Pages

Tuesday, November 15, 2011

"ಶಾಂಭವಿ''







ಶಾಸ್ತ್ರಿಗಳು..ಶಾಸಕರ ಮನೆ ಮುಂದೆ ಬಂದು ನಿಂತಾಗ ಬೆಳಿಗ್ಗೆ..೧೦.೩೦ ದಾಟಿತ್ತು..
ಬ್ಯುಸಿ..ಇದಾರೆನೋ..ಅಂದುಕೊಂಡ..ಒಳಗೆ ಅಡಿ ಇಟ್ಟರು

ನಮಸ್ಕಾರ ಸರ್ ....
ನಮಸ್ಕಾರ..ಹೇಳಿ ಶಾಸ್ತ್ರಿಗಳೇ..ಏನ್ ಸಮಾಚಾರ..
ಏನಿಲ್ಲ ಸರ್..ನಿಮ್ ಹತ್ರ ಒಂದು ವಿಷ್ಯ ಮಾತಾಡಬೇಕಿತ್ತು..
ಹೇಳಿ ಶಾಸ್ತ್ರಿಗಳೇ..ಪರವಾಗಿಲ್ಲ..
ನೀವು ಬ್ಯುಸಿ ಇದ್ದಾರೆ ...ಆಮೇಲೆ ಬರ್ತೇನೆ..ಆಯ್ತಾ..
ಪರವಾಗಿಲ್ಲ ಹೇಳಿ..ನಾನು ಫ್ರೀ ಆಗಿ ಇದ್ದೇನೆ..
ಸಾರ್...ಏನಿಲ್ಲ..ನನ್ನ ಮಗಳ ವಿಷಯ ದಲ್ಲಿ ನಿಮ್ಮನ್ನ ಸಹಾಯ ಕೇಳಬೇಕು..ಅಂತ..ಬಂದೆ..
ಹೇಳಿ..
ಸಾರ್ ನಿಮಗೆ ಗೊತ್ತು..ನನ್ನ ಆರ್ಥಿಕ ಪರಿಸ್ತಿತಿ..ತುಂಬಾ ಹಿಂದಿದೆ..
ಅದಕ್ಕೆ..ನನ್ನ ಮಗಳು..ಈಗ ತಾನೇ..ಡಿಗ್ರಿ ಮುಗಿಸಿದಾಳೆ..
ಅದಿಕ್ಕೆ ಅವಳಿಗೆ ಒಂದು ಒಳ್ಳೆ ಕೆಲಸ ಕೊಡಿಸಿದರೆ ತುಂಬಾ ಉಪಕಾರ ಆಗುತ್ತೆ..
ಅಯ್ಯೋ ಅಷ್ಟೇ ತಾನೇ..ಅದನ್ನ ಕೇಳೋಕೆ ಯಾಕೆ ಸಂಕೋಚ..
ನೀವು ನಮ್ಮ ತಂದೆಯವರಿಗೆ ಆತ್ಮೀಯರು..ನಾನು ಚಿಕ್ಕಂದಿನಿಂದ ನಿಮ್ಮನ್ನ ನೋಡ್ತಾ ಇದ್ದೇನೆ..
ನಿಮ್ಮಂತಹವರ ಮಾರ್ಗದರ್ಶನ..ನಮಗೆ ಬೇಕು...
ಅದರಲ್ಲೂ..ನಮ್ಮ ತಂದೆ ಇರೋವರೆಗೂ..ನೀವು ಆಗಾಗ ನಮ್ಮ ಮನೆಗೆ ಬರ್ತಿದ್ರಿ..
ಅವರು ಹೋದ ಮೇಲೆ ಬರೋದೆ ಇಲ್ಲ..
ಈಗ ನೀವು ನಮ್ಮ ಮನೆಗೆ ಬಂದಿರೋದು..ನಿಜಕ್ಕೂ..ನಮ್ಮ ಪುಣ್ಯ..
ನೀವೇನು ಯೋಚನೆ ಮಾಡಬೇಡಿ..ನಿಮ್ಮ ಮಗಳ ಕೆಲಸದ ವಿಷ್ಯ..ನಾನು ನೋಡ್ಕೋತೀನಿ..
ರಾಧ..ಶಾಸ್ತ್ರಿಗಳು..ಬಂದಿದ್ದಾರೆ..ಕುಡಿಯೋಕೆ ಹಾಲು..ತೊಗೊಮ್ಬಾ..
....ತಮ್ಮ ಪಿ.ಏ. ರಾಜೇಶ್ ನ...ಕರೆದರೂ..
ನೋಡಿ ರಾಜೇಶ್....ನಮ್ಮ ಕನ್ಸ್ಟ್ರಕ್ಷನ್ ಕಂಪೆನೀಲಿ..ಶಾಸ್ತ್ರಿಗಳ ಮಗಳಿಗೆ..ಒಂದು ಕೆಲಸ ಕೊಡೋಕೆ ಹೇಳಿ..ಮ್ಯಾನೇಜರ್ ಗೆ..
ಆಯಿತು..ಸರ್..
ಶಾಸ್ತ್ರಿಗಳೇ ...ಸಂತೋಷಾನ..
.....
ಶಾಂಭವಿ..
ಅಂತು..ಶಾಸಕರ..ಕಂಪೆನಿಯಲ್ಲಿ..ಲೆಕ್ಕ ಸಹಾಯಕಿ ಯಾಗಿ ಕೆಲಸ ಪಡೆದಳು..
ಮೊದಲ ದಿನ..
ಆಫೀಸಿಗೆ..ಕಾಲಿಟ್ಟಾಗ ..ಎದೆ..ಢವ..ಢವ..ಅಂತಿತ್ತು..
ನಮಸ್ಕಾರ ಮೇಡಂ..ನಾನು ಲೋಕೇಶ್..ಅಂತ..ಈ ಆಫೀಸ್ ಬಾಯ್..
ನಮಸ್ಕಾರ..
ಮ್ಯಾನೇಜರ್ ಕರೀತಿದರೆ..ಬನ್ನಿ..ಅಂದರು..ಲೋಕೇಶ್..
ನಿಧಾನವಾಗಿ ಒಳಗೆ ಅಡಿ ಇಟ್ಟಳು..ಶಾಂಭವಿ..
ಗುಡ್ ಮಾರ್ನಿಂಗ್ ಸರ್..
ಗುಡ್ ಮಾರ್ನಿಂಗ್..ಬನ್ನಿ ಶಾಂಭವಿ..
ನಿಮ್ಮ ಸಿ.ವಿ. ನೋಡಿದೆ..ಗುಡ್ ...ಒಳ್ಳೆ ಮಾರ್ಕ್ಸ್..ಬೀ ಕಾಂ..ನಲ್ಲಿ..
ಥ್ಯಾಂಕ್..ಊ..ಸರ್..
ತಗೊಳ್ಳಿ..ನಿಮ್ಮ ಆಫರ್ ಲೆಟರ್,.
ಚೆನ್ನಾಗಿ..ಕೆಲಸ ಮಾಡಿ..ಒಳ್ಳೆ ಹೆಸರು..ತೊಗೋಬೇಕು..ಆಲ್ ದಿ ಬೆಸ್ಟ್..
ಥ್ಯಾಂಕ್ ಯು ಸರ್..
.........
ಶಾಸ್ತ್ರಿಗಳ ಮನೆಯ ಬಡತನ ..ಸ್ವಲ್ಪ..ತಹಬದಿಗೆ ಬಂತು..ಎಲ್ಲಾದರು..ಪೂಜೆ, ಕಾರ್ಯಕ್ರಮ ಸಿಕ್ಕಾಗ ಸ್ವಲ್ಪ ದಕ್ಷಿಣೆ ರೂಪದಲ್ಲಿ..ಒಂದಷ್ಟು ಹಣ ಬರುತ್ತಿತ್ತು...ಆದರೆ..ಮೂವರು..ಮಕ್ಕಳನ್ನು..ಸಾಕೋದು..ಅಷ್ಟು..ಸುಲಭವಾಗಿರಲಿಲ್ಲ..
ಇನ್ನಿಬ್ಬರು..ಹೆಣ್ಣು ಮಕ್ಕಳು..ಭವಾನಿ..೯ ನೆ ತರಗತಿಯಲ್ಲಿ ಓದುತ್ತಿದ್ದರೆ..ಶ್ರೀ ಲಕ್ಷ್ಮಿ..ಪಿ.ಯು. ಓದುತ್ತ ಇದ್ದಳು..
ಅಮ್ಮ..ಪೂಜೆ ವ್ರತ..ಅಂತ..ತಮ್ಮದೇ ಲೋಕದಲ್ಲಿ..ಮುಳುಗಿರುತ್ತಿದ್ದರು..
ಇವಳಿಗೆ..ಉದ್ಯೋಗ ಸಿಕ್ಕಿದಾಗಿನಿಂದ..ಮನೆಯಲ್ಲಿ..ಸ್ವಲ್ಪ ಕ್ಶುಷಿ...ಮನೆ..ಮಾಡಿತ್ತು..
ಶಾಸ್ತ್ರಿಗಳಿಗಂತೂ.....ಸ್ವಲ್ಪ..ನೆಮ್ಮದಿ..ಲಭಿಸಿತ್ತು...
.....

ಪಂಕಜ್..ಆಫೀಸಿನಲ್ಲಿ..ತುಂಬಾ ಚುರುಕು..ಮೊದಲ ದಿನದಿಂದಲೂ..ಶಾಂಭವಿ ಯನ್ನು ನೋಡುತ್ತಲೇ..ಇದ್ದ..
...ಸಮಯ ಸಿಕ್ಕಾಗಲೆಲ್ಲ..ಇವಳನ್ನು..ಮಾತನಾಡಿಸುತ್ತಿದ್ದ..ಕಾಲ ಕ್ರಮೇಣ..ಇಬ್ಬರು ಒಳ್ಳೆ ಸ್ನೇಹಿತರಾದರು..ಪ್ರತಿ ದಿನ ಆಫೀಸು ಕೆಲಸ ಮುಗಿದ ಮೇಲೆ..ಒಂದು ಸಣ್ಣ ವಾಕ್..ಮಾಡುತ್ತ ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದರು..ಬರ್ತಾ..ಬರ್ತಾ..ಒಬ್ಬರನ್ನೊಬ್ಬರು..ಮಾತನಾಡಿಸದೆ ಇದ್ದಾರೆ..ಮನಸು..ಸಮಾಧಾನ ಆಗುತ್ತಿರಲಿಲ್ಲ..
......
ಯಾಕೆ..ನನ್ನ ಮನಸು ಪದೇ..ಪದೇ. ಪಂಕಜ್ ಬಗ್ಗೆ ಚಿಂತೆ ಮಾಡುತ್ತಿದೆ..ಅಂತ ಯೋಚಿಸಿದಾಗ ಉತ್ತರ ಸ್ಪಷ್ಟ..ವಾಗಿತ್ತು..
....
ಇನ್ನೇನು ಇಂದು ನಾನು ನಿನ್ನ ಪ್ರೀತಿಸುತ್ತೇನೆ..ಅಂತ ಹೇಳಬೇಕು..
ಸಂಜೆ ಕಚೇರಿ ಮುಗಿದು..ಇಬ್ಬರು..ಹೊರಟಾಗ..ಪಂಕಜ್..ನೇರವಾಗಿ..ವಿಷಯಕ್ಕೆ...ಬಂದು ಹೇಳಿಬಿಟ್ಟ..
ನಾನು ನಿನ್ನ ಪ್ರೀತಿಸುತ್ತೇನೆ...ಅಂತ..
ಇವಳಿಗೆ..ಒಮ್ಮಿಂದೊಮ್ಮೆಲೆ..ಖುಷಿ..ಸಂಭ್ರಮ..ತನ್ನ ಮನದ ಮಾತನ್ನು ಅವನೇ ಹೇಳಿದ್ದ..
ಒಪ್ಪಿಗೆ..ಸೂಚಿಸಿದಳು..ಶಾಂಭವಿ..
......
ಇವರಿಬ್ಬರ ಇಚ್ಚೆಯಂತೆ..ಶಾಸ್ತ್ರಿಗಳು..ಒಪ್ಪಿಗೆ ಸೂಚಿಸಲಿಲ್ಲ..
ಅವರು..ಕ್ರುಧ್ಹರಾದರು..ನೋಡು ಶಾಂಭವಿ..ಮನೇಲಿ ಇನ್ನು ಇಬ್ಬರು..ತಂಗಿಯರಿದ್ದರೆ..ಜೊತೆಗೆ..ನೀನು ಬೇರೆ ಜಾತಿಯವನನ್ನು..ಮದುವೆ ಆದರೆ..ಸಮಾಜದಲ್ಲಿ..ನನ್ನ ಗೌರವ...ಏನಾಗಬೇಕು..ನಮ್ಮ ಜನ..ಎಷ್ಟು..ಅಡ್ಕೊತಾರೆ..ಗೊತ್ತ..
ಶಾಂಭವಿ..ದಿಕ್ಕು ತೋಚದೆ..ಕುಳಿತಿದ್ದಳು..ಪಂಕಜ್..ಬಂದು..ಪರಿ ಪರಿಯಾಗಿ ಬೇಡಿಕೊಂಡರು..ಶಾಸ್ತ್ರಿಗಳು..ಒಪ್ಪಿರಲಿಲ್ಲ..
...
ಕಚೇರಿಯಲ್ಲಿ..ಕೆಲಸ ಮಾಡುವ ಎಲ್ಲರಿಗೂ..ವಿಷಯ..ಮುಟ್ಟಿತ್ತು...ಇನ್ನು ಶಾಸಕರ ಕಿವಿಗೂ..ಸಹ..
ಒಮ್ಮೆ..ಅಚಾನಕ್ಕಾಗಿ..ಶಾಸಕರು..ಶಾಸ್ತ್ರಿಗಳ ಮನೆಗೆ ಬಂದರು..
ಶಾಸಕರು..ಬಂದ ವಿಷಯ ತಿಳಿದು..ಶಾಸ್ತ್ರಿಗಳು..ಒಮ್ಮೆ..ಗಾಬರಿ..ಆತಂಕ ದಿಂದ ಹೊರಬಂದರು..
ನಮಸ್ಕಾರ..ಸರ್..
ನಮಸ್ಕಾರ ಶಾಸ್ತ್ರಿಗಳೇ..ಅಂತ..ಶಾಸಕರು..ಶಾಸ್ತ್ರಿಗಳ ಕಾಲಿಗೆರಗಿದರು..
ಶತಮಾನಂಭವತಿ...........ಶತಾಯಿಸ್ಪುರುಷ.........................................ಅಂತ..ಆಶೀರ್ವದಿಸಿದರು..
ಉಭಾಯಾಕ್ಹುಶಲೋಪರಿ..ಎಲ್ಲ ಮುಗಿದಮೇಲೆ..ನೇರವಾಗಿ..ಶಾಸಕರು..ವಿಷಯಕ್ಕೆ..ಬಂದರು..
ಶಾಸ್ತ್ರಿಗಳೇ..ನನ್ನ ಕಿವಿಗೆ ಬಿದ್ದ ವಿಷಯ..ನಿಮ್ಮ ಬಳಿ ಮಾತಾಡೋಣ ಅಂತ..ಬಂದೆ..
ಹೇಳಿ..ಸರ್..
ನೋಡಿ ಶಾಸ್ತ್ರಿಗಳೇ..ನಿಮ್ಮ ಅನುಭವಾ,ಪಾಂಡಿತ್ಯ, ಜ್ಞಾನ ಇವೆಲ್ಲದರ ಮುಂದೆ..ನಾನೆಷ್ಟರವನು..ನೀವು ವೇದ, ಉಪನಿಷತ್ತು..ಎಲ್ಲವನ್ನು ಓದಿಕೊಂಡವರು..ಆದರು..ನಿಮ್ಮ ಮುಂದೆ ಈ ವಿಷಯ ಹೇಳೋದು..ನನಗೆ ಸ್ವಲ್ಪ..ಸಂಕೋಚವೇ ಆಗುತ್ತೆ..
ಹೇಳಿ...ಸರ್..ಪರವಾಗಿಲ್ಲ..
ನೋಡಿ ಶಾಸ್ತ್ರಿಗಳೇ ಇವತ್ತು ಸಮಾಜದಲ್ಲಿ ಅದೆಷ್ಟೋ ಉದಾಹರಣೆ ನೋಡಿದ್ದೇವೆ ..ಒಂದೇ ಕುಲದಲ್ಲಿ, ಒಂದೇ ಕುಟುಂಬದಲ್ಲಿ ಮದುವೆ ಆದವರು..ಸಹ..ಬೇರೆ ಆಗಿರೋದು..ಕಚ್ಚಾಟ ಜಗಳ..ವಿಚ್ಚೇದನ..ಹೀಗೆ..
...ಕಾಲ ಕೂಡ ಬದಲಾಗಿದೆ..ನಮಗೆ..ನಮ್ಮ ಮಕ್ಕಳ ಸಂತೋಷಕ್ಕಿಂತ..ಇನ್ನೇನು..ಬೇಕು..
ಆ ಹುಡುಗ ಕೂಡ ನನಗೆ ಗೊತ್ತಿರುವವನು..ಸಂಸ್ಕಾರವಂತ..ಜಾತಿ ಬೇರೆ ಅನ್ನೋ ಕಾರಣಕ್ಕೆ..ನೀವು ಈ ಮದುವೆ ನಿಲ್ಲಿಸುವುದು..ಸರಿಯೇ..?
ಅಲ್ಲ ಸರ್..ಅದು....
ನೋಡಿ ಶಾಸ್ತ್ರಿಗಳೇ..ಭಗವದ್ಗೀತೆ ಪ್ರವಚನದಲ್ಲಿ ನೀವೇ ಒಮ್ಮೆ ಹೇಳಿದ್ದಿರಿ...''ಜನ್ಮತಹ..ಬ್ರಾಹ್ಮಣ್ಯಕ್ಕಿಂತ..ಕರ್ಮತಹ..ಭ್ರಾಹ್ಮಣ್ಯ. ಅಂತ..ನಾವು ಮಾಡುವ ಕರ್ಮವು ಸಹ ನಮ್ಮ ಕುಲವನ್ನು ನಿರ್ಧರಿಸುತ್ತೆ..ಅಂತ...ಅಂದು..ನನ್ನ ತಂದೆಯ ಜೊತೆ ನೀವು ಈ ವಿಚಾರವಾಗಿ..ಚರ್ಚೆ..ಕೂಡ ಮಾಡಿದ್ದ್ರಿ.ನಾನು ಅಂದು..ಅವರ ಜೊತೇಲಿ ಇದ್ದೆ..
ನಿಮ್ಮ ಮಾತುಗಳು..ನನ್ನನ್ನು..ಹೆಚ್ಚು..ಕಾಡಿತ್ತು..ಧರ್ಮ, ಸತ್ಯ, ನ್ಯಾಯ, ನೀತಿ,,ಇವೆ ನಮ್ಮ ಬದುಕಿಗೆ ದಾರಿ ದೀಪ ಅಂತ ಹೇಳಿದ್ರಿ..ನಾನು ಇಂದು ಶಾಸಕನಾದರು....ಈ ಮಾರ್ಗದಲ್ಲಿ ನಡೆಯಲು..ನಿರಂತರ ಪ್ರಯತ್ನ ಪಡುತ್ತಿರುತ್ತೇನೆ..
ಇವೆಲ್ಲವನ್ನೂ..ನಾನು ಯಾಕೆ ಹೇಳುತ್ತಿದ್ದೇನೆ..ಅಂದರೆ..ಆ ಹುಡುಗ..ತುಂಬಾ ಒಳ್ಳೆಯವನು..ಸಂಸ್ಕಾರವಂತ.ಬೇರೆ ಜಾತಿ ಎಂಬ ಒಂದೇ ಕಾರಣಕ್ಕೆ..ಅವರಿಬ್ಬರನ್ನು ನೀವು..ಬೇರೆ ಮಾಡುವುದು...ಸರಯಾಯಲ್ಲ..ಅನ್ನಿಸುತ್ತೆ..
.....
ನನ್ನ..ಮಾತಿನಲ್ಲಿ ಏನಾದ್ರು..ತಪ್ಪಿದ್ದರೆ..ದಯವಿಟ್ಟು..ಕ್ಷಮಿಸಿ..
ನಾನಿನ್ನು..ಬರುತ್ತೇನೆ..
...........

ಇಡೀ ದಿನ..ಯೋಚಿಸಿ..ಅಂತು..ಒಂದು ನಿರ್ಧಾರಕ್ಕೆ..ಬಂದರು..ಶಾಸ್ತ್ರಿಗಳು..
ಶಾಸಕರ ಮನೆ ಒಳಗೆ ಬಂದು..ಹೇಳದರು..
ಸಾರ್..ನೀವು ಹೇಳಿದ ಮಾತುಗಳು..ನನಗೆ ಸರಿ ಅನ್ನಿಸಿತು..ನನಗಿಂತ ಚಿಕ್ಕವರಾದರು..ಒಳ್ಳೆ ಸಂಧರ್ಬದಲ್ಲಿ..ಎಲ್ಲ ವಿಚಾರಗಳನ್ನು..ನೆನಪಿಸಿ...ಜಾತಿಗಿಂತ..ಮನುಷ್ಯತ್ವ ಮುಖ್ಯ,,ನನ್ನ ಮಗಳ ಸುಖ..ಸಂತೋಷ..ಮುಖ್ಯ..ಅನ್ನೋದು ನೀವು..ನೆನಪು ಮಾಡಿ..ಕೊಟ್ಟಿರಿ..ಇಷ್ಟವಿಲ್ಲದ..ಯಾವುದೊ ಮದುವೆ ಆಗಿ..ಬದುಕಿನ ಪ್ರತಿ ಹಂತದಲ್ಲೂ..ನರಕ ಯಾತನೆ..ಅನುಭವಿಸಿದ್ದಕ್ಕಿಂತ..ಇಷ್ಟ ಪಟ್ಟವನೆ ಜೊತೆ.ಮದುವೆ ಯಾಗಿ..ನೆಮ್ಮದಿ ಯಗಿರುವುದೋ..ಮೇಲು..
ನಾನು..ಒಪ್ಪಿದೇನೆ..ಸರ್..ಈ ಮದುವೆಗೆ..

.....
ವಿಷಯ ತಿಳಿದ..ಪಂಕಜ್..ಹಾಗು..ಶಾಂಭವಿ..ಗೆ..ಸಂಭ್ರಮವೋ..ಸಂಭ್ರಮ....ಅವರ ಹೊಸ ಬದುಕಿಗೆ ಪ್ರವೇಶ ಸಿಕ್ಕಿತ್ತು....ಪ್ರೇಮ ಪಕ್ಷಿಗಳಾಗಿ..ಹಾರಡುತ್ತಿದ್ದರೆ..
ಇತ್ತ ಶಾಸ್ತ್ರಿಗಳು..ಮನದಲ್ಲೇ..ಅವರನ್ನು ಹರಸುತ್ತಿದ್ದರು..
.....

-ಹೆಚ್.ಆರ್.ಪ್ರಭಾಕರ್.

No comments:

Post a Comment