್ಥ ದೆಡೆಗೆ ಅದು ಮನುಷ್ಯತ್ವದ ಮರೀಚಿಕೆಯಾ ಪ್ರೀತಿಯ ಅದೃಶ್ಯವಾ ನಂಬಿಕೆಗೆ ದ್ರೋಹವಾ ಉತ್ತರವಿಲ್ಲದ ಪ್ರಶ್ನೆಗಳು ಏನಾದರು ಸರಿ ನಾ ಸುಖಿಯಾಗಬೇಕು ಎಂಬ ಹಂಬಲವಾ ಪರ ಚಿಂತೆ ಎನಗೇಕೆ ಎಂಬ ವೇದಾಂತವಾ ಯಾರು ಏನಾದರೇನು ಎಂಬ ಭಂಡತನವಾ ಉತ್ತರವಿಲ್ಲದ ಪ್ರಶ್ನೆಗಳು... ಹುಟ್ಟಿನಿಂದಾ ಸಾವಿನ ವರೆಗೆ ಬಾಲ್ಯದಿಂದ ವ್ರುಧ್ಹಪ್ಯದ ವರೆಗೆ ಪ್ರತಿ ಕ್ಷಣ ತನ್ನ ವಿಶ್ವರೂಪ ತೋರುತ್ತಿದೆ ಈ ಸ್ವಾರ್ಥ ಇದು ಮನುಷ್ಯನ ಅತಿರೆಖವಾ ಆಸೆಬುರುಕುತನದ ಪರಮಾವಧಿಯಾ ಕ್ರೌರ್ಯದ ಪರಾಕಷ್ಟೇಯಾ ಉತ್ತರವಿಲ್ಲದ ಪ್ರಶ್ನೆಗಳು ಜೀವರಾಶಿಗಳಲ್ಲಿ ತಾನೇ ಶ್ರೇಷ್ಠ ಎಂದು ಬೀಗುವ ಅಹಂಭಾವ ಒಂದು ಕಡೆ ಎನಗಿಂತ ಬುದ್ದಿಜೀವಿಯಿಲ್ಲ ಎಂದು ತೋರ್ಪಡಿಸುವ ಕಾತುರ ಮತ್ತೊಂದೆಡೆ ಇವೆರಡರ ನಡುವೆ ಮತ್ತದೇ ಲೋಲುಪತನ ಅದೇ ನಿಕೃಷ್ಟತೆ ಅದೇ ಎಲ್ಲವೂ ತನಗೇ ಬೇಕೆಂಬ ಹಟಮಾರಿತನ ಇದಕ್ಕೆ ಕೊನೆ ಉಂಟಾ ಮತ್ತದೇ ಉತ್ತರವಿಲ್ಲದ ಪ್ರಶ್ನೆಗೆಳು......!!!!!!!!! -ಹೆಚ್.ಆರ್. ಪ್ರಭಾಕರ್

Thursday, April 26, 2012

ನೀನು ನಾನು ಮತ್ತು ಮಳೆ.......! ಜೋರು ಮಳೆಯ ಕಂಡು ನೆನಪಾದೆ ಗೆಳತಿ ಅಂದು ನಾವಿಬ್ಬರು ಜೊತೆ ಜೊತೆಗೆ ಹೆಜ್ಜೆ ಹಾಕಿದ್ದು ಇದೆ ಬೇಸಗೆ ಮಳೆಯಲ್ಲಿ ನನಗಿನ್ನು ಚಂದ ನೆನಪಿದೆ ನೀ ಅಂದು ಹೇಳಿದ್ದು ಇಂದು ಮಳೆ ಬಂದೆ ಬರುವುದೆಂದು ನಿನ್ನ ಮಾತು ನಿಜವೇ ಆಯಿತಲ್ಲ ಗೆಳತಿ ಇಳೆ ತಂಪಾಯಿತು ಅಂದು ಮಳೆಯಲ್ಲಿ ಅಂದು ನಡೆದಷ್ಟು ನಮಗೆ ಜಗತ್ತಿನ ಅರಿವೇ ಇರಲಿಲ್ಲ ತುಂತುರು ಮಳೆಯ ಆಸ್ವಾದಿಸುವ ಆ ನಮ್ಮ ಮನಸ್ತಿತಿ ಕಂಡು ಜನ ನೋಡುತ್ತಲೇ ಇದ್ದರು ನಮ್ಮತ್ತ ಆದರು ನಮಗೆಲ್ಲಿತ್ತು ಅವರತ್ತ ಗಮನ...? ಎಲ್ಲ ಮಳೆಯಲು ನನ್ನ ಪದೇ ಪದೇ ಕಾಡುವುದು ನೀನೆ ನಂತರ ಮಧುರ ನೆನಪುಗಳ ನೆನಪಿಸುವುವಳು ನೀನೆ ... ಬೇಸಗೆ ಮಳೆಯ ಜೊತೆ ಆರಂಭವಾದ ನಮ್ಮ ಬೆಸುಗೆ ಅದ್ಬುತ ವರ್ಷಧಾರೆ ... ನಾ ಇಳೆ ನೀ ಮಳೆ ಇದು ನಿರಂತರ ಸಮ್ಮಿಲನ...! -ಹೆಚ್.ಆರ್.ಪ್ರಭಾಕರ್

Monday, December 19, 2011



ಕೆಲವೇ ದಶಕಗಳ ಈ ಬದುಕಲ್ಲಿ
ಸಾವಿರ ಸಾವಿರ ಅನುಭವಗಳು
ಕೆಲವು ಸಿಹಿ ಕೆಲವು ಕಹಿ
ಆದರೂ ....
ಈ ಬದುಕು ನಮ್ಮದೇ

ಕೆಲವೊಮ್ಮೆ ಚಿಂತೆ
ಕೆಲವೊಮ್ಮೆ ಸಂತಸ
ಕೆಲವೊಮ್ಮೆ ದುಖದ ಒಡಲು
ಆದರೂ ....
ಈ ಬದುಕು ನಮ್ಮದು

ಬದುಕಿನ ಪಯಣದಲಿ
ಒಮ್ಮೊಮ್ಮೆ ಮೂಡುವ ಪ್ರಶ್ನೆ
ಇಲ್ಲಿ ಯಾರು ನಮ್ಮವರು ಯಾರು ಇತರರು.?
ಆದರೂ....
ಈ ಬದುಕು ನಮ್ಮದು

ಆಧುನಿಕತೆಯ ಗುಂಗಿನಲಿ
ಸಂಬಂಧಗಳು ಕುಸಿದು
ಕಂದಕ ಹೆಚ್ಚಾದರೂ ಸರಿ
ಆದರೂ....
ಈ ಬದುಕು ನಮ್ಮದು

ಅರಿಷಡ್ವರ್ಗಗಳ ಗೆದ್ದು
ಸಂತನಾಗುವ ಹಂಬಲ ಕೆಲವರಿಗೆ
ಇರುವ ಬದುಕಿನಲಿ ಎಲ್ಲ ಸುಖ
ಭೋಗಗಳ ಸವಿಯುವ ತುಡಿತ ಹಲವರಿಗೆ
ಆದರೂ...
ಈ ಬದುಕು ನಮ್ಮದು

ಕಾಲ ಚಕ್ರ ತಿರುಗಿ
ಭುವಿಯಲ್ಲಿ ಬದಲಾವಣೆಯ ಗಾಳಿ ಬೀಸಿದಾಗ
ಯಾಂತ್ರಿಕ ಬದುಕಿಗೆ
ಸಂಬಂಧಗಳ ಸಿಂಚನವಾಗಿ
ಆತ್ಮೀಯತೆಯ ಸೊಗಡು ಪಸರಿಸಿದಾಗ
ಬದುಕಿನ ಹಾದಿ ಬದಲಾದರೆ
ಆಗಲು ಈ ಬದುಕು ನಮ್ಮದೇ...!!!!

-ಹೆಚ್.ಆರ್.ಪ್ರಭಾಕರ್

Friday, December 16, 2011

Identity Crysis...ಮತ್ತು ಗೀಳು....!!!!



ನನ್ನೊಬ್ಬಳು ಗೆಳತಿ ಇದ್ದಳು..ಅವಳು ಹೀಗೆ ಮಾತಾಡುತ್ತ ಇರುತ್ತಿದ್ದಳು..

ಹೇಯ್..ನಿನಗೆ ಗೊತ್ತಾ ಮೊನ್ನೆ ಕಾಲೇಜಿಂದ ಮನೆಗೆ ಹೋಗ್ತಾ ಇದ್ದನಾ ಯಾರೋ ಒಬ್ಬ ಹುಡುಗ ಹಿಂದೆ ಹಿಂದೆ ಬರ್ತಾ ಇದ್ದ
ಸ್ವಲ್ಪ ಹೊತ್ತು ಹಾಗೆ ಫಾಲೋ ಮಾಡಿ ಹತ್ತಿರ ಬಂದ ಕಣೋ..ಬಂದವನೇ...
ಡೈರೆಕ್ಟ್ ಆಗಿ ಪ್ರಪೋಸ್ ಮಾಡಿ ಬಿಡೋದ..
ನನಗೆ ಸಿಟ್ಟು ಬಂತು..ಫುಲ್ ಕ್ಲಾಸ್ ತೊಗೊಂಡೆ..
ಗೊತ್ತ...! ಅದು ಹೇಗೆ ಅಷ್ಟು ಬೇಗ ಲವ್ ಆಗಿ ಬಿಡುತ್ತೆ..
.....
ಈ ತರ ಒಂದಲ್ಲ ಎರಡಲ್ಲ ಕಣೋ..ಎಷ್ಟು ಜನಾ..ಗೊತ್ತ...!!!???

ಇನ್ನೊಬ್ಬ ಗೆಳೆಯನಿದ್ದ ....
ಮಗಾ ನಿನಗೆ ಒಂದು ವಿಷ್ಯ ಗೊತ್ತ
ಏನು..?
ಮೊನ್ನೆ ನಿಮ್ಮ ಮನೆಗೆ ಬರ್ತಾ ಇದ್ದನಾ ..? ಪಕ್ಕದ ಕ್ರಾಸಿನ ನಾಲ್ಕನೇ..ಮನೆಯಲ್ಲಿ ಒಬ್ಬಳು ಹುಡುಗಿ ಇದಾಳೆ ಗೊತ್ತ
ಇಲ್ಲ ಗೊತ್ತಿಲ್ಲ ಹೇಳು..
ಎಷ್ಟು ಸುಂದರವಾಗಿದ್ದಾಳೆ..ಅಂದರೆ..ಅಬ್ಬಬ್ಬಾ...ಅಷ್ಟು ಚೆಂದ ಹುಡುಗಿಯನ್ನು..ನಾನು ನೋಡಿರಲೇ ಇಲ್ಲ..! ಗೊತ್ತ...
ಹೌದಾ..
ಸರಿ ನಡಿ ನೋಡೋಣಾ ...ಅಂತ ಹೊರಟೆವು..ಅವಳು ಆಗ ತಾನೇ ಮನೆಯಿಂದ ಹೊರಗೆ ಬಂದು ತನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಾ ಇದ್ದಳು..
ನೋಡಿದೆ..
ಇವನಿಗೆ ಹೇಳಿದೆ...ನಿನಗೆ ಕಣ್ಣು ಸರಿ ಇಲ್ವಾ..? ಅಂತ...
ಯಾಕೆ..ಅಂದ..
ಇವಳ ಸೌಂದರ್ಯ ಅಷ್ಟು ಹೊಗಳಿದೆ ಅಲ್ವಾ..ಅದಕ್ಕೆ..
..ಇಲ್ಲ ಕಣೋ ಆಗಲೇ ನೋಡಿದಾಗ ಬೇರೆ ಡ್ರೆಸ್ ನಲ್ಲಿ ಇದ್ದಳು..ಅಷ್ಟು ಚೆನ್ನಾಗಿ ಕಾಣುತ್ತ ಇದ್ದಳು..ಅಂದ..!
This is called escapism...!
................................................
ಇನ್ನು ಕೆಲವರು ಇರ್ತಾರೆ...ಅವರಿಗೆ ಒಂದು ಸಣ್ಣ ಬೆಕ್ಕು ಕಂಡರೂ...ಹುಲಿಯ ನೋಡಿದ ರೀತಿ ಕಥೆ ಹೇಳುತ್ತಾರೆ..
ಆ ಬೆಕ್ಕಿಗೆ..ಇಷ್ಟು ಉದ್ದ ಮೀಸೆ ಇತ್ತು ಗೊತ್ತ..ಇನ್ನು ಅದರ ಕಲರ್ ನೋಡಬೇಕಿತ್ತು..ನೀನು..ಪಟ್ಟೆ ಪಟ್ಟೆ ಇದ್ದು..ಹುಲಿ ತರಾ ಇತ್ತು..
ಅಂತ ಪುಂಖಾನು ಪುಂಖವಾಗಿ...ಕಥೆ..ಹೊಡೀತಾ ಇರ್ತಾರೆ..
...........
ಇನ್ನು ಕೆಲವರು ಇರ್ತಾರೆ..ನಾನು ನನ್ನ ಹೆಂಡತಿಯನ್ನು ಎಷ್ಟು ಕಂಟ್ರೋಲ್ ನಲ್ಲಿ ಇಟ್ಟಿದೀನಿ ಅಂದ್ರೆ...ನೋಡ್ಬೇಕು..ನೀನು...
ಅಂತಿರ್ತಾರೆ...
ಅಲ್ಲಿ ಹೋದರೆ ನಿಜ ಸ್ಥಿತಿ ..ಇದಕ್ಕೆ ತದ್ವಿರುದ್ದ ಆಗಿರುತ್ತದೆ..!
..............
ಇನ್ನು ಕೆಲವರು ಇರ್ತಾರೆ..ನನ್ನ ಮಗಳು ಎಷ್ಟು ಮುದ್ದಗಿದಾಳೆ ಅಂದ್ರೆ..ನೋಡ್ಬೇಕು..ನೀನು...ಅವಳ ಮಾತು...ತುಂಟ ತನ..ಎಲ್ಲ..ಥೇಟ್..ನನ್ನ ತರಾನೆ..ಗೊತ್ತ...
ಇವರಿಗೆ..ತುಂಟ ತನದ ಗಂಧ ಗಾಳಿಯು ಇರೋಲ್ಲ..ಇನ್ನು ಮಗು ಗೆ ಹೇಗೆ ಬಂದಿರೋಕೆ ಸಾಧ್ಯ..!
...........
ನನಗೆ ಪರಿಚಯದ ಒಬ್ಬ ಆಂಟಿ ಇದ್ದರು..
ಅವರು ಪ್ರತಿ ಮಾತಿಗೂ...ಹೀಗೆ ಅನ್ನೋರು..ನನ್ನು ಕಾಲೇಜಿಗೆ ಹೋಗೋವಾಗ..ಇಡೀ ಕಾಲೇಜೆ ನನ್ನ ಹಿಂದೆ ಇರ್ತಿತ್ತು..ಗೊತ್ತ..ಎಲ್ಲ ಹುಡುಗೀರು ನನ್ನ ಹತ್ರ ಬಂದು..ಏನೆ..ನೀನು ಅಷ್ಟು ಸುಂದರವಾಗಿದ್ದೆಯ..ನಿನ್ನಿಂದ..ಇಲ್ಲಿ ನಮ್ಮನ್ನ ನೋಡೋರು..ಯಾರು ಇಲ್ಲ..ಅಂತ ಗೋಳಾಡುತ್ತ ಇರುತ್ತಿದ್ದರು ಅಂತ ಅದೆಷ್ಟು ಸಲ ಹೇಳಿದ್ದರೋ..!
.....ಇವರಿಗೆ ಈಗ ಇವತ್ತು ವರ್ಷದ ಮೇಲೆ ವಯಸ್ಸು ಸಿಕ್ಕ ಸಿಕ್ಕವರ ಹತ್ರ ಎಲ್ಲ ಈ ವಿಚಾರ ಹೇಳಿ ಖುಷಿ ಪಡ್ತಾ ಇದ್ದರು..!
.............
ಇನ್ನು ಕೆಲವು ಹುಡುಗರು ಇರ್ತಾರೆ...
ಹೇಯ್..ಏನ್ ಗೊತ್ತ ಮಗಾ..ನಿನ್ನೆ ನಾನು ಊರಿಗೆ ಹೋಗಿದ್ದನಲ್ಲ..ಅಲ್ಲಿ ನಮ್ಮ ಕಸಿನ್ ಪಕ್ಕದ ಮನೇಲಿ ಒಬ್ಬ ಹುಡುಗಿ ಇದ್ದಳು..ಕಣೋ..ನನ್ನ ನೋಡಿ ಫಿದಾ ಆಗಿ ಬಿಟ್ಟಳು..
ಕಾಳು ಹಾಕಿದ್ದೆನಿ..ಮುಂದಿನ ಸಲಾ ಹೋದಾಗ ನೋಡು ಅವಳನ್ನು ಬೀಳಿಸೆ ಬೀಳಿಸ್ತೀನಿ...ಅಂತ ಜಂಬ ಕೊಚ್ಚಿಕೊಳ್ಳುತ್ತ ಇರುತ್ತಾರೆ..ಇದರಲ್ಲಿ ಒಂದು ಪರ್ಸೆಂಟ್ ನಿಜ ಇದ್ದರೆ ತೊಂಬತ್ತೊಂಬತ್ತು ಪರ್ಸೆಂಟ್ ಸುಳ್ಳು ಇರುತ್ತೆ....!
....................

ಇನ್ನು ಕೆಲವು ಮಂದಿ ಇರ್ತಾರೆ..ಇಡೀ ಗುಂಪಿನ ಗಮನಾ ನನ್ನ ಕಡೆ ಬರಲಿ ಎಂಬ ದೃಷ್ಟಿಯಿಂದ ಅಶ್ಲೀಲ ಜೋಕುಗಳನ್ನು ಹೇಳುವುದು, ಅಶ್ಲೀಲ ಸಂಬಾಷಣೆ ಜೋರಾಗಿ ಹೇಳುವುದು..ವಿಚಿತ್ರ ಹಾವ ಭಾವಗಳು ಮಾಡುತ್ತ ಇರುವುದು..ಮಾಡುತ್ತಿರುತ್ತಾರೆ..
u just ignore..them....!
..........................................
ಮೇಲಿನ ಉದಾಹರಣೆಗಳ ಸಹಿತ ಹೇಳಬಹುದಾದ ಒಂದೇ ವಿಚಾರ ಅಂದ್ರೆ..ಅದು..Identity Crysis ಅಥವಾ ಒಂದು ತೆರನಾದ ಗೀಳು..ಅನ್ನೋ ಮಾನಸಿಕ ವ್ಯಾಧಿಯಾ ಒಂದು ಲಕ್ಷಣ . ತನ್ನ ಗುಂಪಿನಲ್ಲಿ ತಾನು ಗ್ರೇಟ್ ಅನ್ನಿಸಿಕೊಳ್ಳಬೇಕು ಅನ್ನುವ ಹಪ ಹಪಿಯಲ್ಲಿ ಪುಂಖಾನು ಪುಂಖವಾಗಿ ಸುಳ್ಳು ಹೇಳುತ್ತಾ ಇರುತ್ತಾರೆ..ಈ ಸುಳ್ಳು ಎಷ್ಟು ಅತಿರೇಕಕ್ಕೆ ಹೋಗುತ್ತಿರುತ್ತೇ ಅಂದರೆ..ಒಮ್ಮೊಮ್ಮೆ ಅದು ಸಿವಿಯರ್ ಆಗಿ ಮಾನಸಿಕ ಖಾಯಿಲೆ ಯಾಗಿ ಕೂಡ ಹೊರ ಹೊಮ್ಮುತ್ತದೆ..ಬರೀ ಬ್ರಮಾ ಲೋಕದಲ್ಲಿ ಬದುಕನ್ನ ನಡೆಸುವಂತೆ..ಮಾಡುತ್ತದೆ..ಅಂತಹ ಮಂದಿಗೆ ವಾಸ್ತವ ಅರ್ಥ ಆಗುವುದೇ ಇಲ್ಲ..!

ಒಟ್ಟಾರೆ ಶತಾಯ ಗತಾಯ ಎಲ್ಲರ ಗಮನ ನನ್ನ ಕಡೆ ಸೆಳೆದು ನಾನು Centre of Attraction ಆಗಬೇಕು ಎಂಬ ಗೀಳಿನ ಲಕ್ಷಣ ಇದು..ಅದು ಗಾಸಿಪ್ ಮಾಡುವುದರ ಮೂಲಕ ಆಗಿರಬಹುದು..ತಮ್ಮನು ತಾವು ಗಾಸಿಪ್ ಗೆ ಒಳಪಡಿಸಿ ಕೊಳ್ಳುವುದು..ಇವೆಲ್ಲವೂ ಕೂಡ..identity crysis ನ ಒಂದೊಂದು ಮುಖ ಅಷ್ಟೇ..!

ನಿಮ್ಮ ಸುತ್ತ ಮುತ್ತಲು, ನಿಮ್ಮ ಗೆಳೆಯರ/ಗೆಳತಿಯರ ಬಳಗದಲ್ಲಿ ಇಂತಹ ಮಂದಿ ಇದ್ದರೆ....just ignore...!.


ಏನಂತೀರಿ...?

-ಹೆಚ್.ಆರ್.ಪ್ರಭಾಕರ್..

Monday, December 5, 2011

''ರೋದನ''




ಚಿಂತೆ ಯಾಗಿದೆ ಬದುಕಿಗೆ
ಮುಂದೇನೋ ಎಂಬ ಆತಂಕ ಕಾಡಿದೆ
ನಾವು ನಂಬಿ ಬದುಕಿದ ಆ ಭೂ ತಾಯಿಯಿಂದ
ನಮ್ಮನ್ನು ಬೇರ್ಪಡಿಸುವ ನಿರಂತರ ಹುನ್ನಾರ
ಇದಕಿಲ್ಲವೇ ಕೊನೆ..

ಅಪ್ಪ ಅಮ್ಮ ನನಗೆ ಕಲಿಸಿದ್ದು ಕೃಷಿಯನ್ನೇ
ಅಣ್ಣ ತಮ್ಮ ಹೆಗಲು ಕೊಟ್ಟದ್ದು ಕೃಷಿಗೆ
ಬಂದು ಬಾಂಧವರು ಕೈ ಹಿಡಿದು ನಡೆಸಿದ್ದು ಇತ್ತ
ಸಂಧ್ಯಾ ಕಾಲ ಸಮೀಪಿಸಿದರು
ನಾ ಇರುವುದು ಇಲ್ಲೇ ಪ್ರಾಣ ಬಿಡುವುದು ಇಲ್ಲೇ

ಕೈಯಲ್ಲಿ ಹಣವಿಲ್ಲದಿದ್ದರು ನಾ ಬದುಕು ಸಾಗಿಸಿದೆ
ಮನೆಯಲ್ಲಿ ದವಸ ಇದ್ದಾರೆ ಸಾಕು ಅದೇನೋ ಧೈರ್ಯ
ಆ ಧೈರ್ಯವೇ ಇಂದಿನವರೆಗೂ ಕೈ ಹಿಡಿದು ನಡೆಸಿದ್ದು
ಅದರಿಂದಲೇ ಮಕ್ಕಳಿಗೆ ಅಕ್ಷರ ಕಲಿಸಿದ್ದು

ಇಂದು ನನ್ನ ಮಗ ಹೇಳಿದ ನಾ ನಗರಕ್ಕೆ ಒಲಸೆ ಹೋಗುವೆನೆಂದು
ಅಲ್ಲೇ ಒಂದು ಕೆಲಸಕ್ಕೆ ಸೇರಿ ಕಾರು ಬೈಕು ಖರೀದಿಸಿ
ನಿನ್ನ ಸಾಕುವನೆಂದು
ಇದೆಂತಹ ಶೋಕಿಯ ಗೀಳು ಇವನಿಗೆ
ಅಲ್ಲಿ ಮತ್ತೊಬ್ಬರ ಮುಂದೆ ಕೈ ಚಾಚುವುದು
ಮಮ್ಮಲ ಮರುಗಿದೆ

ಮಗ ಹೊರಟೆ ಬಿಟ್ಟ ನನ್ನ ಮಾತು ಕೇಳದೆ
ಅಲ್ಲಿ ಹೋಗಿ ಸೇರಿದನಂತೆ ಯಾವುದೋ ಆಫೀಸಿಗೆ
ವರುಷ ಗಳು ಕಳೆಯಿತು,
ಆರಂಬದಲ್ಲಿ ಆಗಾಗ ಬರುತ್ತಿದ್ದ..ಈಗ ವರುಷಕ್ಕೆ ಒಮ್ಮೆ ಬರುವುದು ದುರ್ಲಬ
ದುಖ ಉಮ್ಮಳಿಸಿ ಬರುತಿದೆ

ಹೆತ್ತವರ ಮರೆತ ದುಖ ಒಂದೆಡೆ ಆದರೆ
ಊರನ್ನು ಮರೆತ ದುಖ ಮತ್ತೊಂದೆಡೆ
ಅವನಿಗೆ ಬದುಕು, ಸಂಸ್ಕೃತಿ ಕಲಿಸಿದ
ಹಳ್ಳಿ ಇಂದು ಅವನಿಗೆ ಅಪಥ್ಯ
ಸಿಟಿಯ ಮೋಜು ಅವನಲ್ಲಿ ಮರೆಸಿದೆ ಬಾಂಧವ್ಯ

ಮತ್ತೆ ಕೇಳಿದೆ ಮಗನ ನೀ ಆಗಾಗ ಬಾ ಎಂದು
ನಾ ಆ ಹಳ್ಳಿಗೆ ಬರಲು ಮನಸಿಲ್ಲ
ನೀ ಇಲ್ಲಿ ಬಂದರೆ ನಿನ್ನ ಚೆನ್ನಾಗಿ ನೋಡಿಕೊಳ್ಳುವೆ
ನಾ ಹೇಗೆ ಹೋಗಲಿ ಈ ಭೂ ತಾಯಿಯ ಬಿಟ್ಟು
ನಾ ಹೇಳಿದೆ
ನನ್ನ ಬದುಕಿಲ್ಲೇ ಸಾವು ಇಲ್ಲೇ
ಬರುವುದಾದರೆ ನೀ ಆಗಾಗ ಬಾ ಇಲ್ಲವಾದರೆ ನಿನ್ನಷ್ಟಕ್ಕೆ ನೀನಿರು
ಮನಸು ರೋಧಿಸುತಿದೆ ಮತ್ತೆ ಮತ್ತೆ
ಯಾರ ಬಳಿ ಹೇಳಲಿ ನಾ ನನ್ನ ನೋವು..?

-ಹೆಚ್.ಆರ್.ಪ್ರಭಾಕರ್

Wednesday, November 30, 2011

''ಮೌನ''



.........

ಇನ್ನು ಯಾಕೆ ಅವಳು ಕರೆ ಮಾಡಲಿಲ್ಲ.
ನಾನು ನನ್ನ ಮನದ ಇಂಗಿತವನ್ನು ಅವಳಿಗೆ ಹೇಳಲು ತುದಿಗಾಲ ಮೇಲೆ ನಿಂತು ಚಡಪಡಿಸುತ್ತಿದ್ದೆ. ಅವಳು ಹೇಳಿದ್ದಳು ಆಫೀಸಿನಲ್ಲಿ ಕೆಲಸ ಜಾಸ್ತಿ ಇದೆ ಫ್ರೀ ಮಾಡಿಕೊಂಡು ಕರೆ ಮಾಡುತ್ತೇನೆ ಅಂತ. ನಾನು ಆಯಿತು..ಅಂತ ಹೇಳಿ..ಕಾತರದಿಂದ ಕಾಯುತ್ತಿದ್ದೆ.

ಅವಳ ಕರೆ ಬಂತು...
ನಾಳೆ ಭೇಟಿ ಮಾಡೋಣ ಬೆಳಿಗ್ಗೆ ೧೧ ಗಂಟೆಗೆ ಲೇಕ್ ವ್ಯೂ ಪಾರ್ಕ್ ಹತ್ತಿರ ಬಾ ಅಂದಳು. ನಾನು ಓ.ಕೆ. ಅಂದೇ.
ಅವಳ ಕರೆ ಬಂದಾಗ ಮಧ್ಯಾನ ೪.೩೦ ದಾಟಿತ್ತು...ಸಂಜೆ ಆಗುತ್ತಿದ್ದಂತೆ...ಸಮಯವೇ ನಿಂತಂತೆ ಭಾಸವಾಗುತ್ತಿತು. ನನ್ನ ಬದುಕಿನ ಬಹಳ ಮುಖ್ಯವಾದ ಘಳಿಗೆ ನಾಳೆ ೧೧ ಗಂಟೆ. ಆ ಯೋಚನೆ ಎಷ್ಟರ ಮಟ್ಟಿಗೆ ನನ್ನ ಆವರಿಸಿತ್ತು ಅಂದರೆ ರಾತ್ರಿ ಊಟವಿರಲಿ ನಿದ್ದೆಯೂ ಹತ್ತಲಿಲ್ಲ. ಅದೆಷ್ಟು ಸಲ ಎದ್ದು ಸಮಯ ನೋಡಿದೆನು...ಇನ್ನು ಬೆಳಗಾಗಲಿಲ್ಲ...ಛೆ..ಸೂರ್ಯ ಇಂದು ತುಂಬಾ ತಡವಾಗಿ ಬರುವ ಹಾಗಿದೆ...ಅಂತ..ನನ್ನಷ್ಟಕ್ಕೆ ನಾನೇ ಏನೇನೊ ಯೋಚಿಸುತ್ತ ಹಾಸಿಗೆಯ ಮೇಲೆ ನಿದ್ದೆ ಬರದೆ ಹೊರಳಾಡುತ್ತಿದ್ದೆ. ನಿದ್ದೆ ಮಾತ್ರ ಸುಳಿಯುವ ಮಾತೆ ಇಲ್ಲ. ಬೆಳಗಾಯಿತು...ಎದ್ದು...ಬಾತ್ ರೂಮಿನತ್ತ ಓಡಿದೇ ...ನನ್ನ ಕರ್ಮಕ್ಕೆ ಚಳಿ ಕೊರೆಯುತ್ತಿತ್ತು..ನೀರು ಮಾತ್ರ ಬಿಸಿ ಇರಲಿಲ್ಲ..ನಿನ್ನೆ ಸೂರ್ಯನ ದರುಷಣವೇ ಆಗದೆ ಸೋಲಾರ್ ಕೆಲಸ ಮಾಡಿರಲಿಲ್ಲ. ಕಣ್ ಮುಚ್ಚಿಕೊಂಡು ಕೊರೆಯುತ್ತಿದ್ದ ತಣ್ಣೀರು ಮೈಮೇಲೆ ಸುರಿದುಕೊಂಡೆ. ಮೈಯೆಲ್ಲಾ ಗಡ ಗಡ ನಡುಗಲು ಶುರು ಆಯಿತು..ಮತ್ತೊಮ್ಮೆ..ಅದೇ ಕೆಲಸ ಮಾಡಿದೆ..ಚಳಿ ....ಚಳಿ ಚಳಿ ತಾಳೆನು ಈ ಛಳಿಯ ಅಹ...ಹಾಡು ನೆನಪಾಯಿತು..ಅಂತು ಇಂತೂ ತಣ್ಣೀರು ಸ್ನಾನ ಮುಗಿದಿತ್ತು..ನನ್ನ ದೇಹ ನನ್ನ ಕಂಟ್ರೋಲ್ ನಿಂದ ಹೊರಗಿತ್ತು...

ಯಾವ ಬಟ್ಟೆ ಹಾಕೊಳೋದು..ಹುಡುಕಿದೆ ಕಬೋಡ್ ಎಲ್ಲ ಚಲ್ಲ ಪಿಲ್ಲಿ ಮಾಡಿಟ್ಟೆ...ಕೊನೆಗೆ ನೀಲಿ ಜೀನ್ಸ್ ಮತ್ತು ಟಿ ಶರ್ಟ್ ಹಾಕಿಕೊಂಡು ತಲೆಯನ್ನು ತಿದ್ದಿ ತೀಡಿಕೊಂಡು..ಹೊರಟೆ..ಗಂಟೆ..ಇನ್ನು ಒಂಬತ್ತು..
ಇಷ್ಟು ಬೇಗ ಹೊರಟು ಏನು ಮಾಡುವುದು..ತಿಳಿಯಲಿಲ್ಲ..ಆದರು..ಹೊರಟೆ..ಹೋಗಿ ಪಾರ್ಕ್ ಹತ್ತಿರ ಬೈಕ್ ಪಾರ್ಕ್ ಮಾಡಿ ಒಳಗೆ ಅಡಿ ಇಟ್ಟೆ..ಅದು ಬಲಗಾಲು..!

ಎರಡು ಗಂಟೆ ಕಳೆಯುವ ಹೊತ್ತಿಗೆ ಎರಡು ಯುಗ ಕಳೆದಂತೆ ಆಯಿತು. ಪಾರ್ಕಿನ ಗೇಟಿನತ್ತ ನೋಡುತ್ತಲೇ ಇದ್ದೆ..ಅದೆಷ್ಟೋ ಹುಡುಗಿಯರು..ಹುಡುಗರು..ಬರುತ್ತಿದ್ದರು..ಹೋಗುತ್ತಿದ್ದರು..ಇವಳು ಇನ್ನು ಬಂದಿರಲಿಲ್ಲ ಅದೇ ನನ್ನ ಸಂಕಟ ವಾಗಿತ್ತು.
ಗಂಟೆ..ಹನ್ನೊಂದು ಅಯ್ಯಿತು..ಮತ್ತೆ ನೋಡಿದೆ..ಅಲ್ಲೆಲ್ಲೋ ದೂರದಲ್ಲಿ ಬಿಳಿ ಚೂಡಿದಾರ್ ..ಕಾಣಿಸಿತು..ಅವಳೇ..ಅನ್ನಿಸಿತು..ಹತ್ತಿರ ಹತ್ತಿರ ಬರುತ್ತಿದ್ದಳು...ಅವಳೇ ಆಗಿದ್ದಳು..

ನಾನು ಶತ ಪಥ..ಅಂತ ಹೆಜ್ಜೆ ಹಾಕುತ್ತಿದ್ದವನು..ಸುಮ್ಮನೆ ಅವಳನ್ನೇ ನೋಡುತ್ತಾ ನಿಂತೇ..ಜೋರಾಗಿ ಅಡಿ ಇಟ್ಟರೆ ಭೂಮಿಗೆ ನೋವಾಗುತ್ತೇನೋ ಎಂಬಂತೆ..ಹೆಜ್ಜೆ ಮೇಲೆ ಹೆಜ್ಜೆ ಇತ್ತು ನಡೆದು ನನ್ನತ್ತ ಬರುತ್ತಿದ್ದಳು. ನನ್ನ ಎದೆ ರಿಂಗಣಿಸುತ್ತ ಇತ್ತು .

ಹಾಯ್. .ಯಶಸ್..ಅಂದಳು..ನಾನು ಹಾಯ್..ಕಾವ್ಯ..ಅಂದೇ..

ಇಬ್ಬರು ಕುಳಿತು ಕೊಂಡೆವು. ನಾನು ಅವಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ..ಅವಳ ಅಂದ ಚಂದ ಹಾವ ಭಾವ ರೂಪ ರಾಶಿ ನೋಡಿ ಮಂತ್ರ ಮುಗ್ದನಾಗಿದ್ದೆ..ಶ್ವೇತ ವಸ್ತ್ರಧಾರಿಯಾಗಿ ನನ್ನ ಕಣ್ಣಿಗೆ ಅಪ್ಸರೆ ಹಾಗೆ ಕಾಣುತ್ತಿದ್ದಳು. ಅವಳ ಗುಂಗುರು ಕೂದಲು..ಗಾಳಿಗೆ ಪದೇ ಪದೇ ಹಣೆಗೆ ತಾಗುತ್ತ ಕಿವಿಗೆ ತಾಗುತ್ತ ಇದ್ದಾರೆ ಅವಳು ಮುಂಗುರುಳನ್ನು ಮತ್ತೆ ಮತ್ತೆ ಹಿಂದಕ್ಕೆ ಸರಿಸುವ ಪ್ರಯತ್ನ ಮಾಡುತ್ತಿದ್ದಳು..ಅವಳು ಸುಮ್ಮನೆ ಕುಳಿತಿದ್ದಳು..ನಾನು ಸಹ. ...???
ಅವಳು ಕುಳಿತಿರುವ ಭಂಗಿ ನೋಡಿ ಅಂದು ಕೊಂಡೆ ಸಾಕಷ್ಟು ಸಮಯ ಫ್ರೀ ಮಾಡಿಕೊಂಡೆ ಬಂದಿದ್ದಾಳೆ ಅಂತ..!

ಅವಳ ಮುಖದಲ್ಲಿ ಕುತೂಹಲ ಇತ್ತು..ನನ್ನ ಮನದಲ್ಲಿ ಆತಂಕ ಇತ್ತು..ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ..ಮಾತು..ಹೊರಡಲಿಲ್ಲ..ಅವಳು ಕೇಳಿದಳು..ಏನಾದರು..ಮಾತಾಡು..ನಾ ಮತ್ತೆ ಮತ್ತೆ ಮೌನಿಯಾದೆ. ಅವಳನ್ನು ನೋಡುತ್ತಿದ್ದರೆ ನನಗೆ ಮಾತು ಹೊರಳಲಿಲ್ಲ..ಹಾಗೆ ನೋಡುತ್ತಾ ದಿನ ದೂದಬೇಕು..ಆ ಚೆಲುವಿನ ಖನಿಯನ್ನು ಕಣ್ಣ ತುಂಬಿಕೊಳ್ಳಬೇಕು..ಮನಸು ತುಂಬಿಕೊಳ್ಳಬೇಕು..ಎಂಬ ಆಸೆ ಇತ್ತು...

ಅವಳ ಅಂದ ಚೆಂದ ರೂಪ ಲಾವಣ್ಯ ನನ್ನ ಬೇರೆಯದೇ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು..ಇಂತಹ ಸ್ನಿಗ್ಧ ಸೌಂದರ್ಯ ವತಿಯನ್ನು ನಾನು ಪ್ರಪೋಸ್ ಮಾಡಲು ಹೊರಟಿದ್ದೆನಾ..? ನನಗೆ ನಾನೇ ಮತ್ತೆ ಮತ್ತೆ ಕೇಳಿಕೊಂಡೆ...ಅವಳ ನಗುವಿನಲ್ಲಿ ಸಾವಿರ ಬಲ್ಬುಗಳ ಬೆಳಕಿತ್ತು...ಅವಳು ನಕ್ಕಾಗ ಗುಣಿ ಬೀಳುವ ಆ ಕೆನ್ನೆಗ ಅಮೃತ ದ ಅಷ್ಟು..ಶಕ್ತಿ ಇತ್ತು.ಇನ್ನೇನು ಬೇಕು ಈ ಬದುಕಿಗೆ ಭಾವ ಲೋಕದಲ್ಲಿ ತೇಲಿ ಹೋಗುತ್ತಿದ್ದೆ..

೩೦ ನಿಮಿಷವಾಯಿತು..ನಲವತ್ತು ನಿಮಿಷವಾಯಿತು..ಒಂದು ಘಂಟೆಯೂ..ಕಳೆಯಿತು..ನಾ ಮಾತಾಡಲಿಲ್ಲ......ಅವಳು ಆಗಾಗ ಮಾತಾಡುವ ಪ್ರಯತ್ನ ಮಾಡಿದಳು ...ನಾನು ಮೌನಕ್ಕೆ ಶರಣಾಗಿದ್ದೆ ....ಅವಳನ್ನ ನೋಡುವ ಭರದಲ್ಲಿ...ಯಾವುದೊ ಅವ್ಯಕ್ತ ಭಾವ ನನ್ನಲಿ ಮೂಡಿತ್ತು...
.....ಸಮಯ ಮಾತ್ರ ತನ್ನ ಪಾಡಿಗೆ ತಾನು ಮುಂದೆ ಮುಂದೆ ಓಡುತ್ತಿತ್ತು...ಕೋಮಲವಾದ ಅವಳ ಮುಖದಲ್ಲಿ ಅಸಹನೆಯ ಗೆರೆಗಳು ಕಾಣಿಸಿದವು...ನನ್ನ ಮನಸು ಕಂಪಿಸಿದಂತೆ ಆಯಿತು..ಅವಳತ್ತ ನೋಡಿದೆ..ಅವಳು ಕೋಪದಿಂದ ಮೇಲೆದ್ದಳು..ಎದ್ದವಳೇ ಮುಖ ಸಿಂಡರಿಸಿಕೊಂಡು..ಹೇಳಿದಳು..ಇಲ್ಲಿ ಬಂದು ಕುಳಿತು ಒಂದು ಘಂಟೆ ಕಳೆಯಿತು..ಹೀಗೆ ಸುಮ್ಮನೆ ಕುಳಿತು ಕೊಂಡರೆ ಪ್ರಯೋಜನವಿಲ್ಲ..ಏನೋ ಮಾತಾಡಬೇಕು ಅಂತ ಕರೆಸಿ ನೀ ಹೀಗೆ ಸುಮ್ಮನೆ ಕೂತರೆ ನಾ ಏನು ಮಾಡಲಿ...ನನ್ನ ತಾಳ್ಮೆಗೂ ಒಂದು ಮಿತಿಯಿದೆ...

ನನಗಿನ್ನೂ ಕೂರುವಷ್ಟು ತಾಳ್ಮೆಯಿಲ್ಲ...ಗುಡ್ ಬೈ..ಅಂದು ಹೊರಟಳು....

ನಾ ಈಗ ಮೌನ ಮುರಿಯಲೇ ಬೇಕಾದ ಅನಿವಾರ್ಯತೆ..ಬಂದಿತ್ತು..
ಒಂದು ನಿಮಿಷ..ಕಾವ್ಯ..
ಏನು..
ನನ್ನ ತಪ್ಪು ತಿಳಿಬೇಡ ...ನಾನು ನಿನ್ನ ಬಳಿ ಮಾತನಾಡಬೇಕೆಂದು ಕೇಳಿದಾಗ ನೀ ಒಪ್ಪಿದೆ..ಇಲ್ಲಿಯವರೆಗೂ ಬಂದೆ..ಸಂತೋಷ..ಆದರೆ ನಾ ಮೌನವಾಗಿ ಕುಳಿತು ನಿನ್ನೆಡೆಗೆ ನೋಡುತ್ತಿದೇನೆ..ಮಾತನ್ನು ಮಾತ್ರ ಆಡುತ್ತಿಲ್ಲ..ಅದಕ್ಕಾಗಿ ನೀ ಕೋಪಿಸಿಕೊಂಡು ಹೊರಟಿರುವೆ..

ಆದರೆ ನಿನಗೆ ಗೊತ್ತ ಕಾವ್ಯ..ನಾ ನಿನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ..ಅದೆಷ್ಟು ನೀ ನನ್ನ ಆವರಿಸಿಕೊಂದಿರುವೆ ಅಂದರೆ ನನ್ನ ಬದುಕಿನ ಪ್ರತಿ ಘಳಿಗೆಯಲ್ಲೂ, ಪ್ರತಿ ಕೆಲಸದಲ್ಲೂ, ಪ್ರತಿ ನೆನಪಿನನ್ನು ನೀ ಇರುವೆ. ಹಾಗಾಗಿ ನೀ ಬಂದ ಸಂಭ್ರಮವನ್ನು ನನ್ನ ಕಣ್ಣುಗಳು ಆನಂದದಿಂದ ನೋಡುತ್ತಾ ಪುಳಕಗೊಳ್ಳುತ್ತಿದ್ದವು.....

ಮತ್ತು ಒಂದು ಸ್ವಾರ್ಥ ಇತ್ತು ಕಾವ್ಯ..ನಾ ಮಾತಾಡಿ ಮುಗಿಸಿದ ತಕ್ಷಣ ನೀ ನಿನ್ನ ಅಭಿಪ್ರಾಯ ಹೇಳಿ (ಅದು ಏನಾದರು ಸರಿ) ಹೊರಡುತ್ತಿಯ....? ಅದನ್ನು ನಾನು ತಡೆದುಕೊಳ್ಳಲಾರೆ ..
ನಾ ಮೌನಿಯಾಗಿದ್ದಷ್ಟು ಹೊತ್ತು ನೀ ಇಲ್ಲೇ ಇರುತ್ತಿಯ ...ನಂತರ ವಿಷಯ ಪ್ರಸ್ತಾಪಿಸೋಣ ಅನ್ನೋ...ಚಿಂತನೆಯಲ್ಲಿ..ನಾ ಮುಳುಗಿದ್ದೆ..
ಆದರೆ ಒಂದಂತು..ಸತ್ಯ...ನಾ ನಿನ್ನ ....ತುಂಬಾ ಪ್ರೀತಿಸುತ್ತೇನೆ...!!!!
.......
......
,,,,ಇಷ್ಟು ಹೇಳಿ ಮತ್ತೆ ಮೌನಕ್ಕೆ ಶರಣಾದೆ ....

ಸಾಕಷ್ಟು ದೂರದಲ್ಲಿ ಇದ್ದ ಕಾವ್ಯ ಳ ಮುಖದಲ್ಲಿದ್ದ ಗಂಭೀರತೆ, ಕೋಪ ಮಾಯವಾಗಿ ಮುಗುಳ್ನಕ್ಕಳು..ಓಡಿ ಬಂದು...ನನ್ನ ಹತ್ತಿರ ನಿಂತಳು..ನಿಂತು ಹೇಳಿದಳು..
ಅಯ್ಯೋ..ಪೆದ್ದು..ನಾನು ಕೂಡ ನಿನ್ನ ಪ್ರೀತಿಸ್ತ ಇದೀನಿ ಕಣೋ..ನೀನು ಬೇಗ ನಿನ್ನ ಬಾಯಿಂದ I Love You..ಅಂತ ಹೇಳಲಿ ಅಂತ ಕಾಯುತ್ತ ಕುಳಿತಿದ್ದೆ..
ನೀ ಮೌನವಾಗಿ ಕುಳಿತದ್ದು ನೋಡಿ ನನ್ನ ಆತಂಕ ಜಾಸ್ತಿ ಆಯಿತು..ಅದಕ್ಕೆ ಕೋಪ ಬಂತು..ಎಲ್ಲಿ ನೀನು ಈ ವಿಷಯ ಪ್ರಸ್ತಾಪ ಮಾಡುವುದಿಲ್ಲವೋ ಅಂತ..,,....ಅದಕ್ಕೆ..ಎದ್ದು ಹೋಗುವ ನಾಟಕ ಮಾಡಿದೆ..ಅಂದಳು...
ಅಂದವಳೇ..
I Love you yashas....ಅಂತ ಓಡಿ ಬಂದು ನನ್ನ ತೆಕ್ಕೆಗೆ ಬಿದ್ದಳು...!!!!

-ಹೆಚ್.ಆರ್.ಪ್ರಭಾಕರ್.

Friday, November 25, 2011

.....ಯಾತನೆ..!!!



ಸೀನ್ - ಒಂದು..
ಹೇಮಂತ್ ಹಾಗು ಮಧುಮತಿ..ಗೆ ನಿಶಿತಾರ್ಥ ಆಗಿತ್ತು.
ಇಬ್ಬರು...ಮನೆಯವರು ನೋಡಿದ ಸಂಭಂಧ ವಾದರೂ ಖುಷಿಯಾಗಿ ಒಪ್ಪಿಕೊಂಡಿದ್ದರು..
ಹಾಯ್...ಮಧು...ಗುಡ್ ಮಾರ್ನಿಂಗ್..
ಗುಡ್ ಮಾರ್ನಿಂಗ್ ಹೇಮಂತ್..
ಹೇಗಿದ್ದೀರ..
ನಾನು ಚೆನ್ನಾಗಿದ್ದೇನೆ..
ನಿನ್ನ ಒಂದು ವಿಷ್ಯ ಕೇಳಲ..
ಹೇಳಿ..
ಇವತ್ತು ಸಂಜೆ..ಶಾಪಿಂಗ್ ಹೋಗೋಣ ಬರ್ತೀಯ..
ನಾ..ಬರಲ್ಲಪ್ಪ..ಅಮ್ಮ ಬೈತಾರೆ...
ಮದುವೆಗೆ ಮುಂಚೆ ಹಾಗೆಲ್ಲ ಹೋಗಬಾರದು ಅಂತ..
ಅಂಟಿನ ನಾನು ಕನ್ವಿನ್ಚೆ ಮಾಡ್ತೀನಿ..ಕಣೆ..ನೀನು ಬರ್ತೀಯ..
....ಆದರು...ಮದುವೆಗೆ ಮುಂಚೆ ಇದೆಲ್ಲ ತಪ್ಪು...ಹೇಮಂತ್..
ಅಯ್ಯೋ...ಅದೆಲ್ಲ ಹಳೆ ಕಾಲ...ಈಗ ಇದೆಲ್ಲ ಕಾಮನ್...ಯಾರ್ ಏನು..ಅಂದ್ಕೊಲ್ಲೋಲ್ಲ..ನೀ ಬಾರೋ ರಾಜ..
ನನ್ನ ಚಿನ್ನ..ಅಲ್ವ..ರನ್ನ..ಅಲ್ವ..ಬಂಗಾರ..ಅಲ್ವ...
ಇದೆಲ್ಲ..ಪೂಸಿ..ಹೊಡೆಯೋದು..ಬೇಡ..ಮೊದಲು..ಅಮ್ಮನ್ನ ಒಪ್ಪಿಸು..ಆಯ್ತಾ..
.....ನಮಸ್ಕಾರ..ಆಂಟಿ..ಹೇಳಪ್ಪ..ಹೇಮಂತ್..
ಮನೇಲಿ ಎಲ್ಲ ಚೆನ್ನಗಿದರ...
ಹಾಂ..ಚೆನ್ನಗಿದರೆ ಆಂಟಿ..
ಏನಪ್ಪಾ ವಿಷಯ..ಏನಿಲ್ಲ..ಆಂಟಿ..ಸಾಯಂಕಾಲ ..ಮಧುನ ಶಾಪಿಂಗ್ ಕರ್ಕೊಂಡ್ ಹೋಗೋಕೆ..ನಿಮ್ಮ ಮನೆಗೆ ಬರೋಣ ಅಂತ ಇದ್ದೆ...ಅದಿಕ್ಕೆ....?????
ಹೇಳಪ್ಪ...ನೀವು ಸ್ವಲ್ಪ ಕಳಿಸಿ ಕೊಡಬೇಕು...?
ಮದುವೆಗೆ ಮುಂಚೆ ಇವೆಲ್ಲ ಚೆನ್ನಾಗಿರೊಲ್ಲ ಅಲ್ಲಪ್ಪ..ನೋಡಿದವರು ಏನೆಂದುಕೊಂಡಾರು..
ಆಂಟಿ...ಪ್ಲೀಸ್ ಆಂಟಿ..
ಆದರು...
.........ಸರಿ...ಹೋಗಿ...ಬೇಗ ಬಂದು...ಬಿಡಿ..ಆಯ್ತಾ..
ಥ್ಯಾಂಕ್ಸ್..ಆಂಟಿ..
ಹೇಯ್..ಮಧು...ನಾನು ಹೇಳಿರಲಿಲ್ವಾ..ಆಂಟಿ ನ ಒಪ್ಪಿಸ್ತೀನಿ..ಅಂತ..
ಇಬ್ಬರು...ಬಂನೆರ್ಗತ್ತ ರಸ್ತೇಲಿ ಇರೋ ಶೂಪೆರ್ ಸ್ಟಾಪ್ ಗೆ ಹೋದರು...ಸಾಕಷ್ಟು..ಶಾಪಿಂಗ್ ಮಾಡಿದರು..ಹಾಗೆ ಕಾಫೀ ಡೇ ಲಿ ಕೂತು...ರೋಮಂತಿಕ್ ಆಗಿ...ಮಾತು ಶುರು..ಮಾಡಿದರು..
ಹೇಯ್..ಮಧು...ಮದ್ವೆ ಆದ ತಕ್ಷಣ...ಸ್ವಿಸ್ಸ್ ಗೆ ಹೋಗೋಣ ಆಯ್ತಾ..
.....ಯಾಕೆ..?
ಯಾಕೆ ಅಂದ್ರೆ..ಹನಿ ಮೂನ್ ಗೆ..
ಚಿ..ತುಂಟ..ಇಗಲೇ..ಅದರ ವಿಷ್ಯ..ಯಾಕೆ ಬಿಡು...
ನೀನು ಇವತ್ತು..ತುಂಬಾ ಚೆನ್ನಾಗಿ ಕಾನಿಸ್ತಿದಿಯ ..ಕಣೆ..
ಹೌದ..ಥ್ಯಾಂಕ್..ಯು..
ಹೀಗೆ ಮಾತಾಡ್ ತಾ ಆಡ್ತಾ..ಸಮಯ ಹೋಗಿದ್ದೆ ಗೊತ್ತಾಗ್ಲಿಲ್ಲ..ಇಬ್ಬರು..ಖುಷಿಯಾಗಿ...ಹೊರಗೆ ಬಂದು..ಮನೆ ಕಡೆ ಹೆಜ್ಜೆ ಹಾಕಿದರು..

ಸೀನ್ - ೨
ಮದುವೆ ಆಗಿ ಒಂದು ವಾರ ಆಗಿದೆ..
ಸ್ವಿಸ್ಸ್ ಗೆ ಹೊರತು ನಿಂತಿದ್ದಾರೆ ಹನಿ ಮೂನ್ ಗೆ..
...ಹುಷಾರು..ಹೇಮಂತ್...ಇಬ್ಬರು ಜೋಪಾನವಾಗಿ ಹೋಗಿ ಬನ್ನಿ..ಅಪ್ಪ,ಅಮ್ಮ,ಅತ್ತೆ,ಮಾವ, ಹೇಳಿದ್ದೆ..ಹೇಳಿದ್ದು..
ನಾದಿನಿ..ಹತ್ತಿರ ಬಂದು ಹ್ಯಾಪಿ ಜರ್ನಿ ಭಾವ..ಮಧು...ಅಂದಳು..
ಥ್ಯಾಂಕ್ಸ್..ಅಂದು..ಇಬ್ಬರು...ಹೊರಟರು...
ಸೀನ್ - ೩
ಆಹಾ...ಎಂತಹ ಅದ್ಭುತ ಪರಿಸರ...ವಾವ್...ಸೂಪರ್...ಹೇಮಂತ್...
ಅಂತು..ಇಂತೂ..ನಿನ್ನ ಕನಸು ಈಡೆರಿಸಿಕೊಂಡೆ...ಕಳ್ಳ..
ಅಹ..ಮತ್ತೆ..ನೀನು ಕಳ್ಳಿ..ಮದುವೆಗೆ ಮುಂಚೆ ...ಎಲ್ಲಿ ಕರೆದರೂ..ಅಮ್ಮ..ಅಮ್ಮ..ಅಮ್ಮ..ಅಂತ ಜಪಾ ಮಾಡ್ತಿದ್ದೆ..ಈಗ..ಕರೀ..ಅಮ್ಮನ್ನ...
ಶು..ಸಾಕು..ಸುಮ್ನಿರೋ..ಇಗದ್ರೆ ನಮಗೆ ಲೈಸೆನ್ಸೆ ಸಿಕ್ಕಿದೆ..ಓ..ಕೆ..ಆಗ..ಹೀಗೆಲ್ಲ..ಓಡಾಡಲಿಕ್ಕೆ..ಅಗ್ತಿತ್ತ..
....ತಾನು..ಬುಕ್..ಮಾಡಿದ..ರೂಮಿಗೆ ಕರೆದೊಯ್ದು...ಖುಷಿಯಾಗಿ ತೋರಿಸಿದ..ಹೇಗಿದೆ..
ಇಲ್ಲಿ..ಇನ್ನು ಒಂದು ವಾರ ನಾನೇ ರಾಜ..ನೀನೆ..ರಾಣಿ..ಅಂದ..
ಶುರುವಾಯ್ತು..ಮಧು..ಚಂದ್ರ...
ಸೀನ್ - ೪
ಹೇಮಂತ್..ನನಗೆ ಇವತ್ತು ಬೋರ್ಡ್ ಮೀಟಿಂಗ್ ಇದೆ..ನೀನು ಹೇಗೂ..ಮನೇಲಿ ಇರ್ತೀಯಲ್ಲ..ಮನೆಯಿಂದ ಆನ್ ಲೈನಿನಲ್ಲಿ ಕೆಲಸ ಅಲ್ವ..ಸ್ವಲ್ಪ..ಸೂಪರ್ ಮಾರ್ಕೆಟ್ ಗೆ ಹೋಗಿ..ದಿನಸಿ...ತರಕಾರಿ..ತಂದ್ಬಿದೂ..ಮನೇಲಿ ಎಲ್ಲ ಖಾಲಿ ಆಗಿದೆ..
....ನಾನು ಬ್ಯುಸಿ..ಕಣೆ..ಆಗೋಲ್ಲ
ಪ್ಲೀಸ್..ಕಣೋ..ನಾನು ರಾತ್ರಿ ಬರೋದು..ತಡಾ ಆಗುತ್ತೆ...ಎಲ್ಲ ತಂದು..ಸ್ವಲ್ಪ..ಅನ್ನ...ಮಾಡಿ ಇದು..ಆಯ್ತಾ..
ಇಲ್ಲ ಅಂದ್ರೆ..ನಾನು ಆಫೀಸಿನಿಂದ ಹೊರಡೋ ಸಮಯದಲ್ಲಿ ಫೋನ್ ಮಾಡ್ತೀನಿ.....ಹೋಟೆಲ್ ನಿಂದ..ತರಿಸು..ಆಯ್ತಾ..
....ಇವನಿಗೆ ವಿಪರೀತ ಕೆಲಸ..ಮನೇಲಿ ಕೂತು..ಕೊಟ್ಟಿರೋ ಪ್ರಾಜೆಕ್ಟ್ ಪೂರ್ತಿ ಮಾಡಕ್ಕೆ ಸಮಯವೇ ಸಾಕಾಗ್ ತಾ ಇಲ್ಲ..
......ಹೇಮಂತ್..ಆಫೀಸಿನಿಂದ..ಹೊರಟೆ...ಹೋಟೆಲ್ ಗೆ ಫೋನ್ ಮಾಡಿ..ಊಟ ಆರ್ಡರ್ ಮಾಡೋ..ಇನ್ನು ಇಪ್ಪತ್ತು..ನಿಮಿಷದಲ್ಲಿ ಅಲ್ಲಿರ್ತೀನಿ..
ಇವನು..ಹೂಂ ಅಂದ...ಕೆಲಸದ ಬ್ಯುಸಿ ಲಿ..ಮರೆತ..
ಸುಸ್ತಾಗಿ ಬಂದು...ಲ್ಯಾಪ್ಟಾಪ್..ಸೋಫಾ ಮೇಲೆ ಹಾಕಿ ಉಸ್ಸಪ್ಪ..ಅಂತ ಕುಳಿತಳು..ಮಧು...
ಸ್ವಲ್ಪ..ಹೊತ್ತು..ಅದ ಮೇಲೆ ಮುಖ ತೊಳೆದು..ಬಾ ಹೇಮಂತ್..ಊಟ ಮಾಡೋಣ..ಅಂತ ಡೈನಿಂಗ್ ಟೇಬಲ್ ಹತ್ರ ಹೋದಳು..ಅವಳಿಗೆ..ತುಂಬಾ ಸುಸ್ತು..ಹಸಿವು..ಒಟ್ಟಿಗೆ ಆಗಿತ್ತು..ಏನಾದ್ರು ತಿನ್ನದಿದ್ದರೆ ಈಗ ತಲೆ ಸುತ್ತಿ ಬೀಳುತ್ತೇನೆ..ಅನ್ನಿಸುವಷ್ಟು..ಸುಸ್ತಾಗಿತ್ತು...
ಎಲ್ಲಿದೆ..ಊಟ..????
ಹಾಂ...ಬಂದೆ..ಅಂದು ಆಕಡೆ ನೋಡಿದ...
ಹೇಮಂತ್..ಎಲ್ಲಿ ಊಟದ ಪಾರ್ಸೆಲ್..ಎಲ್ಲಿ ಇಟ್ಟಿದಿಯ...
ಪಾರ್ಸೆಲ್ಲ..ಯಾವ ಪಾರ್ಸೆಲ್..
ಅಯ್ಯೋ ನಾನು ಈಗ ಫೋನ್ ಮಾಡಿ ಪಾರ್ಸೆಲ್ ತರಿಸು ಅಂದೆನಲ್ಲ..
ಒಹ್..ಮೈ ಗಾಡ್..ಮರೆತೇ ಬಿಟ್ಟೆನಲ್ಲ...ಒಂದು ನಿಮಿಷ..ತಡಿ..ಫೋನ್ ಮಾಡ್ತೀನಿ..ಅಂತ ಫೋನ್ ಮಾಡಿದ..
ಇವಳಿಗೆ..ಹಸಿವು ಪ್ರಾಣ ಹೋಗ್ತಾ ಇತ್ತು..ಕೂಗಾಡಿ..ಕಿರುಚಾಡಿ ತನ್ನ ಕೋಪಾನ..ವ್ಯಕ್ತಪಡಿಸ್ತಾ ಇದಾಳೆ..ಇವನು..ಸುಮ್ಮನೆ ಚಡಪಡಿಸುತ್ತಾ ...ಕಾಯುತ್ತಿದ್ದಾನೆ..ಎಷ್ಟೇ..ಸಾರಿ..ಕೇಳಿದರು...ಅವಳು ಮಾತು ನಿಲ್ಲಿಸುತ್ತಿಲ್ಲ..
ಮದುವೆ ಆದ ಹೊಸದರಲ್ಲಿ..ಎಷ್ಟು ಪ್ರೀತಿ ಇತ್ತು..ಈಗ ಬರಿ ನಿಮಗೆ ಆಫೀಸು..ಕೆಲ್ಸನೆ ಮುಖ್ಯಾ...ನನ್ನ ಮೇಲೆ ಪ್ರೀತಿನೆ ಇಲ್ಲ..ನಾನು ದುಡೀತ ಇದೇನೇ..ಎಷ್ಟು ಅಂತ ಕೆಲಸ ಮಾಡ್ಲಿ...ಕೆಲಸಾನ ಸ್ವಲ್ಪಾನು ಶೇರ್ ಮಾಡೋಲ್ಲ..
......ಮನೆ ಎಲ್ಲ ರಂಪಾ ರಾಮಾಯಣ..ಮಾಡಿಟ್ಟಳು..ಮಧು..ಊಟ ಬಂದ ನಂತರ..ಅವಳೇನೋ ಊಟ ಮಾಡಿದಳು..ಇವನಿಗೆ ...ಊಟ ರುಚಿಸಲಿಲ್ಲ...ಮಂಕಾಗಿ..ಕೂತ..ಇತ್ತೇಚೆಗೆ ಈ ತರ ಸಣ್ಣ ಪುಟ್ಟ ವಿಚಾರಗಳಿಗೂ ಮಧು..ಸಿಡುಕುತ್ತಿದ್ದಳು. ಇವನಿಗೆ ದಿಕ್ಕು ತೋಚದೆ ಏನೆ ಸಮಾಧಾನ ಮಾಡಿದರು..ಅವಳು ಶಾಂತ ಆಗಲಿಲ್ಲ..
ಅವಳು ರೂಮಿಗೆ ಹೋಗಿ ಮಲಗಿಬಿಟ್ಟಳು..,,,ಅವಳ ಮಾತುಗಳು..ಇವನ ಮನಸ್ಸಿಗೆ ತುಂಬಾ ನಾಟಿತ್ತು..ಏನೋ ಕಸಿವಿಸಿ..ಕಳವಳ...ಹಿಂಸೆ..ಯಾತನೆ ಆಗುತ್ತಿತ್ತು.....ಈ ತರಹ ದೃಶ್ಯಗಳು...ನಡೆಯುವುದು...ಕಾಮನ್ ಆಯಿತು...ಆಗಾಗ ಪ್ರೀತಿ ಮೊಲೆತರು..ಮಧ್ಯೆ ಮಧ್ಯೆ ಇಬ್ಬರ ಅಹಂ..ತನ್ನ ಕೆಲಸ ತಾನು ಮಾಡುತ್ತಲೇ ಇತ್ತು..ಇಬ್ಬರು..ಲಕ್ಷಾಂತರ ದುಡಿಯುತ್ತಿದ್ದರು...ಅಷ್ಟೇನೂ ನೆಮ್ಮದಿ ಇರಲಿಲ್ಲ..
ಇದರ ಮಧ್ಯೆ ಇಬ್ಬರು ಮಕ್ಕಳು ಆದರು..ಒಂದು ಗಂಡು..ಒಂದು ಹೆಣ್ಣು...ಶಶಾಂಕ್..ಮತ್ತು..ಶೀತಲ್..
ಸೀನ್ - ಐದು
ಮಕ್ಕಳಿಬ್ಬರು ಕಾಲೇಜು ಮುಗಿಸಿ ಕೆಲಸಕ್ಕೂ ಸೇರಿದರು.. ಮನೆಯಲ್ಲಿ ಮಧುಮತಿ ಮತ್ತು ಹೇಮಂತ್ ಮಾತು ಬಿಟ್ಟು ವರುಷಗಳೇ ಕಳೆದಿದ್ದವು..ಇಬ್ಬರು ಚೆನ್ನಾಗಿ ಕೈತುಂಬಾ ದುಡಿದರು..ಸಹ ಅನ್ಯೋನ್ಯತೆ ಇರಲಿಲ್ಲ..ಇದರಿಂದ ಮಕ್ಕಳ ಮನಸಿನ ಮೇಲೆ ತುಂಬಾ ಪರಿಣಾಮ ಬೀರಿ ಮಕ್ಕಳಿಬ್ಬರು..ತಮ್ಮಲ್ಲಿ ತಾವೇ ಈ ವಿಚಾರವಾಗಿ ಚರ್ಚೆ ಮಾಡಿ ..ಮಾಡಿ ..ನೋವು ಪಟ್ಟುಕೊಳ್ಳುತ್ತಿದ್ದರು...ಇಬ್ಬರು ಮಕ್ಕಳು ಎಷ್ಟೇ ಪ್ರಯತ್ನ ಪಟ್ಟರು..ಅಪ್ಪ ಅಮ್ಮನನ್ನು ಒಂದು ಮಾಡುವಲ್ಲಿ ವಿಫಲರಾಗಿದ್ದರು..ಅವರ ದೇಹಗಳು ಮಾತ್ರ ಒಂದೇ ಮನೇಲಿ ಇದ್ದರು..ಮಾನಸಿಕ ವಾಗಿ ತುಂಬಾ ದೂರವಿದ್ದರು..
ಒಂದು ದಿನ ಹೇಮಂತ್ ಸ್ನೇಹಿತ ರಾಜೀವ್ ಮನೆಗೆ ಬಂದ..ಬಂದವನೇ..ಒಬ್ಬನೇ ಹೇಮಂತ್ ಕುಳಿತಿದ್ದಾಗ..ಹತ್ತಿರ ಬಂದು ಯಾಕೋ ಹೀಗೆ ..ಮಂಕಾಗಿದಿಯ..ಅಂದ..ನಿನಗೆ ಗೊತ್ತಲ ವಿಷಯ..ಮನೇಲಿ ನೆಮ್ಮದಿನೆ ಇಲ್ಲ ಕಣೋ...ಅವಳು ಬದಲಾಗುತ್ತಲೇ ಅಂತ..ಕಾದಿದ್ದೆ ಬಂತು..ಆದರೆ ಬದಲಾಗಲಿಲ್ಲ..ಅಂದ..ಈಗ ಒಂದು ಕೆಲಸ ಮಾಡು ನೀನು..ನಿನ್ನ ಮಗಳು ಮದುವೆ ವಯಸ್ಸಿಗೆ ಬಂದಿದಾಳೆ..ಮೊದಲು ಅವಳ ಮದುವೆ ವಿಚಾರ ಮನೇಲಿ ಪ್ರಸ್ತಾಪ ಮಾಡಿ ನಿನ್ನ ಮಗಳ ಹಾಗು ನಿನ್ನ ಹೆಂಡತಿಯ ಅಭಿಪ್ರಾಯ ಕೇಳು ಆಮೇಲೆ..ಹುಡುಗನ್ನ ಹುಡುಕೋ ಪ್ರಯತ್ನ..ಮಾಡು..ನಾನು ಜೊತೇಲಿ ಇರ್ತೀನಿ..ಆಯ್ತಾ..
ಆಯಿತು..ಕಣೋ..
ಶಶಾಂಕ್, ಶೀತಲ್ ....ಯೆಲ್ಲಿದಿರ..ಏನ್ ಡ್ಯಾಡಿ..ಅಂತ ಇಬ್ಬರು..ಬಂದು ಸೋಫಾ ಮೇಲೆ ಕೂತರು..ಶೀತಲ್ ನಿಮ್ಮ ಅಮ್ಮನ್ನ ಕರೀ..ಅಂದ ..
ಮಮ್ಮಿ..ಮಮ್ಮಿ..ಡ್ಯಾಡಿ..ಕರೀತಿದಾರೆ..ಸ್ವಲ್ಪ..ಬನ್ನಿ..
ಅವಳು..ಮುಖ..ಸಿಂಡರಿಸಿಕೊಂಡು..ಏನಂತೆ..ಕೇಳು..ನಾನಿಲ್ಲಿ..ಅಡುಗೆ ಮನೇಲಿ..ಬ್ಯುಸಿ ಆಗಿದಿನಿ..ಅಂದ್ಲು..
ಶೀತಲ್..ಎದ್ದು..ಬಂದು..ಅಡುಗೆ ಮನೆಗೆ..ಏನೋ ವಿಷ್ಯ ಇರುತ್ತೆ ಬಾ ಮಮ್ಮಿ..ಅಂದು ಅಮ್ಮನನ್ನು ಕರೆದುಕೊಂಡು..ಹಾಲಿನ ಸೋಫಾ ಕಡೆ ಬಂದು..ಅಮ್ಮನ ಪಕ್ಕ ಕುಳಿತಳು..
ನೋಡು..ಶೀತಲ್ ನಿನಗೆ ಮದುವೆ ಮಾಡೋಣ ಅಂತ ನಿರ್ಧಾರ ಮಾಡಿದಿನಿ..ಏನಂತಿಯ..
ಹಾಗೆ ನಿಮ್ಮ ಅಮ್ಮನನ್ನು ಕೇಳು..???
ಅಮ್ಮ...ಮೊದಲು ಗಂಡು ನೋಡಿದಾರ ಕೇಳು..?
ಶೀತಲ್ ನೀನು ಏನು ಹೇಳ್ತೀಯ ಕಂದಾ..??
ಓ.ಕೆ.ಡ್ಯಾಡಿ..ನಿಮ್ಮಿಷ್ಟ..ಅಂದ್ಲು..
ನೋಡು..ನಾಳೆ ಯಿಂದ..ಕೆಲವು ನೆಂಟರಿಷ್ಟರ ಮನೆಗೆ..ಮ್ಯಾರೇಜ್ ಬ್ಯುರೋ ಗೆ ಹೋಗ್ಬೇಕು ನಿನ್ನ ಜಾತಕ ಫೋಟೋ ರೆಡಿ ಮಾಡಿ ನಿಮ್ಮಮ್ಮನ ಕೈ ಗೆ ಕೊಡು..ಅವಳಿಗೆ ಹೇಳಿ ನಾಳೆ ರಜಾ ಹಾಕು ಅಂತ..ಅಂದು ಎದ್ದು ಹೋದ..
ಮಧುಮತಿ..ಕೋಪದಿಂದ..ಇವರೊಬ್ಬರೇ ಹೋದ್ರೆ ಅಗೊಲ್ವೇನೋ..ಸುಮ್ನೆ ನಾನು ರಜಾ ಬೇರೆ ಹಾಕಬೇಕು..ಅಂತ ಗೊಣಗಿಕೊಂಡು ಹೊರನಡೆದಳು.ಇದನ್ನೆಲ್ಲಾ ನೋಡುತ್ತಾ ಸುಮ್ಮನಿದ್ದ..ಶಶಾಂಕ್..ಖಿನ್ನನಾಗಿ ಕುಳಿತಿದ್ದ..
ಶಶಾಂಕ್ ಮತ್ತು..ಶೀತಲ್ ಇಬ್ಬರು ಬಾಲ್ಯದಿಂದಲೂ ಮನೆಯ ಈ ವಾತಾವರಣದಿಂದ ಬಹಳವೇ ಬೇಸತ್ತಿದ್ದರು..ಶಾಲೆ ಕಾಲೇಜುಗಳಲ್ಲಿ ಅಪ್ಪ ಅಮ್ಮ ಬಂದು ಬೇರೆ ಬೇರೆ ಕಾರ್ಯಕ್ರಮ ಗಳಲ್ಲಿ ಒಟ್ಟಾಗಿ ಮಕ್ಕಳ ಜೊತೆ ಬರುತ್ತಿದ್ದರು..ಇಲ್ಲಿ ಮಾತ್ರ ಅಪ್ಪ ಬಂದ್ರೆ ಅಮ್ಮ ಇಲ್ಲ..ಅಮ್ಮ ಬಂದ್ರೆ ಅಪ್ಪ್ಪ ಇಲ್ಲ..ಅಪ್ಪ ಅಮ್ಮ ಇದ್ದರು..ಒಂದು ರೀತಿ ಅನಾಥ ಪ್ರಜ್ಞೆ..ಇವರನ್ನು ಕಾಡುತ್ತಿತ್ತು..
ಮನೆ ಕೆಲಸದ ಅನ್ನಪೂರ್ಣ ಇವರಿಗೆ ಹೆಚ್ಚು..ಊಟ ತಿಂಡಿ ಜೊತೆಗೆ ಪ್ರೀತಿ ಮಮತೆ ಕೊಟ್ಟು ತಾಯಿಯಂತೆ ಪೋಷಿಸಿದ್ದಳು..
ರೂಮಿಗೆ ಹೋದ ಶೀತಲ..ಮನದಲ್ಲೇ ಯೋಚಿಸಿದ್ದಳು..ಸಧ್ಯ ಮದುವೆ ಆಗಿ ಹೋದರೆ ಸಾಕು..ಈ ಜನ್ಮದಲ್ಲಿ ಅಪ್ಪ ಅಮ್ಮ ಖುಷಿಯಗಿರೋದು..ನಾ ಕಾಣೆ ಅಂದುಕೊಂಡು..ತನ್ನ ಜಾತಕ ಹುಡುಕುತ್ತ ಫೋಟೋ ಕೂಡ ಒಂದು ಕವರ್ ಗೆ ಹಾಕಿ..ಅಮ್ಮನ ರೂಮಿನಲ್ಲಿ ಇಟ್ಟಳು..

ಸೀನ್ - ಆರು..

ಶುರುವಾಯಿತು..ವರನ ಹುಡುಕಾಟ..ಒಟ್ಟಿಗೆ ಒಂದೇ ಕಾರಿನಲ್ಲಿ ನೆಂಟರ ಮನೆಗೆ ಹೋದರು..ಕಾರಿನಲ್ಲಿ ಒಬ್ಬರಿಗೊಬ್ಬರು ಮಾತೆ ಆಡುತ್ತಿರಲಿಲ್ಲ..ಅದೇ ನೆಂಟರ ಮನೆಯಲ್ಲಿ..ಮ್ಯಾರೇಜ್ ಬ್ಯುರೋ ದಲ್ಲಿ ಮಾತ್ರ ಪೆಶಾವರಿ ನಗೆ, ಮಾತು ಅಷ್ಟೇ..ದಿನಗಳು ಕಳೆದವು..ಇಬ್ಬರು ಹೀಗೆ ಒಟ್ಟಾಗಿ ಓಡಾಡಿ ತುಂಬಾ ವರುಷಗಳೇ ಕಳೆದಿದ್ದವು..
ವಾರದಲ್ಲಿ ಎರಡು ಮೂರು ದಿನ ಒಟ್ಟಾಗಿ ಹೊರಗೆ ಹೋಗುತ್ತಿದ್ದರು...ದೂರ ದೂರ ಇದ್ದ ಮನಸುಗಳು...ಸ್ವಲ್ಪ ವಾದರೂ ಮಾತನಾಡುವಂತ ಸಂದರ್ಭ ಬಂದಿತ್ತು..ಹೀಗೆ ಇಬ್ಬರು ಹೊರಗೆ ಹೋಗಿ ವರನ ಹುಡುಕಾಟ ಮಾಡುತ್ತಿದ್ದಾಗ ಸಾಕಷ್ಟು ಪ್ರಪೋಸಲ್ ಬಂದರು..ಅದರ ಬಗ್ಗೆ ಇಬ್ಬರು ಚರ್ಚೆ ಮಾಡಲು ಆರಂಬಿಸಿದರು..ಕೆಲವು ಮಧುಮತಿ ಗೆ ಇಷ್ಟ ವಾದರೆ ಕೆಲವು ಇವನಿಗೆ ಇಷ್ಟ ಆಗುತ್ತಿತ್ತು..ಇವರಿಬ್ಬರೇ ಆಯ್ಕೆ..ಶೀತಲ್ ಗೆ ಇಷ್ಟ ಆಗುತ್ತಿರಲಿಲ್ಲ..ಬಹಳ ವರ್ಷಗಳ ನಂತರ ಮನೆಯಲ್ಲಿ ನಾಲ್ಕು ಮಂದಿ ಒಟ್ಟಿಗೆ ಕೂತು ಚರ್ಚೆ ಮಾಡುತ್ತಿದ್ದರು. ಇವರಿಬ್ಬರ ಈ ಓಡಾಟ ಮಧುಮಥಿಯಲ್ಲಿ ಸಾಕಷ್ಟು ಬದಲಾವಣೆ ತಂದಿತ್ತು..ಅವಳು ಈಗ ನೇರವಾಗಿ ಗಂಡನನ್ನು ಮಾತನಾಡಿಸುತ್ತಿದ್ದಳು..ಅದು ಮೊದಲಿನಂತೆ ಪ್ರೀತಿಯಿಂದ..ಇವನು ಅಷ್ಟೇ ಏನೋ ಹೊಸ ಕಲೆ ಬಂದಿತ್ತು ಮನೆಯಲ್ಲಿ..ಹೀಗೆ ನಾಲ್ಕು ಮಂದಿ ಸೇರಿ ವೀಕ್ ಎಂಡ್ ಗೆ ಹೊರಗಡೆ ಹೋಗೋದು ಶುರು ಆಯಿತು..ಮಧ್ಯೆ ಮಧ್ಯೆ ಒಂದಷ್ಟು ಹುಡುಗರ ಫೋಟೋ ಜಾತಕ ಬರುತ್ತಿತ್ತು...
ಹೇಮಂತ್..ಹೇಮಂತ್..ಎಲ್ಲಿದಿಯ..
ಏನು ಮಧು..ಏನ್ ಸಮಾಚಾರ..ರೂಮಿನಿಂದ..ಹೊರಬಂದ..ಹೇಮಂತ್
ನೋಡು..ಇಲ್ಲಿ ಒಂದು ಒಳ್ಳೆ ಪ್ರಪೋಸಲ್ ಬಂದಿದೆ..ನಮ್ಮ ದೂರದ ಸಂಭಂದಿ ಶಾಮಣ್ಣ ಇದಾರಲ್ಲ ಅವರ ಮಗಳು ರಾಧ ಮೇಲ್ ಮಾಡಿದಾಳೆ..ಅವರಿಗೆ ಗೊತ್ತಿರೋ ಹುಡುಗನಂತೆ..ಅಮೇರಿಕಾದಲ್ಲಿ ಇದಾನಂತೆ..ಇಂಜಿನಿಯರ್ ಕೈತುಂಬಾ ಸಂಬಳ ನೋದೊಕ್ಕು ಚೆನ್ನಗಿದಾನೆ...ಅಂತ ಒಂದೇ ಸಮನೆ ಹೇಳುತ್ತಾ ಇದ್ದಳು..ಶೀತಲ್ ಮತ್ತು ಶಶಾಂಕ್ ಕೂಡ ಬಂದು ಸೇರಿಕೊಂಡರು...ಎಲ್ಲರೂ ಫೋಟೋ ನೋಡುತ್ತಾ ಕುಳಿತಿದ್ದರು..
ಅಷ್ಟರಲ್ಲಿ ಶೀತಲ್ ಎದ್ದು ನಿಂತು..ಡ್ಯಾಡಿ..ಅಂದಳು..
ಏನು ಪುಟ್ಟ..ನನಗೆ ಆ ಹುಡುಗ ಇಷ್ಟ ಇಲ್ಲ ಡ್ಯಾಡಿ..ಅಂದಳು..
ಮಧುಮತಿ..ಮತ್ತು ಹೇಮಂತ್..ಇಬ್ಬರಿಗೂ..ಆಶರ್ಯ ..ಯಾಕೆ ಒಳ್ಳೆ ಹುಡುಗ ಅಂತೆ..ನೋಡಲು ಚೆನ್ನಾಗಿದ್ದಾನೆ..ಒಳ್ಳೆ ಕೆಲಸ..ಅಮೆರಿಕ ದಲ್ಲಿ ಬೇರೆ ಇದ್ದಾನೆ..
ಹೀಗೆ ಹೇಳುತ್ತಾ ಇಬ್ಬರು ಅವಳ ಬಳಿಗೆ ಬಂದರು..
.....ಏನಾಯ್ತು..ಶೀತಲ್..ಯಾಕೆ..ಬೇಡ ಅಂತ ಇದ್ದೀಯ..ಇಷ್ಟು ದಿನ ಮದುವೆ ಅಂದ್ರೆ ಖುಷಿಯಾಗಿದ್ದೆ..ಈಗ ಯಾಕೆ ಪುಟ್ಟ ಅಂತ..ಇಬ್ಬರು ಕೇಳುತ್ತಿದ್ದಾಗ..
....
ಅವಳು ಓಡಿ ಬಂದು ಅಪ್ಪ ಅಮ್ಮನನ್ನು ಬಾಚಿ ತಬ್ಬಿ..ಹಿಡಿದು..ಜೋರಾಗಿ ಅಳುತ್ತಿದ್ದಳು..
ಅಪ್ಪ ಅಮ್ಮನಿಗೆ ಗಾಬರಿಯಾಯಿತು..ಯಾಕೋ ಕಂದ..ಏನಾಯ್ತು..ಅಂತ ಇಬ್ಬರು ಅವಳನ್ನು ಸಂತೈಸುತ್ತಿದ್ದರು..ಅವಳು..ಅಳುತ್ತ ಹೇಳಿದಳು..
ಮಮ್ಮಿ ಡ್ಯಾಡಿ..ನಮಗೆ ಬುದ್ದಿ ಬಂದಾಗಿನಿಂದ ನೀವಿಬ್ಬರು ಈ ತರ ಒಟ್ಟಾಗಿ ಮಾತಾಡಿದ್ದು..ಓಡಾಡಿತ್ತು ಪ್ರೀತಿಯಿಂದ ಇದ್ದದ್ದು ನೋಡಿದ್ದೇ ಇಲ್ಲ..ಈಗ ನನ್ನ ಮದುವೆ ವಿಚಾರವಾಗಿ ನೀವು ಓಡಾಡ್ತಾ ಇದ್ದೆರಿ ಇಬ್ಬರು ಒಟ್ಟಾಗಿ ಖುಷಿಯಿಂದ ಇರೋದು ನೋಡಿದ್ದೇ ಇತ್ತೇಚೆಗೆ..ಮನೆಯಲ್ಲಿ ಪ್ರೀತಿಯ ವಾತಾವರಣ ಇಲ್ಲ ಅನ್ನೋ ಕಾರಣಕ್ಕೆ ಬೇಸತ್ತು ನಾನು ಈ ಮದುವೆ ಮಾಡಿಕೊಂಡು ಹೋಗೋಣ ಅಂತ ನಿರ್ಧಾರ ಮಾಡಿ ಈ ಮಧುವೆಗೆ ಒಪ್ಪಿದ್ದೆ..ಈಗ..ನಮ್ಮ ಮನೆಯಲ್ಲಿ ನನಗೆ ನಿಮ್ಮಿಬ್ಬರ ಪ್ರೀತಿ ಸಿಕ್ಕಿರೋವಾಗ, ನೀವಿಬ್ಬರು ಒಂದಾಗಿರೋವಾಗ ನಾನು ಹೇಗೆ ಮದುವೆ ಮಾಡಿಕೊಂಡು ಹೋಗಲಿ.ನನಗೆ ಈಗಲೇ ಮದುವೆ ಬೇಡ ಎಷ್ಟು ಸುಂದರವಾದ ಸಂಧರ್ಬಗಳನ್ನು ನಾನು ಮಿಸ್ ಮಾಡಿ ಕೊಂಡಿದ್ದೇನೆ..ಅಂತಹುದರಲ್ಲಿ ಈಗ ನಾವೆಲ್ಲರೂ ಖುಷಿಯಾಗಿ ಇರೋ ಸಂದರ್ಬದಲ್ಲಿ ನಾನು ನಿಮ್ಮಿಬ್ಬರನ್ನು...ತಮ್ಮನನ್ನು ಬಿಟ್ಟು ನಾನು ಎಳ್ಳು ಹೋಗೋಲ್ಲ..
i love you..mummy...i love you daddy..ಅಂತ ಅತ್ತೆ ಓಡಿ ಬಂದು ಅಪ್ಪ ಅಮ್ಮನನ್ನು ಬಾಚಿ ತಬ್ಬಿದಳು. ಎಲ್ಲರ ಕಣ್ಣಿಂದ ನೀರು ಜಿನುಗುತ್ತಿತ್ತು..
ಮಧುಮತಿ ಹಾಗು ಹೇಮಂತ್ ಇಬ್ಬರು ಪಶ್ಚಾತ್ತಾಪದಿಂದ ಮಕ್ಕಳನ್ನು ನೋಡುತ್ತಾ ಎಂತಹ ಮಧುರಾ ಗಳಿಗೆಗಳನ್ನು ನಾವು ಮಿಸ್ ಮಾಡಿಕೊಂದೆವಲ್ಲ..ಅಂತ ಮರುಗುತ್ತಿದ್ದರು..ಛೆ ಮನೆಯಲ್ಲಿ ಅಪ್ಪ ಅಮ್ಮನ ಜಗಳ ಹೆಚ್ಚಾದರೆ ಮಕ್ಕಳು ಹೇಗೆ ಪ್ರೀತಿಯಿಂದ ವಂಚಿತರಾಗಿ ಅನಾಥ ಪ್ರಜ್ಞೆ ಕಾಡಿ ಮಂಕಾಗುತ್ತಾರೆ..ನಮ್ಮ ನಮ್ಮ ಅಹಂ ನಿಂದ ನಾವು ಮಕ್ಕಳಿಗೆ ನೋವು ಕೊಟ್ಟೆವು ಅಂತ ದುಖಿಸುತ್ತ ಮಧುಮತಿ ಹಾಗು ಹೇಮಂತ್ ಒಬ್ಬರನ್ನೊಬ್ಬರು ಸಾರಿ ಕೇಳುತ್ತ ....ಕಳೆದು ಹೋದ ಮಧುರಾ ಕ್ಷಣಗಳ ಬಗ್ಗೆ ಪರಿತಪಿಸುತ್ತಿದ್ದರು..
...ಆ ಮನೆಯಲ್ಲಿ ಮತ್ತೆ ಸಂತಸದ ದಿನಗಳು ....ಪ್ರಾರಂಭವಾದವು...!!!!!
-ಹೆಚ್.ಆರ್.ಪ್ರಭಾಕರ್.

Tuesday, November 22, 2011

''ಕನವರಿಕೆ''





ಆಗಸದ ತುಂಬೆಲ್ಲ ನಿನ್ನ ಬಿಂಬ
ಭುವಿಯ ತುಂಬೆಲ್ಲ ನಿನ್ನ ಇರುವಿಕೆಯ ಸಂಚಲನ
ನಿನದೆ ನೆನಪಲಿ ನಾ ಹೊರಟೆ
ಆ ದ್ವೀಪಕೆ ...
ನಿನ್ನ ನೆನಪುಗಳು
ಹೆಜ್ಜೆ ಹೆಜ್ಜೆಗೂ ಕಾಡುತ್ತ ಕಾಡುತ್ತ
ನಾ ನಾನಾಗಿರಲಿಲ್ಲ ಗೆಳತಿ..
ನಾ ನಾನಾಗಿರಲಿಲ್ಲ

ತಂಗಾಳಿಯ ತಂಪಿನಲಿ
ನೀಲಿ ವರ್ಣದ ಆ ನೀರಿನಲಿ
ನಿನ್ನ ನೆನಪುಗಳು ಅಲೆಯೇರಿ
ಬರುತಿವೆ ಗೆಳತಿ
ಅಲೆಯೇರಿ ಬರುತಿವೆ..

ನಿನ್ನ ಇರುವಿಕೆಯ ಭಾವ
ನಾ ಪಡೆಯಲು ಯತ್ನಿಸಿ
ಸೋತು ಹೋದೆ ಗೆಳತಿ
ನಾ ಸೋತು ಹೋದೆ ....

ದ್ವೀಪವೇ ಕತ್ತಲಾಗಿ
ಆಕಾಶವೇ ಕಳಚಿಬಿದ್ದು
ಸುನಾಮಿ ಅಪ್ಪಳಿಸಿ ಬಂದಿದ್ದರು
ನಿನ್ನ ನೆನಪು ಮಾತ್ರ
ನನ್ನಿಂದ ದೂರಗುತ್ತಿರಲಿಲ್ಲ ಗೆಳತಿ
ದೂರಾಗುತ್ತಿರಲಿಲ್ಲ....

ಬೀಸುವ ಪ್ರತಿ ಗಾಳಿಯ ಜೊತೆ
ಕದಲುವ ಪ್ರತಿ ಎಲೆಗಳ ಜೊತೆ
ಹಾರುವ ಮರಳ ಕಣದ ಜೊತೆ
ನನ್ನ ಮನ ಸ್ಪರ್ಧೆಗಿಳಿದಿತ್ತು ಗೆಳತಿ
ಸ್ಪರ್ಧೆಗಿಳಿದಿತ್ತು..

ಇಷ್ಟಾದರೂ
ನೀ ಮಾತ್ರ
ನನ್ನ ಕಾಡದ ದಿನವಿರಲಿಲ್ಲ
ಕಾಡದ ಕ್ಷಣವಿರಲಿಲ್ಲ
ಹೊಸ ಭರವಸೆಯೊಂದಿಗೆ ನಾ ಅಲ್ಲಿ
ಕಾಯುತ್ತಲೇ ಇದ್ದೆ..
ನೀ ಬರುವೆ ಎಂದು..
ಆದರೆ
ನೀ
ಬರಲಿಲ್ಲ ಗೆಳತಿ
ನೀ
ಬರಲಿಲ್ಲ..!!!!

-ಹೆಚ್.ಆರ್.ಪ್ರಭಾಕರ್.

(ಮಾಲ್ಡೀವ್ಸ್ ದ್ವೀಪದಲ್ಲಿ ಕಾಡಿದ ನೆನಪು)