Pages

Monday, October 31, 2011

‎"ಅಂಧತ್ವ''




ಸೂರ್ಯಾಸ್ತದ ಆ ಹೊತ್ತು
ಬಾನೆಲ್ಲ ಕೆಂಪೇರಿ
ನೀಲಿ ಮೋಡಗಳು ಚದುರಿ
ಭುವಿಯೆಲ್ಲ ಮಬ್ಬಾಗಿ
ಬದಲಾವಣೆಗೆ ಒಗ್ಗಿಕೊಳ್ಳುವಾಗ

ಇಲ್ಲಿ

ಹಕ್ಕಿ ಪಕ್ಷಿಗಳೆಲ್ಲ ಗೂಡು ಸೇರುವ
ಆ ಘಳಿಗೆ
ನಿತ್ಯ ಕಾಯಕ ಮುಗಿಸಿ
ಮನೆಯತ್ತ ಹೆಜ್ಜೆ ಹಾಕುವ ಮಂದಿ
ಮತ್ತೆ ಮುಂಜಾವಿನವರೆಗೆ
ವಿಶ್ರಾಂತಿ ಬಯಸುವ ದೇಹ

ಆ ಸಮಯದಲ್ಲೂ

ಕನ್ನಡಿ ಮುಂದೆ ನಿಂತು
ತಿದ್ದಿ ತೀಡಿಕೊಳ್ಳುವ ಬಯಕೆ
ಸೌಂದರ್ಯದ ಸುಳ್ಳೇ ಕಾಳಜಿ ಕಂಡು

ಬೋಳಾದ ಮರ

ಮತ್ತೆ ಮತ್ತೆ ಮನುಷ್ಯನತ್ತ
ನೋಡಿ ನಗುತ್ತಿದೆ
ನಗುತ್ತ ಹೇಳುತ್ತಿದೆ

ನೀ

ಎಷ್ಟೇ ಎಚ್ಚರ ವಹಿಸಿದರು
ಒಂದಿಲ್ಲೊಂದು ದಿನ
ನನ್ನಂತೆ ಆಗಲೇಬೇಕು
ಬದಲಾವಣೆಗೆ
ಒಗ್ಗಿಕೊಳ್ಳಲೇಬೇಕು
ಆದರು ನಿನಗ್ಯಾಕೆ
ಈ ಹುಚ್ಚು ಸೌಂದರ್ಯದ ಭ್ರಮೆ ..?

ಇದಕ್ಕಿಂತ

ನಿನ್ನ ನಡೆ ನುಡಿಯಲ್ಲಿರಲಿ
ಸೌಂದರ್ಯ
ಬದುಕುವ ರೀತಿಯಲ್ಲಿರಲಿ
ಸೌಂದರ್ಯ
ಮತ್ತೊಬ್ಬರಿಗೆ ನೀಡುವ ನೆರವಿನಲ್ಲಿರಲಿ
ಸೌಂದರ್ಯ

ಮನಸ್ಸು ಕುರೂಪಿಯಾದರು

ದೇಹ ಸೌಂದರ್ಯಕ್ಕೆ ಒತ್ತುಕೊಡುವೆಯಲ್ಲ
ನಾನಾದರೂ
ಮತ್ತೆ ಬೆಳಗಾಗಿ
ಮಾಸ ಬದಲಾದಾಗ
ಚಿಗುರೊಡೆದು ಮಂದಿಗೆ ನೆರಳ ನೀಡಿ
ಉಸಿರಿಗೆ ಗಾಳಿ ನೀಡುವೆನು

ಆದರೆ

ನಿನಗೆ ಮತ್ತೆ ಮತ್ತೆ
ಆ ಅವಕಾಶವಿಲ್ಲ
ಇರುವ ಒಂದೇ ಜನ್ಮವನ್ನು
ಸಾರ್ಥಕ ಪಡಿಸಿಕೊಳ್ಳದೆ
ಏಕೆ ನಿರರ್ಥಕವಾಗಿ ಕಳೆಯುತ್ತಿರುವೆ
ಲೌಕಿಕದ ಈ ಭ್ರಮೆಗಿಂತ
ಪರಿಪೂರ್ಣತೆಯ ಸುಖದಲ್ಲಿ ಮಿಂದೆದ್ದು
ನಿನ್ನ ಬದುಕನ್ನು
ಅರ್ಥಪೂರ್ಣವಾಗಿಸಿಕೋ ...

ಈ ಅಂಧತ್ವ ಹೋಗಲಾಡಿಸಿಕೊಂಡು

ಬೆಳಕಿನತ್ತ ಮುಖ ಮಾಡಿ
ಎಲ್ಲರೂ ನನ್ನವರೆಂದು ಭಾವಿಸು
ಆಗ ಆಗುತ್ತಿಯೇ ನೀ ನಿಜವಾದ ಮಾನವ ...!!!

-ಹೆಚ್. ಆರ್. ಪ್ರಭಾಕರ್.

"ಅಂಧತ್ವ''

ಸೂರ್ಯಾಸ್ತದ ಆ ಹೊತ್ತು
ಬಾನೆಲ್ಲ ಕೆಂಪೇರಿ

ನೀಲಿ ಮೋಡಗಳು ಚದುರಿ

ಭುವಿಯೆಲ್ಲ ಮಬ್ಬಾಗಿ

ಬದಲಾವಣೆಗೆ ಒಗ್ಗಿಕೊಳ್ಳುವಾಗ

ಇಲ್ಲಿ

ಹಕ್ಕಿ ಪಕ್ಷಿಗಳೆಲ್ಲ ಗೂಡು ಸೇರುವ

ಆ ಘಳಿಗೆ

ನಿತ್ಯ ಕಾಯಕ ಮುಗಿಸಿ

ಮನೆಯತ್ತ ಹೆಜ್ಜೆ ಹಾಕುವ ಮಂದಿ

ಮತ್ತೆ ಮುಂಜಾವಿನವರೆಗೆ

ವಿಶ್ರಾಂತಿ ಬಯಸುವ ದೇಹ

ಆ ಸಮಯದಲ್ಲೂ

ಕನ್ನಡಿ ಮುಂದೆ ನಿಂತು

ತಿದ್ದಿ ತೀಡಿಕೊಳ್ಳುವ ಬಯಕೆ

ಸೌಂದರ್ಯದ ಸುಳ್ಳೇ ಕಾಳಜಿ ಕಂಡು

ಬೋಳಾದ ಮರ

ಮತ್ತೆ ಮತ್ತೆ ಮನುಷ್ಯನತ್ತ

ನೋಡಿ ನಗುತ್ತಿದೆ

ನಗುತ್ತ ಹೇಳುತ್ತಿದೆ

ನೀ

ಎಷ್ಟೇ ಎಚ್ಚರ ವಹಿಸಿದರು

ಒಂದಿಲ್ಲೊಂದು ದಿನ

ನನ್ನಂತೆ ಆಗಲೇಬೇಕು

ಬದಲಾವಣೆಗೆ

ಒಗ್ಗಿಕೊಳ್ಳಲೇಬೇಕು

ಆದರು ನಿನಗ್ಯಾಕೆ

ಈ ಹುಚ್ಚು ಸೌಂದರ್ಯದ ಭ್ರಮೆ ..?

ಇದಕ್ಕಿಂತ

ನಿನ್ನ ನಡೆ ನುಡಿಯಲ್ಲಿರಲಿ

ಸೌಂದರ್ಯ

ಬದುಕುವ ರೀತಿಯಲ್ಲಿರಲಿ

ಸೌಂದರ್ಯ

ಮತ್ತೊಬ್ಬರಿಗೆ ನೀಡುವ ನೆರವಿನಲ್ಲಿರಲಿ

ಸೌಂದರ್ಯ

ಮನಸ್ಸು ಕುರೂಪಿಯಾದರು

ದೇಹ ಸೌಂದರ್ಯಕ್ಕೆ ಒತ್ತುಕೊಡುವೆಯಲ್ಲ

ನಾನಾದರೂ

ಮತ್ತೆ ಬೆಳಗಾಗಿ

ಮಾಸ ಬದಲಾದಾಗ

ಚಿಗುರೊಡೆದು ಮಂದಿಗೆ ನೆರಳ ನೀಡಿ

ಉಸಿರಿಗೆ ಗಾಳಿ ನೀಡುವೆನು

ಆದರೆ

ನಿನಗೆ ಮತ್ತೆ ಮತ್ತೆ

ಆ ಅವಕಾಶವಿಲ್ಲ

ಇರುವ ಒಂದೇ ಜನ್ಮವನ್ನು

ಸಾರ್ಥಕ ಪಡಿಸಿಕೊಳ್ಳದೆ

ಏಕೆ ನಿರರ್ಥಕವಾಗಿ ಕಳೆಯುತ್ತಿರುವೆ

ಲೌಕಿಕದ ಈ ಭ್ರಮೆಗಿಂತ

ಪರಿಪೂರ್ಣತೆಯ ಸುಖದಲ್ಲಿ ಮಿಂದೆದ್ದು

ನಿನ್ನ ಬದುಕನ್ನು

ಅರ್ಥಪೂರ್ಣವಾಗಿಸಿಕೋ ...

ಈ ಅಂಧತ್ವ ಹೋಗಲಾಡಿಸಿಕೊಂಡು

ಬೆಳಕಿನತ್ತ ಮುಖ ಮಾಡಿ

ಎಲ್ಲರೂ ನನ್ನವರೆಂದು ಭಾವಿಸು

ಆಗ ಆಗುತ್ತಿಯೇ ನೀ ನಿಜವಾದ ಮಾನವ ...!!!

-ಹೆಚ್. ಆರ್. ಪ್ರಭಾಕರ್.

Saturday, October 29, 2011

ನಿರ್ಧಾರ ...!!!



ಧುಮ್ಮಿಕ್ಕುತ್ತಿರುವ

ಆ ಜಲಧಾರೆ ಸಾಕ್ಷಿಯಾಗಿ

ಸುತ್ತಲಿರುವ ಬೆಟ್ಟ ಗುಡ್ಡಗಳ ಮೇಲಾಣೆ

ಆ ಹಸಿರ ಹುಲ್ಲು ಹಾಸಿನ ತಿಳಿನೀರಿನ

ಸುಮ್ಮುಖದಲ್ಲಿ

ನಿನ್ನ ಎದುರು ಕುಳಿತು

ಪ್ರಕೃತಿಯ ಚೆಂದ ಸವಿಯುತ್ತ

ನಿನ್ನ ತುಂಟ ಕಣ್ಣ ನೋಡುತ್ತಾ

ಕೇಶರಾಶಿಯ ಘಮವನ್ನ ಆಸ್ವಾದಿಸುತ್ತಾ

ನಿನ್ನ ಮುಂಗುರುಳ ಇಳಿಜಾರಿನಲ್ಲಿ

ನೀ ಆಟವಾಡುತ್ತ ಮೈಮರೆತಿದ್ದಾಗ

ಗೋರಂಟಿ ಹಚ್ಚಿದ ನಿನ್ನ

ಮೃಧು ಕೈ ಹಿಡಿದು

ಬೆರಳುಗಳ ಜೊತೆ ಆಟವಾಡುತ್ತ

ನಾ

ಇಂದು

ಹೇಳೇ ಹೇಳುತ್ತೇನೆ

ಗೆಳತಿ

ನನ್ನೊಲವಿನ

ಭಾವವನ್ನು ....!

-ಹೆಚ್.ಆರ್.ಪ್ರಭಾಕರ್.

ಆಸೆ



ಬಿರುಗಾಳಿ ಬೀಸಿದರು

ಬರಸಿಡಿಲು ಎದುರಾದರು

ಭುವಿಯು ಮುಳುಗುವಂತೆ ಮಳೆ ಸುರಿದರು

ಅಲ್ಲೋಲ ಕಲ್ಲೋಲವಾದರೂ

ಯಾರೆನಾದರೂ...

ಯಾರು ಹುಟ್ಟಿದರು...ಮರಣಿಸಿದರೂ

ಯಾರು ಅತ್ತರು, ನಕ್ಕರು

ಆಕಾಶವೇ ಮೇಲೆ ಬಿದ್ದರು

ಮನುಷ್ಯ ಎಷ್ಟೇ ಬೊಬ್ಬೆ ಹೊಡೆದರು

ಕಲ್ಲು ಬಸವ ಕೂಗಿದರು

ಕಾಲಜ್ಞಾನ ನಿಜವಾದರೂ

ಮನುಷ್ಯ ಎಷ್ಟೇ ಮುಂದುವರೆದರೂ

ಮೋಡಗಳು ಮುಸುಕಿ ಮಂಕಾದರೂ

ಭುವಿಯು ಬಾಯಿತೆರೆದರೂ

ಶತ ಶತಮಾನಗಳಿಂದ

ನಾ ಹೀಗೆ ಇದ್ದೇನೆ

ಮುಂದೆಯು ಹೀಗೆ ಇರಬೇಕೆಂಬ

ಆಸೆಯು

ನನ್ನಲ್ಲಿ ಹೆಚ್ಚಾಗಿದೆ

ಆದರೆ ಮಾನವನ

ಅಭಿವೃದ್ಧಿಯೆಂಬ

'ವಕ್ರ' ದೃಷ್ಟಿ

ನನ್ನತ್ತ ಬೀಳದಿದ್ದರೆ

ಅವನ

ದುರಾಸೆಗೆ

ನಾ

ಬಲಿಯಾಗದಿದ್ದರೆ

ಮಾತ್ರ

ನಾ

ಹೀಗೆ ಇರಲು ಸಾಧ್ಯ...!!!

ಆಸೆ



ಬಿರುಗಾಳಿ ಬೀಸಿದರು

ಬರಸಿಡಿಲು ಎದುರಾದರು

ಭುವಿಯು ಮುಳುಗುವಂತೆ ಮಳೆ ಸುರಿದರು

ಅಲ್ಲೋಲ ಕಲ್ಲೋಲವಾದರೂ

ಯಾರೆನಾದರೂ...

ಯಾರು ಹುಟ್ಟಿದರು...ಮರಣಿಸಿದರೂ

ಯಾರು ಅತ್ತರು, ನಕ್ಕರು

ಆಕಾಶವೇ ಮೇಲೆ ಬಿದ್ದರು

ಮನುಷ್ಯ ಎಷ್ಟೇ ಬೊಬ್ಬೆ ಹೊಡೆದರು

ಕಲ್ಲು ಬಸವ ಕೂಗಿದರು

ಕಾಲಜ್ಞಾನ ನಿಜವಾದರೂ

ಮನುಷ್ಯ ಎಷ್ಟೇ ಮುಂದುವರೆದರೂ

ಮೋಡಗಳು ಮುಸುಕಿ ಮಂಕಾದರೂ

ಭುವಿಯು ಬಾಯಿತೆರೆದರೂ

ಶತ ಶತಮಾನಗಳಿಂದ

ನಾ ಹೀಗೆ ಇದ್ದೇನೆ

ಮುಂದೆಯು ಹೀಗೆ ಇರಬೇಕೆಂಬ

ಆಸೆಯು

ನನ್ನಲ್ಲಿ ಹೆಚ್ಚಾಗಿದೆ

ಆದರೆ ಮಾನವನ

ಅಭಿವೃದ್ಧಿಯೆಂಬ

'ವಕ್ರ' ದೃಷ್ಟಿ

ನನ್ನತ್ತ ಬೀಳದಿದ್ದರೆ

ಅವನ

ದುರಾಸೆಗೆ

ನಾ

ಬಲಿಯಾಗದಿದ್ದರೆ

ಮಾತ್ರ

ನಾ

ಹೀಗೆ ಇರಲು ಸಾಧ್ಯ...!!!

Monday, October 24, 2011

ಸ್ವರ್ಗ




ತಂಪು ನೆರಳನಿಯಲು ನಿಂತಾ ಆ ಸಾಲು ಮರಗಳು

ತಳಿರು ತೋರಣದಂತೆ ಕಂಗೊಳಿಸುವ ಆ ರೆಂಬೆ ಕೊಂಬೆಗಳು

ಹಸಿರ ಹಾಸನ್ನು ಹಾಸಿರುವ ಆ ಪರಿ

ಹೊಚೆಲ್ಲಿ ಸಿಂಗರಿಸಿರುವ ಆ ಭುವಿ

ಭುವಿಯ ಮೇಲೆ ಬೀಳಲು ಪ್ರಯತ್ನಿಸುತ್ತಿರುವ ಸೂರ್ಯ ಕಿರಣ

ಎಲ್ಲೊ ಕೇಳುತ್ತಿರುವ ಕೊಳಲ ನಾದ

ಅದ್ಭುತ ಸುವಾಸನೆ ಬೀರುತ್ತಿರುವ ಹೂಗಳು

ಕೊಳಲ ನಾದದ ಜೊತೆ ಸ್ಪರ್ಧೆಗಿಳಿದ ಕೋಗಿಲೆಯ ಕಂಠ

ಹೂ ಹಾಸಿನ ಮೇಲೆ ನಡೆದರೆ ಹೇಗೋ ಎಂಬ ಚಿಂತೆಯಲ್ಲಿರುವ ಜಿಂಕೆ..

ಇದನ್ನೆಲ್ಲಾ ಕಂಡು ನನಗನಿಸುತ್ತಿರುವುದು

ಒಂದೇ ಭಾವ

ಭೂಲೋಕದ ಸ್ವರ್ಗ ಇದೆ ಅಲ್ಲವೇ..?

-ಹೆಚ್. ಆರ್. ಪ್ರಭಾಕರ್.

Sunday, October 16, 2011

ಭರವಸೆ - ಕಳೆದು ಹೋಗಿದೆ


ಗೆಳತಿ..

ಈ ಪ್ರೀತಿ ಹುಟ್ಟಿದ್ದು ನಿನ್ನ ಕಿರುನಗೆಯಿಂದ
ಮೊಳೆತದ್ದು ನಿನ್ನ ಸಾಂಗತ್ಯದಿಂದ
ಹೊಸ ಲೋಕ ಕಂಡದ್ದು
ನಿನ್ನ ಪ್ರೇಮ ಭರಿತ ಮಾತುಗಳಿಂದ
ಆ ಲೋಕದ ಬಗ್ಗೆ ಅರಿವಿಲ್ಲದ
ನನಗೆ ನೀ ಜೊತೆಯಲ್ಲಿ ಕರೆದೊಯ್ದೆ..
ಕರೆದೊಯ್ದು ನೀ 'ಭಾವ' ಯಾನದಲ್ಲಿ
ಕೈ ಹಿಡಿದು ಭರವಸೆಯಾದೆ

ಭರವಸೆಯೇ ಬದುಕಾಗಲಿ ಎಂದು ಎಲ್ಲೊ ಓದಿದ್ದ ನಾನು
ಭರವಸೆಯ ಬಗ್ಗೆ ಪುಳಕಿತನಾಗಿದ್ದೆ
ಭರವಸೆಯೊಂದಿದ್ದರೆ ಸಾಕು ಬದುಕಿಗೆ ಎಂದು ಕೊಂಡೆ
ಭರವಸೆಯ ಸಾರಥ್ಯ ನೀ ವಹಿಸಿದ್ದೆ
ಇನ್ನೇನು ಬೇಕಿತ್ತು ಈ ಬದುಕಿಗೆ
ಬದುಕಿನ ಭೂಮಿಯಿಂದ
ಕನಸಿನ ಆಕಾಶದೆತ್ತರಕ್ಕೆ ಹಾರುತ್ತಲೇ ಇದ್ದೆ

ಹಾರುತ್ತ ಹಾರುತ್ತ ರೆಕ್ಕೆ ಕತ್ತರಿಸಿದಂತಯ್ತು
ಒಮ್ಮೆ ನೋಡಿದೆ
ಪಾತಾಳಕ್ಕೆ ಬೀಳುತ್ತಿರುವ ಭಾವ
ಕೈ ಹಿಡಿಯಲು ನೀ ಇರಲಿಲ್ಲ
ಜಂಗಾಬಲ ಉಡುಗಿಹೊಯ್ತು
ನೆನಪಾಯಿತು ನಿನ್ನ ಭರವಸೆ
'ಕೊನೆಯ ವರೆಗೂ ಹೀಗೆ ಇರೋಣ' ಎಂಬುದು

ಆದರೆ

ಆ ಭರವಸೆಯೇ ಮರೆತ ನೀನು
ಭರವಸೆ ಕಳೆದುಕೊಂಡ ನಾನು ....
ಆ ಭರವಸೆ ಕಳೆದುಕೊಂಡಾಗ
ನಿರಂತರ ಹುಡುಕಾಟದಲ್ಲಿದ್ದೇನೆ
ಕತ್ತಲ ರಾತ್ರಿಯಲಿ ಕಳೆದು ಹೋದ ಮಗುವಿನಂತೆ..!!!