Pages

Tuesday, September 27, 2011

ಪರ್ವಕಾಲ (ಭಾಗ -3)




(ಮೊದಲ ಎರಡು ಭಾಗ ಓದಿ ನಂತರ ಇದನ್ನು ಓದಿಕೊಳ್ಳಿ)

ಅವಳು ಅತ್ತ ಹೋಗುತ್ತಿದ್ದ ಹಾಗೆ ನನಗೆ ಚಿಂತೆ ಶುರು ಆಯಿತು ನನ್ನ ಬದುಕಿನಲ್ಲಿ ನಡೆದ ಒಂದು ಘಟನೆಯನ್ನು ಹೇಳುವುದೋ ಬೇಡವೋ ಎಂದು. ಹೇಳಿದರೆ ಅವಳು ಏನೆಂದುಕೊಳ್ಳುವಲೋ..

ರಾತ್ರಿ ಎಲ್ಲ ಇದೆ ಚಿಂತೆ..ಪದೇ ಪದೇ ಅವಳ ಮೆಸೇಜ್ ಬರುತ್ತಿತ್ತು ನಾನು ಅದಕ್ಕೆ ಉತ್ತರಿಸುತ್ತಿದ್ದೆ ....ರಾತ್ರಿ ಹನ್ನೆರಡಾಯಿತು...ಗುಡ್ ನೈಟ್ ಡಿಯರ್...ಅಂದಳು..
ನಾನು ಗುಡ್ ನೈಟ್ ಅಂದು...ಮಲಗಲು ಯೆತ್ನಿಸಿದೆ..

ಆದರೆ ನಿದ್ದೆ ಹತ್ತಿರವೂ ಸುಳಿಯಲಿಲ್ಲ

ಒಮ್ಮೆ ಪ್ರೀತಿಯ ಮುಳುಗಿದಾಗ ಪ್ರತಿ ಪ್ರೇಮಿಯ ನಡುವೆ ಅಂತರ ಇರಬಾರದು..ಗುಟ್ಟುಗಳು ಇರಬಾರದು ಎಲ್ಲ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬೇಕು...ಇಬ್ಬರ ಮನಸು ಬಿಳಿ ಹಾಳೆಯ ರೀತಿ ಇರಬೇಕು ಎಂಬ ನಮ್ಬಿಕೆಯವ ನಾನು...ಈ ಘಟನೆ ತುಂಬಾ ಹಳೆಯದು ಅಲ್ಲ ತೀರ ೬ ತಿಂಗಳ ಅಂತರದ್ದು ಅಷ್ಟೇ..ಅವಳು ಡೆಲ್ಲಿ ಪ್ರವಾಸಕ್ಕೆ ಹೋದಾಗ ನನಗೆ ಗೊತ್ತಾಗಿದ್ದು...

ಇಲ್ಲಿ ತಪ್ಪು ಒಪ್ಪಿನ ವಿಚಾರಕ್ಕಿಂತ ಅವಳ ಮನಸ್ಸಿಗೆ ಬೇಸರವಗುತ್ತದೆಯೇನೋ ಎಂಬ ದಿಗಿಲು..

ಬೆಳಗಾಯಿತು...

ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ..ತಯಾರಾದೆ...ಮೆಸ್ಜ್ ಬಂತು, ಡಿಯರ್ ..ಇನ್ನು ಅರ್ಧ ಗಂಟೆ ಕಣೋ ನಮ್ಮ regular place ಗೆ ಬರ್ತೀನಿ ಬಾ ಆಯ್ತಾ..ಅಂದಳು..

ಓಕೆ..ಅಂದೇ...

ಆ ಸ್ಥಳಕ್ಕೆ ಹೋಗುವ ಹೊತ್ತಿಗೆ ಅವಳು ಕಾಯುತ್ತ ಕುಳಿತಿದ್ದಳು..ನಾನು ಹೋದೆ..ಹಾಯ್ ...ಡಿಯರ್..ಅಂದು...ಓಡಿ ಬಂದು ಬುಜಕ್ಕೆ ಒರಗಿದಳು..

ಹೇಳು ರಾಜ ...ನಾನು ನಿನ್ನ ಬಗ್ಗೆನು ಕೇಳಬೇಕು...ನಾನಿಲ್ಲದ ಸಮಯದಲ್ಲಿ ನೀ ಏನು ಮಾಡುತ್ತಿದ್ದೆ..ತುಂಬಾ ಬೋರ್ ಆಯ್ತಾ..ನನ್ನ ಮೇಲೆ ಕೊಪಾ ಬಂತಾ ...ಸಾರೀ ರಾಜ...ಅಂದಳು...

ಪರವಾಗಿಲ್ಲ ಬಿಡು ಚಿನ್ನ ಈಗ ನೀನು ನನ್ನ ಜೊತೆ ಇದಿಯಲ್ಲ...ಅಷ್ಟು ಸಾಕು...ನಿನ್ನ ಮೇಲೆ ನಾನು ಕೋಪ ಮಾಡ್ಕೊತೀನ...ಡಿಯರ್..ಕಳ್ಳಿ..ಹೀಗೆನ ನೀ ನನ್ನ ಅರ್ಥ ಮಾಡ್ಕೊಂಡಿರೋದು...?

ಇಲ್ಲ ರಾಜ ಸುಮ್ನೆ ಕೇಳಿದೆ..ನನ್ನ ಬಂಗಾರು ಹಾಗೆಲ್ಲ ನನ್ನ ಮೇಲೆ ಕೋಪ ಮಾಡ್ಕೊಲ್ಲೋಲ್ಲ ಅಂತ ನನಗೆ ಗೊತ್ತು ಕಣೋ..ಅಂದಳು..

ಪುಟ್ಟ ನಾ ನಿನಗೆ ಒಂದು ವಿಷ್ಯ ಹೇಳಬೇಕು...ಅಂದೇ..ಏನೋ ಅದು..ಅದಕ್ಕೆ permission ಕೇಳಬೇಕ..ಅಂದಳು..ಓಕೆ..ಸಾರಿ ಅಂದೇ..

ನಾ ಹೇಳಲು ಶುರು ಮಾಡಿದೆ..

ಒಮ್ಮೆ ನಮ್ಮ ಪರಿಚಯದವರ ಮನೆಗೆ ಹೋಗಿದ್ದೆ...ಒಂದು ವರ್ಷದ ಹಿಂದೆ..ಅಲ್ಲೊಬ್ಬಳು ಹುಡುಗಿ ಬಂದಿದ್ದಳು..ಅವಳ ಹೆಸರು ಸ್ನೇಹ..ಅಂತ..MBA ಮಾಡುತ್ತಿದ್ದಳು..ಅಲ್ಲಿ ಅವರು ಇವಳನ್ನು ನನಗೆ ಪರಿಚಯ ಮಾಡಿಸಿದರು..ನೋಡಿದ ಕೂಡಲೇ ತುಂಬಾ innocent ಹುಡುಗಿ ಅನ್ನಿಸಿತು..ಮೊದಲ ಭೇಟಿಯಲ್ಲೇ ತುಂಬಾ ಹರಟೆ ಹೊಡೆದ್ವಿ ...ಅವಳು ತುಂಬಾ ಮಾತಾಡುತ್ತ ಮಾತಾಡುತ್ತ ನನ್ನ ಬಗ್ಗೆ ಕೇಳುತ್ತ ಹೋದಳು..ಒಂದೆರಡು ತಾಸು ಅಂದು ಅಲ್ಲಿ ಟೈಮ್ ಪಾಸ್ ಮಾಡಿದ್ವಿ..

ನಂತರ ನಾನು ಮನೆಗೆ ಬಂದೆ..

ಒಂದೆರಡು ದಿನ ಕಳೆದ ಮೇಲೆ ಅವಳಿಂದ ಫೋನ್ ಬಂತು...ನಾನು..ಕೇಳಿದೆ ಯಾರು ಎಂದು...ಅವಳು ಯಾರು ಅಂತ ಗೊತ್ತಾಗ್ಲಿಲ್ವ..ಬುದ್ದು..ಅಂದಳು..ಅರೆ ಯಾರಪ್ಪ ನನ್ನ ಹೀಗಂತಾರೆ ಅಂತ ಯೋಚಿಸಿದೆ...ಅಷ್ಟರಲ್ಲಿ ಅವಳೇ ಹೇಳಿದಳು ನಾನ್ ರೀ ಸ್ನೇಹಾ..ಅಂದಳು..

ಒಹ್..ಹಾಯ್..ಹೇಗಿದ್ದೀರ ಅಂದೇ..i am great...ಅಂದಳು..ಕಾಲೇಜ್ಗೆ ಹೋಗಿಲ್ವಾ

ಇಲ್ಲ ರೀ ಇವತ್ತು ಚಕ್ಕರ್ ಹಾಕಿದ್ದೇನೆ..ಅಮ್ಮನ ಜೊತೆ ನಮ್ಮ ಮಾವನ ಮನೆಗೆ ಹೋಗಬೇಕಿತ್ತು..ಅದಕ್ಕೆ..ಅಂದಳು.

ಮುಂದೆ..?

ಏನಿಲ್ಲ ನೀವ್ ಹೇಳ್ಬೇಕು..handsome..ಅಂದಳು..ಒಹ್..comman yaar..ಅಂದೇ..

ಯಾಕೆ ನಾನ್ ಹೇಳಿದ್ದು ಸುಳ್ಳ..ಅಂದಳು.ಮತ್ತೇನು ಅಂದೇ..?

ಏನಪ್ಪಾ ಈ ಹುಡುಗರು compliments ಕೊಟ್ಟರು ಬೇಡ ಅಂತಾರೆ..ಅಂದಳು..

ಎನಿವೇ ...ಥ್ಯಾಂಕ್ಸ್ ಅಂದೇ..ಹೇಗಿದೆ...ಜೀವನ...? ಅದೇ ಮಾಮೂಲಿ ಬದುಕು ಕಣ್ರೀ ಅಂದೇ..

ನಾನು ಆಗಾಗ ಈ ತರ ತೊಂದರೆ ಕೊಡ್ತಾ ಇರ್ತೀನಿ ಓಕೆ ನ..ಅಂದಳು..ನೋ ಪ್ರಾಬ್ಲಮ್ ಅಂದೇ.

ಅಂದು ಆಫೀಸಿನಲ್ಲಿ ತುಂಬಾ ಕೆಲಸ ಇತ್ತು ರಾತ್ರಿ ಒಂಬತ್ತು ಘಂಟೆ ದಾಟಿತ್ತು ಮನೆಗೆ ಬಂದು ರಿಲಾಕ್ಷ್ ಮಾಡುತ್ತಿದ್ದೆ..ಮತ್ತೆ ಫೋನ್ ರಿಂಗ್ ಆಯಿತು..

ಅವಳೇ ?

ಹಾಯ್ ಸ್ನೇಹ..ಅಂದೇ..ಹಾಯ್ ಅಂದಳು..ಹೀಗೆ ಹರಟುತ್ತ ಹೋದೆವು..

ನಾ ಹೇಳಿರಲಿಲ್ವಾ ನಿಮಗೆ ತೊಂದರೆ ಕೊಡ್ತಾ ಇರ್ತೀನಿ ಅಂದಳು..ಪರವಾಗಿಲ್ಲ ಹೇಳೇ (? ) ಅಂದೇ..

wat..? ಅಂದಳು..

ನೋಡು ನೀ ಇನ್ನು ಪ್ರತಿ ದಿನ ಫೋನ್ ಮಾಡ್ತೀಯ ಅಂತ ಗೊತ್ತಾಯ್ತು..ಸೊ ..you are my friend..ಇನ್ನು ಹೋಗಿ ಬನ್ನಿ ...ಈ ಮರ್ಯಾದೆ ಬೇಕಾ ? ಅಂದೇ..

ಆಯಿತು..ಬಿಡೋಲೋ..ಅಂದಳು..

ನೀನು ತುಂಬಾ ಫಾಸ್ಟ್ ಕಣೆ..ಅಂದೇ ನಿನ್ನ ಸಹವಾಸಕ್ಕೆ ಬಿದ್ದೆನಲ್ಲ...ಫಾಸ್ಟ್ ಅಗ್ಲೆಬೇಕಲ್ವಾ.ಅಂದಳು..

ಹೀಗೆ ನಡೆಯುತ್ತಿತ್ತು..ಪ್ರತಿ ದಿನ ನಮ್ಮ ಸಂಭಾಷಣೆ..ಅವಳು ಕಾಲೇಜಿನ ವಿಚಾರ, ಮನೆಯ ವಿಚಾರ, ಅವಳ ಗೆಳತಿಯರ ವಿಚಾರ ಎಲ್ಲ ಹೇಳುತ್ತಾ ಹೋಗುತ್ತಿದ್ದಳು...ನಾನು ನನ್ನ ಆಫೀಸಿನ ವಿಚಾರ ಮನೆಯ ವಿಚಾರ ಎಲ್ಲ ಹೇಳುತ್ತಿದ್ದೆ..

ಮಧ್ಯೆ ಮಧ್ಯೆ ಒಂದಷ್ಟು ಮೆಸೇಜ್ ..ನಾನು ತುಂಬಾ ಬ್ಯುಸಿ ಅಂತ ಗೊತ್ತಿದ್ದರು..ಹೇಯ್ ..ಎಫ್.ಎಂ. ಹಾಕೋ..ಒಳ್ಳೆ ಹಾದು ಬರುತ್ತಿದೆ..ನಿನ್ನ ಇಷ್ಟದ ಹಾದು..ಅನ್ನುತ್ತಿದ್ದಳು..

ನಾನು..ನಾ ಬ್ಯುಸಿ ಇದೀನಿ ಕಣೆ..ಡಿಸ್ಟರ್ಬ್ ಮಾಡಬೇಡ ಅಂದರು ಅವಳು ಕೇಳುತ್ತಿರಲಿಲ್ಲ..

ಒಂದು ದಿನ ನಾ ಮಾತಿನ ಮಧ್ಯೆ ಯಾವುದೊ ಒಂದು ಸಿಂಪಲ್ ಪ್ರಶ್ನೆ ಕೇಳಿದೆ ಅದಕ್ಕೆ ಅವಳು ಉತ್ತರ ಹೇಳಲಿಲ್ಲ..ನಾನಂದೆ..ಆಹಾ ದೇವರೇ..ಏನಪ್ಪಾ ಇವಳಿಗೆ ಏನು ಗೊತ್ತಿಲ್ಲ ಅಂದೇ

ಅದಕ್ಕವಳು...ಹಲೋ ನನಗೂ ಎಲ್ಲ ಗೊತ್ತು...ಅಂದಳು

ನೀನು ತುಂಬಾ ಪೆದ್ದಿ ಅಂತ ನನಗೆ ಗೊತ್ತು ಬಿಡೆ..

ನನ್ನ ಹತ್ರ ವಾದ ಮಾಡಲು ಬರಬೇಡ ಅಂದೇ..ಸರಿ ಹಾಗಾದ್ರೆ ಇವತ್ತಿಂದ ನಿನಗೆ ಒಂದು ಜವಾಬ್ದಾರಿ ಅಂದಳು..

ಅಬ್ಬ ಏನಪ್ಪಾ ಅದು..

ನೀನು ನನ್ನ General Knowledge ನ improve ಮಾಡ್ಬೇಕು ಆಯ್ತಾ..ಅಂದಳು

ನಾನು ಸರಿ ಅಂದೇ..ಅವತ್ತಿಂದ ಶುರು ಆಯಿತು..ನನ್ನ ಜವಾಬ್ದಾರಿ...

ಅವಳಿಗೆ ಗೊತ್ತಿಲ್ಲದ ಒಂದು ಪ್ರಶ್ನೆ ಕೇಳೋದು..ಚೆನ್ನಾಗಿ ರೇಗಿಸೋದು..ನೀನು ಬುದ್ದು, ಪೆದ್ದಿ, ದಡ್ಡಿ, ಏನು ಗೊತ್ತಲ್ಲ ಬರೀ ಮೇಕ್ ಅಪ್ ಮಾಡೋದಷ್ಟೆ ಗೊತ್ತು ಹಾಗೆ ಹೀಗೆ..ಅಂತ...ಅವಳು ಹಾಗೇನಿಲ್ಲ ಅಂತ..ವಾದ ಮಾಡ್ತಾನೆ ಇರುತ್ತಿದ್ದಳು..

ನಮ್ಮಿಬ್ಬರ ಸ್ನೇಹಾ ಹೀಗೆ ಮುಂದುವರೆಯುತ್ತಿತ್ತು..ಅವಳು ಏನೆ suggestion ಬೇಕಾದ್ರೂ ನನ್ನೇ ಕೇಳುತ್ತಿದ್ದಳು..

ಒಂತರ ತುಂಟತನ ಅಮಾಯಕತೆ..ಸ್ವಲ್ಪ ಹೆಚ್ಚೇ ಇತ್ತು...ಪಟ ಪಟನೆ ನಿರಂತರವಾಗಿ ಮಾತನಾಡುತ್ತಲೇ ಇರುತ್ತಿದ್ದಳು..

(....ಮುಂದುವರೆಯುವುದು )

'ಕ್ರೌರ್ಯ'





ಕಾಡಿನ ಹಾದಿಯಲ್ಲಿ ನಡೆಯುತ್ತಿದ್ದಾಗ

ಕಂಡಿತೊಂದು ಹರಿಣಿ

ಇಷ್ಟ ಪಟ್ಟು ನೋಡಲು ನಾ

ಬೆದರಿ ಓಡಲು ಆರಂಬಿಸಿತು

ಅದರ ಗಾಬರಿ ಕಂಡು ನನಗೆ

ಖೆದವೆನಿಸಿ ಮಂಕಾದೆ

ಒಂದಷ್ಟು ದಿನ ಅದೇ ಗುಂಗು

ಕಾರಣ ಹುಡುಕಲು ಪ್ರಯತ್ನಿಸಿದೆ

ಹೊಳೆಯಲಿಲ್ಲ

ಅದರ ಏಕಾಂತಕ್ಕೆ ಭಂಗ ತಂದಿದ್ದೆ

ಎಲ್ಲ ಪ್ರಾಣಿಗಳು ತುಂಬಾ ಸೂಕ್ಷ್ಮವಲ್ಲ ಎನಿಸಿತು

ಮನುಷ್ಯ ಪ್ರಾಣಿಯನ್ನು ಸೇರಿ

ದಿನೇ ದಿನೇ ಕಾಡು ನಾಡಾಗುತ್ತಿದ್ದು

ಎಲ್ಲಿ ಜೀವಿಸಬೇಕು ಈ ಪ್ರಾಣಿಗಳು

ಮನುಷ್ಯನ ಆಸೆಗೆ ಇನ್ನೆಷ್ಟು ಬಲಿ ಬೇಕೋ..

ಹುಲಿಯೂ ಇದಕ್ಕೆ ಹೊರತಲ್ಲ

ಅದರ ಸಂತತಿಯೂ ಇಂದು ಬೆರಳೆಣಿಕೆ

ಪ್ರಕೃತಿ ಕೊಟ್ಟ ವರದ ನಿರಂತರ ದುರುಪಯೋಗ

ಪ್ರಾಣಿ,ಪಕ್ಷಿ,ವನರಾಶಿ

ಮುಂದಿನ ಪೀಳಿಗೆಗೆ ಇತಿಹಾಸವೇನೋ..

ಪ್ರಾಣಿ ತೊಂದರೆ ಕೊಟ್ಟಾಗ

ಮನುಷ್ಯ ಸುಮ್ಮನಿದ್ದಾನೆಯೇ

ಈಗ ಯೋಚಿಸಿ

ಪ್ರಾಣಿ ಸಂಕುಲ ಏನು ಮಾಡಬೇಕು?

Monday, September 26, 2011

'ಅಮ್ಮ'











ತಪ್ಪು ಹೆಜ್ಜೆ ಇಟ್ಟಲ್ಲೆಲ್ಲ ಸರಿ ದಾರಿ ತೋರಿದೆ

ತೊದಲುತ್ತಿದ್ದಾಗ ಮಾತು ಕಲಿಸಿದೆ

ಹಸಿದಾಗ ಉಣಬಡಿಸಿದೆ

ಉತ್ತಮ ಮನುಷ್ಯನಾಗಲು ನೀತಿ ಕಥೆ ಹೇಳಿದೆ

ಬೇಸರದಲ್ಲಿದ್ದಾಗ ನಗಿಸಲು ಪ್ರಯತ್ನಿಸಿದೆ

ಖುಷಿಯಲ್ಲಿದ್ದಾಗ ಸಂಭ್ರಮಿಸಿದೆ

ಮಾತಾಡಲು ಕಲಿತಾಗ ಹಿಗ್ಗಿದೆ

ನಡೆಯಲು ಪ್ರಯತ್ನಿಸಿದಾಗ ಖುಷಿಗೊಂಡೆ

ಶಾಲೆಗೇ ಹೋಗುವಾಗ ಧೈರ್ಯ ತುಂಬಿದೆ

ಬದುಕಿನ ಒಂದೊಂದೇ ಮೆಟ್ಟಿಲು ಹತ್ತಲು ಇಂಬು ನೀಡಿದೆ

ಅನಾರೋಗ್ಯನಾದಾಗ ಗಾಬರಿ ಪಟ್ಟೆ

ಬದುಕಿನ ಪ್ರತಿ ಘಳಿಗೆಯನ್ನು ತಿದ್ದಿ ತೀಡಿದೆ ,

ನಿನ್ನ ಬದುಕಿನುದ್ದಕ್ಕೂ ತ್ಯಾಗಿಯಾದೆ

ಬದುಕನ್ನು ಬರಿಗಾಲಲ್ಲಿ ನಡೆದೇ

ಕಷ್ಟಗಳನ್ನೇ ಹಾಸು ಹೊದ್ದು ಕಳೆದೆ

ಕಡೆಗೆ

ನಾ ಸಾಧನೆಯತ್ತ ಮುಖ ಮಾಡಿದಾಗ

ನಿನ್ನನ್ನು 'ಸುಖಿ' ಆಗಿಸಲೆಂಬ ಆಸೆ ಪಟ್ಟಾಗ

ಅದರ

ಸವಿಯನ್ನು ಸವಿಯಲು ಒಲ್ಲೆ ಎಂಬಂತೆ

ನಿನ್ನ ಕಾಯಕವನ್ನು ಮಾತ್ರ ನಿಸ್ವಾರ್ಥವಾಗಿ ಮುಗಿಸಿ

ನನಗೆ ಆ 'ಭಾಗ್ಯ' ನೀಡದೆ

ನೀ ನನ್ನನ್ನು ಆಗಲಿದೆ ...

ಅಮ್ಮಾ

ನೀ ಏಕೆ ಹೀಗೆ ಮಾಡಿದೆ ...?

Saturday, September 24, 2011

ಬದುಕು-ಬವಣೆ !!!: 'ಪರ್ವಕಾಲ' (ಭಾಗ-2)

ಬದುಕು-ಬವಣೆ !!!: 'ಪರ್ವಕಾಲ' (ಭಾಗ-2): ( 'ಪರ್ವ ಕಾಲ' ದ ಮೊದಲ ಕಂತು ಓದಿದರೆ ಮಾತ್ರ ನಿಮಗೆ ಸಂಪೂರ್ಣ ಚಿತ್ರಣ ದೊರೆಯಬಹುದು..) ಡೆಲ್ಲಿ ಏರ್ ಪೋರ್ಟ್ನನಲ್ಲಿ ಇಳಿಯುತ್ತಿದ್ದ ಹಾಗೆ ಕಾರು ಬಂದು ನಮ್ಮನ್ನು...

ಕೋಮಲಾಂಗಿ ...!








ಬಾಳ ಪಯಣದಲ್ಲಿ

ನಾ ದೋಣಿಯಲ್ಲಿದ್ದೆ

ಹುಟ್ಟು ಹಾಕುತ್ತ ನಾ ಸಾಗುತ್ತಿದ್ದೆ ಮುಂದೆ ಮುಂದೆ

ತಿಳಿ ನೀರ ಆ ನದಿಯಂಚಿನಲ್ಲಿ

ಕಂಡಿತೊಂದು ಮಿಂಚು

ಆ ಮಿಂಚಿನ ಬಳಿ ಹೋದಂತೆಲ್ಲ

ಅದರ ಪ್ರಕಾಶಮಾನದ ಅರಿವಾಗುತ್ತ ಹೋಯ್ತು

ಸುಂದರ ಸುಕೋಮಲ ಮುಖ

ಚೆಂದುಳ್ಳಿ ಚೆಲುವೆಯೇ ನಿಂತಿದ್ದಳಲ್ಲಿ

ಅವಳನ್ನು ನೋಡುತ್ತಿದ್ದ ಹಾಗೆ

ಮಾತು ಮರೆಯಿತು ಎನಗೆ

ಹೋಗಿ ನಿಲ್ಲಿಸಿದೆ ದೋಣಿ

ಅವಳು ಬಂದು ಕೂತಳು

ನಾ ಕೇಳಿದೆ ಎಲ್ಲಿಗೆ ಎಂದು

ಅವಳಂದಳು ನೀ ಇರುವಲ್ಲಿಗೆ ಎಂದು

ನಾ ಮೂಕವಿಸ್ಮಿಥನಾದೆ

ಹೀಗೂ ಉಂಟೆ ಎಂದು..?

ಥಟ್ಟನೆ ಅಮ್ಮ ಬಂದು ಮುಖಕ್ಕೆ ನೀರೆರಚಿ

ಏಳು ಬೆಳಗಾಯಿತೆಂದಳು...!

Tuesday, September 20, 2011

'ಪರ್ವಕಾಲ' (ಭಾಗ-2)






(
'ಪರ್ವ ಕಾಲ' ದಮೊದಲ ಕಂತು ಓದಿದರೆ ಮಾತ್ರ ನಿಮಗೆ ಸಂಪೂರ್ಣ ಚಿತ್ರಣ ದೊರೆಯಬಹುದು..)

ಡೆಲ್ಲಿ ಏರ್ ಪೋರ್ಟ್ನನಲ್ಲಿ ಇಳಿಯುತ್ತಿದ್ದ ಹಾಗೆ ಕಾರು ಬಂದು ನಮ್ಮನ್ನು ಹೋಟೆಲ್ಲಿಗೆ ಕರೆದೊಯ್ದಿತು. ಹೋಗಿ ಫ್ರೆಶ್ ಆಗಿ ಮೊದಲ ದಿನ ಪ್ರವಾಸಿ ಸ್ಥಳಗಳ ಸುತ್ತಾಟ ಆರಂಭವಾಯ್ತು.

ನನಗಂತೂ ಹೋಟೆಲಿನ ರೂಮಿನಲ್ಲಿ ಒಬ್ಬಳೇ ಇದ್ದು ನಿನ್ನೊಂದಿಗೆ ಫೋನಿನಲ್ಲಿ ಮಾತನಾಡೋಣ ಅನ್ನಿಸುತ್ತಿತ್ತು...ಆದರೆ ಅದಕ್ಕೆ ಅವಕಾಶ ಇರಲಿಲ್ಲ..ಅಲ್ಲಿ ಯಾವುದೇ ಪ್ರವಾಸಿ ಸ್ಥಳಕ್ಕೆ ಹೋದರು ಕೈ ಕೈ ಹಿಡಿದು ನಡೆಯುತ್ತಿದ್ದ ಜೋಡಿಗಳೇ ಕಾಣಿಸುತ್ತಿದ್ದರು...ಆಗ ಪ್ರತಿಕ್ಷಣ ನಿನ್ನದ್ದೇ ನೆನಪು..ನೀನು ನನ್ನ ಜೊತೆ ಬಂದಿದ್ದಾರೆ ಎಷ್ಟು ಚೆನ್ನಾಗಿರುತ್ತಿತ್ತು..ಅದು ನಾವಿಬ್ಬರೇ..ಆಹಾ..ನೆನಪಿಸಿಕೊಂಡ ಪ್ರತಿ ಘಳಿಗೆಯೂ ಚೆಂದ..ಚೆಂದ..

ಯಾವತ್ತು ನಿನ್ನ ನೋಡುವೆನು..ಯಾವತ್ತು ನಿನ್ನ ಕೈ ಹಿಡಿದು ನಡೆಯುವೇನೋ ಎಂಬ ಯೋಚನೆಯಲ್ಲೇ ಕಾಲ ಕಳೆದೆ..ಅವತ್ತವತ್ತಿನ ಸುತ್ತಾಟ ಮುಗಿಸಿ ರೂಮಿಗೆ ಬಂದರೆ ನಿನಗೆ ಮೆಸೇಜ್ ಮಾಡಲಿಕ್ಕೆ, ಫೋನ್ ಮಾಡಲಿಕ್ಕೆ..ಸಾಕಷ್ಟು ಸರ್ಕುಸ್ ಮಾಡಬೇಕಿತ್ತು..ಕಾರಣ ಮನೆಯಲ್ಲಾದರೆ ಆ privacy ಇರುತ್ತಿತ್ತು..ಅಲ್ಲಿ ಅಮ್ಮ ಯಾವಾಗಲು ಜೊತೆಯಲ್ಲೇ ಇರುತ್ತಿದ್ದರು..ಒಂದೊಂದು ಮೆಸೇಜಿನ ಹಿಂದೆಯೂ, ಕಾಲ್ ನ ಹಿಂದೂ ನನ್ನ ಶ್ರಮ ಎಷ್ಟಿದೆ ಗೊತ್ತ ರಾಜ..ಅಂದು ನನ್ನತ್ತ ನೋಡಿದಳು..

ನಾನು ಕಣ್ಣಲ್ಲೇ..ಮುಂದುವರೆಸು..ಎಂದೇ..

ಈ ಹತ್ತು ದಿನದಲ್ಲಿ ನಾನು ನನ್ನ ಬದುಕಿನ ಹತ್ತು ವರ್ಷ ಕಳೆದೆನೇನೋ ಎಂಬಂತೆ ಭಾಸವಾಗುತ್ತಿತ್ತು..ಅಪ್ಪ ನಿರಂತರವಾಗಿ ಸ್ಥಳಗಳ ಮಹತ್ವದ ಬಗ್ಗೆ ಹೇಳುತ್ತಿದ್ದಾರೆ ಅಮ್ಮ ಅಲ್ಲಿ ಸಿಗುವ ವಸ್ತುಗಳು, ಬಟ್ಟೆಗಳು, ಇವುಗಳ ಬಗ್ಗೆ ಮಾತನಾಡುತ್ತಿದ್ದಳು..ಇನ್ನು ಅಣ್ಣ ಅಂತು..ಅವನದೇ ಲೋಕ..ಅವನಂತೂ ಯಾವಾಗಲು ಮೆಸೇಜ್ ಮಾಡ್ತಿದ್ದ..ಆದರೆ ನನಗೆ ಆ freedom ಇರಲಿಲ್ಲ ಎಷ್ಟೇ ಅಗಲಿ ಅವನು ಹುಡುಗ ...ಅವನನ್ನು ಹೆಚ್ಚು ಕೇಳುವುದಿಲ್ಲ..ಕೇಳಿದಾಗ ಆಫೀಸ್ ಕಾಲ್..ಮೆಸೇಜ್ ಅಂತ ಏನೋ ಒಂದು ನೆಪ ಹೇಳುತ್ತಿದ್ದ..

ಒಂದು ದಿನ ರಾತ್ರಿ ರಾತ್ರಿ ೨ ಗಂಟೆ ಆದರು ನಿದ್ದೆ ಹತ್ತಿರಲಿಲ್ಲ..ನಾನು ಬ್ಲಾಂಕೆಟ್ ಒಳಗೆ ಮೊಬೈಲ್ ಇಟ್ಟುಕೊಂಡು ಮೆಸೇಜ್ ಟೈಪ್ ಮಾಡ್ತಾ ಇದ್ದೆ...ಅಮ್ಮ ಅದೇಕೆ ಎಚ್ಚರ ಆಯ್ತೋ ಗೊತ್ತಿಲ್ಲ..ಅಷ್ಟೊತ್ನಲ್ಲೇ ಸುಪ್ರಭಾತ, ಸಹಸ್ರನಾಮ ಎಲ್ಲ ಆಯಿತು..

ನಾನು ತಾಜ್ ಮಹಲ್ ನ ಮುಂದೆ ಹೋಗಿ ನಿಂತೇ..ಅಳು ತಡೆಯಲಾಗಲಿಲ್ಲ..ಇಂತಹ ಸ್ಥಳಕ್ಕೆ ನಿನ್ನ ಜೊತೆ ಬಂದಿದ್ದರೆ..'ಆ ರೋಮಾನ್ಟಿಕ್' ಮೊಮೆಂಟ್ಸ್ ಹೇಗಿರುತ್ತಿತ್ತು..ಅಹ..ಮಿಸ್ ಆಯ್ತಲ್ಲ..ಛೆ...ನನ್ನ ರಾಜನ ಕೈ ಹಿಡಿದು ಆ ಪ್ರೇಮ ಸ್ಮಾರಕದಲ್ಲಿ ನಡೆದಾಡುತ್ತ ನಮ್ಮ ಒಲವಿನ ಕಥೆಯನ್ನು ಮೆಲುಕು ಹಾಕುತ್ತ ಜೊತೆ ಹೆಜ್ಜೆ ಹಾಕುತ್ತ ಈ ಲೋಕವನ್ನೇ ಮರೆತು ವಿಹರಿಸುತ್ತಾ...ಹೀಗೆ ಸಾಗುತ್ತಿತ್ತು ನನ್ನ ಯೋಚನಾ ಲಹರಿ...

ಏಯ್ .ಏನ್ ಕನಸು ಕಾಣುತ್ತ ಇದ್ದೀಯ..ಅಮ್ಮ ತಲೆಯ ಮೇಲೆ ಮೊಟಕಿದಾಗಲೇ ನಾನು ಭಾವಲೋಕದಿಂದ ಎಚ್ಚರಗೊಂಡದ್ದು ಕಣೋ..

ಆಗ್ರಾ ದಲ್ಲಿ ನಿನಗಾಗಿ ಒಂದು ಗಿಫ್ಟ್ ತರಲು ಎಲ್ಲರ ಕಣ್ ತಪ್ಪಿಸಿ ಹೋದೆ ಕಣೋ ಅಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಈ ಪ್ರೇಮದ ಸಂಕೇತ ಹಾಗು ಆ ಕಲಾಕೃತಿ ಮಾಡಿದ ರೀತಿ ಕಣೋ..ಇದನ್ನ ಪ್ಯಾಕ್ ಮಾಡಲು ಹೇಳಿದಾಗ ಸೇಲ್ಸ್ ಗರ್ಲ್ ಕೇಳಿದಳು..ಕಣೋ..'ಆಪ್ ಕಾ ಪ್ರೇಮಿಕಾ ನಾಮ್ ಕ್ಯಾ ಹಾಯ್ ಮೇಡಂ..ಇಸಕೇ ಊಪರ್ ಆಪ್ ದೊನೊಂಕ ನಾಮ್ ಲಿಖೂ..ಕೇಳಿದಳು..ನಾನು ಇಬ್ಬರ ಹೆಸರು..ಹೇಳಿದೆ..

ಆ ಗಿಫ್ತನ್ನು ಯಾರಿಗೂ ಕಾಣದಂತೆ ಕಾಪಾಡುವಲ್ಲಿ ನನಗೆ ಪ್ರಾಣವೇ ಹೋದಂಗಾಯ್ತು ಕಣೋ..ಎಲ್ಲರೂ ಕೇಳುವರೇ ಏನದು..ಏನದು..ಅಂತ..ಕಡೆಗೂ ಹೇಗೋ ಭದ್ರವಾಗಿ ಎರಡು ..ಮೂರು ಪ್ಯಾಕ್ಕಿಂಗ್ ಮಾಡಿಸಿ ಇಟ್ಟಿದ್ದೆ..ಇದು ನಿನಗೆ ನನ್ನ ಕೈಯಾರೆ ಕೊಡುವ ವರೆಗೂ..ಸಮಾಧಾನವೇ ಇರಲಿಲ್ಲ ಕಣೋ..ಈಗ ಸಮಾಧಾನ ಆಯಿತು..ನೋಡು..ನಕ್ಕಳು..ನಾನು ನಕ್ಕೆ..

ಒಟ್ಟಾರೆ ಮತ್ತೆ ಆದಷ್ಟು ಬೇಗ ನಾನು ನಿನ್ನ ಜೊತೆ ಅದೇ ಸ್ಥಳಗಳಿಗೆ ಹೋಗಬೇಕು ನಿನ್ನ ಜೊತೆ ಹೆಜ್ಜೆ ಹಾಕುತ್ತ..ದಿಲ್ಲಿಯ ಬೀದಿಗಳಲ್ಲಿ ಕೈ ಕೈ ಹಿಡಿದು ನಡೆಯಬೇಕು..ತಾಜ್ ಮಹಲಿನ ಅಂಗಳದಲ್ಲಿ ಕುಳಿತು ನಿನ್ನ ಪ್ರೀತಿಯ ಸವಿಯನ್ನ ಸವಿಯಬೇಕು..ಅಲ್ಲಿ ನಾವು ಪ್ರೇಮ ಪಕ್ಷಿಗಳಂತೆ ಹಾರಬೇಕು...ಆಯ್ತಾ..ಅಂದಳು..
ನಾನು ಅವಳ ಮುಂಗೈಯನ್ನು ಒತ್ತಿ..ಆಯಿತು..ಅಂದೇ..

ಹೀಗೆ ಪಟಪಟನೆ ಮಾತಾಡುತ್ತ ತನ್ನ ಡೆಲ್ಲಿ ಪ್ರವಾಸದ ಅನುಭವ ಹೇಳುತ್ತಾ ಹೇಳುತ್ತಾ ಸಂಜೆಯಾಗೆ ಹೋಯ್ತು..

ಚಿನ್ನು ಸಂಜೆ ಆಯಿತು ಇನ್ನು ನಿನ್ನ ಜೊತೆ ಸಾಕಷ್ಟು ವಿಚಾರಗಳು ನಿನ್ನನ್ನು ಕೇಳೋದಿದೆ..ಆದರೆ ಸಮಯ ಇಲ್ಲ ...ಮನೆಗೆ ಹೋಗಬೇಕು...ಅಮ್ಮ ಕಾಯ್ತಾ ಇರ್ತಾರೆ...ನಾಳೆ ಸಿಕ್ತೀನಿ ಆಯ್ತಾ..ಬೈ ಡಿಯರ್ ...ಅಂದು ಹತ್ತಿರ ಬಂದು ಬುಜದ ಮೇಲೆ ತಲೆ ಇಟ್ಟು..ಕಣ್ಣಲ್ಲೇ ತುಂಟ ತನ ತೋರಿ..ಹೊರಗೆ ಓಡಿದಳು..

ನಾನು ಬಾಗಿಲ ಬಳಿ ನಿಂತು..ಕೈ ಬೀಸುತ್ತಿದ್ದೆ...ಹೃದಯ ಭಾರವಾಗುತ್ತ ಹೋಯಿತು...!!

(ಮುಂದುವರೆಯುವುದು..)

Thursday, September 15, 2011

ಬದುಕು-ಬವಣೆ !!!: ನೀ ಬಂದು ನಿಂತಾಗ ....

ಬದುಕು-ಬವಣೆ !!!: ನೀ ಬಂದು ನಿಂತಾಗ ....: ಸುರಿಯುವ ಮಳೆಯಲಿ ನಡೆಯುತ್ತಾ ಮಳೆಯ ಘಮವನ್ನು ಸವಿಯುತ್ತ ನಿನ್ನೊಂದಿಗಿನ ಘಳಿಗೆಗಳನ್ನು ನೆನೆಯುತ್ತ ನಿನ್ನೋಡನಾಟದ ಸಂಭ್ರಮ ಸ್ಮರಿಸುತ್ತ ನಿನ್ನ ನೆನಪಲ್ಲಿ ನನ್ನ ನಾ...

Wednesday, September 14, 2011

ನೀ ಬಂದು ನಿಂತಾಗ ....



ಸುರಿಯುವ ಮಳೆಯಲಿ ನಡೆಯುತ್ತಾ

ಮಳೆಯ ಘಮವನ್ನು ಸವಿಯುತ್ತ

ನಿನ್ನೊಂದಿಗಿನ ಘಳಿಗೆಗಳನ್ನು ನೆನೆಯುತ್ತ

ನಿನ್ನೋಡನಾಟದ ಸಂಭ್ರಮ ಸ್ಮರಿಸುತ್ತ

ನಿನ್ನ ನೆನಪಲ್ಲಿ ನನ್ನ ನಾನೇ ಮೈ ಮರೆತಿದ್ದಾಗ

ಥಟ್ಟನೆ

ನಿನ್ನ ಆಗಮನವಾದಾಗ

ಮನದೊಳಗೆ ಸಂಭ್ರಮದ ಮಳೆ ಸುರಿಸಿದೆ

ನಿನ್ನದೇ ನಿರೀಕ್ಷೆಯಲ್ಲಿದ್ದಾಗ

ಆ ನಿರೀಕ್ಷೆ ಇನ್ನು ಹಸಿಯಾಗಿದ್ದಾಗ

ನನ್ನ ನಂಬಿಕೆ ಹುಸಿಯಾಗಲಿಲ್ಲ ಗೆಳತಿ

ಹುಸಿಯಾಗಲಿಲ್ಲ ...!!!

Tuesday, September 6, 2011

''ಪರ್ವ ಕಾಲ"







ಇನ್ನೇನಿದೆ ನನ್ನ ಬದುಕಲ್ಲಿ

ಎಲ್ಲವೂ ಶೂನ್ಯ ....ನಾನು ನನ್ನವರು ಎಂಬ ಮಮಕಾರವೂ ಇಲ್ಲ ನನ್ನವರು ಅಂತ ಯಾರೂ ಇಲ್ಲ

ಹೀಗೊಂದು ಯೋಚನೆ ಸುಳಿಯುತ್ತಲಿತ್ತು...ರೇಡಿಯೋ ದಲ್ಲಿ ಯಾರೋ ಯಾರೋ ಗೀಚಿ ಹೋದಾ..ಹಾಳೂ..ಹಣೆಯಾ ಬರಹ ..ಹುಚ್ಹ ಚಿತ್ರದ ಗೀತೆ ಬರುತ್ತಿತ್ತು...

ಮತ್ತೆ ನೆನಪುಗಳು ಬೇಡ ಬೇಡ ವೆಂದರು ಹಿಂದಕ್ಕೆ ಹೋಗುತ್ತಿತ್ತು..ಎಷ್ಟೇ ಪ್ರಯತ್ನ ಪೂರ್ವಕವಾಗಿ ನಿಗ್ರಹಿಸುವ ಪ್ರಯತ್ನ ಮಾಡಿದರು ಮನಸು ಕೇಳಲಿಲ್ಲ

'ಹೇ ರಾಜ ಹೇಗಿದಿಯೋ.ಚಿನ್ನು ತುಂಬಾ ದಿನ ಆಯಿತು ನಿನ್ನ ನೋಡಿ I miss u dear...ಅಂತ ಮೆಸೇಜ್ ಬಂದಾಗ ನನಗು ಅಷ್ಟೇ ಡಿಯರ್ ಅಂತ ರಿಪ್ಲೈ ಮಾಡಿದೆ. ಅವಳು ಅಪ್ಪ ಅಮ್ಮ ಹಾಗು ಅಣ್ಣನ ಜೊತೆಯಲ್ಲಿ ಡೆಲ್ಲಿಗೆ ಪ್ರವಾಸ ಹೋಗಿದ್ಲು. ೧೦ ದಿನದ ಮಟ್ಟಿಗೆ. ಹೋಗಿ ಇನ್ನು ೩ ದಿನವಷ್ಟೇ ಆಗಿತ್ತು.

ಅಂದು ಬೆಳಿಗ್ಗೆ ಏರ್ ಪೋರ್ಟ್ ಹತ್ತಿರಕ್ಕೆ ಹೋಗಿದ್ದೆ ವಿಶ್ ಮಾಡಲು ಅವಳು ಅಪ್ಪ ಅಮ್ಮ ಅಣ್ಣನ ಕಣ್ ತಪ್ಪಿಸಿ ಬಂದು ನನ್ನ ಭೇಟಿ ಆಗಿ ಸಂಕಟ ಪಡುತ್ತಿದ್ದಳು. ನನಗೆ ಹೋಗಲು ಇಷ್ಟ ಇಲ್ಲ ಆದರೆ ಅಪ್ಪ ಅಮ್ಮ ಕೇಳ್ತಾ ಇಲ್ಲ ಚಿನ್ನು ...ನಾನು ಹೋಗಿ ಬರ್ತೇನೆ.ಡಿಯರ್..ಆಯ್ತಾ..ಅಂತ ಹೇಳುವಾಗ ಅವಳ ಕಣ್ಣಲ್ಲೂ ನೀರು ಜಿನುಗುತ್ತಿತ್ತು ಹಾಗೆ ನಾನ್ನ ಕಣ್ಣಲ್ಲೂ ...ಬರೀ ಹತ್ತು ದಿನ ಚಿನ್ನು ಬಂದು ಬಿಡ್ತೀನಿ...ನೀನು ಹುಷಾರು...ದಿನಾ ಮೆಸೇಜ್ ಮಾಡ್ತೀನಿ ಟೈಮ್ ಸಿಕ್ಕಾಗ ಫೋನ್ ಮಾಡ್ತೀನಿ ಆಯ್ತಾ..ಟೆಕ್ ಕೇರ್ ಡಿಯರ್..i miss u a lot. ಅಂದು ಬೈ ಹೇಳುತ್ತಾ ಹೊರಡುತ್ತಿದ್ದರೆ...ಇಲ್ಲಿ ನನ್ನ ಹೃದಯ ಭಾರವಾಗುತ್ತ ಹೋಯ್ತು.

ಹೀಗೆ ಮೆಸಜ್ ಮಡಿದ ನಂತರ ಯಾರೋ ಬೆಲ್ ಮಾಡಿದ ಹಾಗಾಯ್ತು..ಹೋಗಿ ಬಾಗಿಲು ತೆಗೆದೇ...ಸಾರ್ ನಾವು ಡೈರೆಕ್ಟ್ ಮಾರ್ಕೆಟಿಂಗ್ ಇಂದ...ಅಂದ ಒಬ್ಬ ಸ್ಪುರದ್ರೂಪಿ ಹುಡುಗ..ನೋಡಿ ನಾನು ಬ್ಯುಸಿ ಇದ್ದೇನೆ...please donot disturb me. ಅಂತ ಬಾಗಿಲು ಹಾಕಿದೆ.

ಮತ್ತೆ ಹೋಗಿ ಮೊಬೈಲ್ ಕೈಗೆ ಎತ್ತಿಕೊಂಡೆ ನಂತರ ಮತ್ತೊಂದು ಮೆಸೇಜ್ ಬಂತು. ನಾನು ರಾತ್ರಿ ಫೋನ್ ಮಾಡ್ತೇನೆ ಡಿಯರ್..ಬೈ ಅಂತ..

ಮೊದಲ ಸಲ ಅವಳನ್ನು ನೋಡಿದ್ದು ನನ್ನ ಸ್ನೇಹಿತನ ಮನೆಯಲ್ಲಿ. ಅಂದು ಅಲ್ಲಿ ಯಾವುದೊ ಪೂಜೆ ಇತ್ತು. ನಾನು ಊಟದ ಸಮಯಕ್ಕೆ ಹೋದರಾಯಿತು ಎಂದು ನನ್ನ ಕೆಲಸದಲ್ಲಿ ತೊಡಗಿದ್ದೆ ...ಅವರ ಅಕ್ಕ ಫೋನ್ ಮಾಡಿದರು...ಎಲ್ಲಿದಿಯೋ..ಅಂತ...ಅಕ್ಕ ಬಂದೆ...೧೦ ನಿಮಿಷ...ಅಂದೇ..
..
ಸರಿ ಅಲ್ಲಿ ಹೋಗುವಷ್ಟರಲ್ಲಿ ಒಂದು ಸುಮಧುರ ಧ್ವನಿ ದೇವರ ನಾಮ ಹಾಡುತ್ತಿತ್ತು..ಅರೆ ಇದು ಯಾರ ಧ್ವನಿ ಅಂದುಕೊಂದು ಒಳಹೊಕ್ಕೆ..ಯಾರಿದು...ಎಂದು ನೋಡಿದೆ..
ತಿಳಿಗೆಂಪು ರೇಷ್ಮೆ ಸೀರೆ ಉಟ್ಟು ಕೈ ತುಂಬಾ ಬಳೆ ತೊಟ್ಟು ತನ್ನ ಉದ್ದ ಕೂದಲನ್ನು ಇಳಿ ಬಿಟ್ಟು ಶಿಸ್ತಾಗಿ ಕುಳಿತು ತದೇಕಚಿತ್ತದಿಂದ ಹಾಡುತ್ತಿದ್ದಳು..ಅವಳ ಹಾಡಿಗೆ ಇದೆ ಮನೆಯೇ ತಲೆದೂಗುತ್ತಿತ್ತು..

ಅಹ ಎಷ್ಟು ಚೆನ್ನಾಗಿ ಹಾಡುತ್ತಾಳೆ..ಅಂದರು ಅಂಕಲ್. ಹೌದು ಅಂಕಲ್ ಅಂದೇ.

ಆ ಹಾಡುತ್ತಿದ್ದ ಪರಿಗೆ ನನ್ನೆದೆಯ ವೀಣೆ ನುಡಿಯಲಾರಮ್ಭಿಸಿತು..ಕಿರಣ್ ಯಾರೋ ಇವಳು ಅಂದೇ..ಅದೇ ಕಣೋ ನಮ್ಮ ಪಕ್ಕದ ಮನೆಗೆ ಹೊಸದಾಗಿ ಬಂದಿದ್ದರಲ್ಲ ಅವರ ಮಗಳು ..ಈಗ ತಾನೇ ಸ್ಟಡೀಸ್ ಮುಗಿಸಿದಾಳೆ..ಅಕ್ಕನಿಗೆ ಕ್ಲೋಸು .

ಶುರುವಾಯ್ತು ಅಕ್ಕನಿಗೆ ಪೂಸಿ..ಹೊಡೆಯುವುದು..ಅಕ್ಕ ಪರಿಚಯ ಮಾಡಿಸಿದರು ಇವನು ನನ್ನ ತಮ್ಮನ ಹಾಗೆ..ನನಗೆ ತುಂಬಾ ಅಚು ಮೆಚು..ಸ್ವಲ್ಪ ತುಂಟ ಅಂದರು..ಅವಳು ಮೊದಲ ಸಲ ಹಾಯ್ ..ಅಂದಳು.

ಅವಳಿಗೆ ಬಹಳ ಬೇಗ ಅರ್ಥವಾಗಿತ್ತು..ನನ್ನ ಒದ್ದಾಟ..ಒನ್ ಫೈನ್ ಡೇ...ನಾನು ಹೇಳಿಯೇ ಬಿಟ್ಟೆ ...I love you....

ಒಂದು ದಿನ ಟೈಮ್ ಬೇಕು ...ಕೇಳಿದಳು...ಓ.ಕೆ.ಅಂದೇ..ಅಂದು ರಾತ್ರಿ ನಿದ್ದೆ ಹತ್ತಲಿಲ್ಲ ಢವ ಢವ...ಏನಾಗುತ್ತೋ ಎಂಬ ಅಂಜಿಕೆ..

ಮಾರನೆ ದಿನ ಬೆಳಿಗ್ಗೆ ಎದ್ದು ದೇವಸ್ತಾನಕ್ಕೆ ಹೋದೆ. ದೇವರೇ ವರವ ಕೊಡು ಎಂದು ಬೇಡಿದೆ. ಹೊರಗೆ ಪ್ರಸಾದ ತಿಂತಾ ಕೂತಿದ್ದಾಗ ಮೆಸೇಜ್ ಬಂತು. I

I love you too......dear ...

ಓಡಿ ಹೋಗಿ ಮತ್ತೊಮ್ಮೆ ದೇವರಿಗೆ ಧೀರ್ಘದಂಡ ನಮಸ್ಕಾರ ಹಾಕಿದೆ...ಮತ್ತೆ ಮತ್ತೆ ಗಣೇಶನಿಗೆ ಥ್ಯಾಂಕ್ಸ್ ಹೇಳಿದೆ..

ಶುರುವಾಯಿತು ಪ್ರೇಮ ಪಕ್ಷಿಗಳ ಹಾರಾಟ. ದಿನಕ್ಕೆ ನೋರು ಮೆಸೇಜ್, ಫೋನ್ ಕಾಲ್ ..ವಾರಕ್ಕೊಂದು ಎರಡು ಭೇಟಿ..ಹೊಸ ಬೈಕ್ ತಗೊಂಡ ದಿನ ಅಂತು ಜೊತೇಲಿ ಬಂದು ಪೂಜೆ ಮಾಡಿಸಿ ಒಂದು ಜಾಲಿ ರೈಡ್ ಹೋದ ಮೇಲೆ ...ವಿಶ್ ಮಾಡಿ ಮನೆಕಡೆ ಹೆಜ್ಜೆ ಹಾಕಿದಳು..

ಅದೆಷ್ಟು ಕಡೆ ಸುತ್ತಿದ್ದು..ಸದಾ ಕೈ ಕೈ ಹಿಡಿದು ನಡೆಯುತ್ತಿದ್ದರೆ ..ಅವಳು ಚಿನ್ನು ನಿನ್ನ ಕೈ ಹಿಡಿದು ನಡೆಯುತ್ತಿದ್ದರೆ ಅದೇನೋ ಧೈರ್ಯ..ಭರವಸೆ ಅನ್ನುತ್ತಿದ್ದಳು.. ಅಂದು ಇಬ್ಬರು ಸಂಜೆ ಭೇಟಿಗೆಂದು ಲಾಲ್ ಭಾಗ ಕಡೆ ಹೋಗಿದ್ದಾಗ..ಅಲ್ಲಿ ತನ್ನೆಲ್ಲ ಕನಸುಗಳನ್ನು ನನ್ನೊಡನೆ ಹಂಚಿಕೊಂಡು ಬದುಕಿನುದ್ದಕ್ಕೂ ನಾವು ಹೀಗೆ ಇರಬೇಕು ಕಣೋ ಆಯ್ತಾ..ನನ್ನ ಬಂಗಾರ ನೀನು..ಅಂದಳು.

ಫೋನ್ ರಿಂಗ್ ಆಯಿತು...ಯಾರೂ..ಅಂದೇ..ಸರ್ ನಾವು ಇನ್ಸೂರೆನ್ಸ್ ಕಂಪೆನ್ಯಿಂದ ..ನಿಮಗೆ ಒಳ್ಳೆ ಪಾಲಿಸಿ ಇದೆ..ಅಂದರು...ನನ್ನ ಭಾವಲೋಕಕ್ಕೆ ಭಂಗ ತಂದ ಆ ಹುಡುಗಿಗೆ ಕೋಪ ಬಂದರು ತೋರಿಸಿಕೊಳ್ಳದೆ...sory i am not interested ಅಂತ ಫೋನಿಟ್ಟೆ.

ಈ ಹತ್ತು ದಿನ ಕಳೆಯುವದರೋಳಗಾಗಿ ೧೦ ಯುಗ ಕಳೆದಂತಾಯ್ತು...ಕೊನೆಗೂ ನನ್ನವಳು ಡೆಲ್ಲಿಯಿಂದ ಬಂದಳು..ನನಗೋಸ್ಕರ ಅದ್ಭುತವಾದ ಒಂದು ಗಿಫ್ಟ್ ಕೂಡ ತಂದಳು..ಈ ಹತ್ತು ದಿನಗಳ ಬಗ್ಗೆ ಮನಸೆಲ್ಲ ಇಲ್ಲೇ ಇತ್ತು ಚಿನ್ನು...ನಿನ್ನನ್ನ ತುಂಬಾ ಮಿಸ್ ಮಾಡ್ಕೊಂಡೆ..i love you so much...ಅಂದು ತಾನು ತಂದಿದ್ದ ಗಿಫ್ಟ್ ಕೈಗೆ ಇಟ್ಟಳು. ನನ್ನ ಇಷ್ಟು ದಿನದ ಒಂಟಿತನಕ್ಕೆ ಇಂದು ಇತಿಶ್ರೀ ಹಾಡಿದಳು..

ಕಳೆದ ಹತ್ತು ದಿನಗಳಲ್ಲಿ ತಾನು ಅನುಭವಿಸಿದ ಯಾತನೆ, ವಿರಹ, ಒಂಟಿತನ, ನೋವು ಹೇಳುತ್ತಾ ಹೋದಳು. ಈ ಹತ್ತು ದಿನದಲ್ಲಿ ಅಪ್ಪ ಅಮ್ಮ ಅಣ್ಣ ಜೊತೇಲಿ ಇದ್ದರು ಒಳ್ಳೊಳ್ಳೆ ಪ್ರವಾಸಿ ಸ್ಥಳಗಳು ಇದ್ದರು ಅದೆಲ್ಲವೂ ಶೂನ್ಯ ಅನ್ನಿಸುತ್ತಿತ್ತು..ಕಣೋ...ಈ ಹತ್ತು ದಿನದ ಸಂಕಟ ಹೇಳುತ್ತೇನೆ ಕೇಳು.. ತದೇಕ ಚಿತ್ತದಿಂದ..ಅವಳನ್ನೇ ನೋಡುತ್ತಾ ಕೂತೆ..

ಅವಳು ಹೇಳುತ್ತಾ ಹೋದಳು..!!!

(ಉಳಿದ ಭಾಗ ...ಮುಂದುವರೆಯಲಿದೆ..)

Monday, September 5, 2011

ಸಾರ್ಥಕ್ಯ ....!!!








ಓ ಗೆಳತಿ

ನನ್ನ ಕಂಡು ನೀನೇಕೆ ಮರುಗುತೀ

ಅಂದು ನಾ ಎಷ್ಟೇ ಭರವಸೆ ನೀಡಿದರು

ನೀ ನನ್ನ ನಂಬಲಿಲ್ಲ

ನನ್ನ ಬರಿಗೈ ನಿನ್ನಲ್ಲಿ ಅನುಮಾನ ಮುಡಿಸಿತ್ತೆ?

ನನ್ನ ಭವಿತವ್ಯದ ಬಗ್ಗೆ ನಿನಗೆ ಚಿಂತೆ ಇತ್ತೇ?

ನನ್ನ ಪ್ರೀತಿಯ ಆಳ ತೋರಿಸಲು

ನಾ ಎಷ್ಟೇ ಪ್ರಯತ್ನಿಸಿದರೂ ನೀ ಅದಕ್ಕೆ ಅವಕಾಶ ಕೊಡಲಿಲ್ಲ

ವರ್ಷಾನುವರ್ಷ ಬೆಳೆದು ಹೆಮ್ಮರವಾದ ನಮ್ಮ ಪ್ರೀತಿಗೆ

ನೀ ಒಂದೇ ಮಾತಿನಲ್ಲಿ ತುಂಡರಿಸಿದೆ

ಎಂದೂ ದುಖಿತನಾಗದ ನಾನು ನಿನಗಾಗಿ ಅತ್ತುಬಿಟ್ಟೆ

ನನ್ನ ಕಣ್ಣೀರು ಒರೆಸುವ ಪ್ರಯತ್ನ ಕೂಡ ಮಾಡದ ನೀನು

ಅದೇಕೆ ಹಾಗೆ ಹೊರಟು ಹೋದೆ ...?

ಆದರು ನಾ ಸಾವರಿಸಿಕೊಂಡು ಮನದಲ್ಲೇ ಹೇಳಿಕೊಂಡೆ

ನಿನ್ನ ಬದುಕು ಹಸನಾಗಲೆಂದು ....!

ಇಂದು

ನಿನ್ನ ಕಂದನೊಂದಿಗೆ ನನ್ನ ನೋಡಿದ ನೀನು

ನನ್ನ 'ನಶ್ವರ' ಬದುಕನ್ನು ನೋಡಿ ಏಕೆ ಮರುಗುತ್ತಿಯೇ..?

ಬಿಡು,

ನಿನ್ನ ಸಂಭ್ರಮವೇ ನನಗೆ

ಬದುಕಿನ ಬಗ್ಗೆ ಭರವಸೆ ಮೂಡಿಸಿದೆ...

ನೀ ಸುಖಿಯಾದಾಗ

ಆ ಸುಖದ ನೆನಪಲ್ಲೇ ಈ ಜನ್ಮವನ್ನು ಕಳೆಯುವ ನಿರ್ಧಾರ ನನ್ನದು

'ತ್ಯಾಗ'ದಲ್ಲಿರುವ ಸಾರ್ಥಕ್ಯ ನಿನಗೇನು ಗೊತ್ತು?

Sunday, September 4, 2011

ಬೆಸುಗೆ ...!!!











ನೀ
ಕಂಡ ಮೊದಲ ಸಲ
ನಾನಾದೆ ನಿನ್ನ ಪ್ರೇಮದಾಸ

ನೀ
ನೋಡಿದ ಮೊದಲ ನೋಟ
ನಾನಾದೆ ಅಭಿನವ ಕಾಳಿದಾಸ

ನೀ
ನಕ್ಕ ಮೊದಲ ಕ್ಷಣ
ನಾ ಹಾರಿದೆ ತಾರೆಯ ಹಿಡಿದೇ

ನೀ
ಇರಲು ನನ್ನ ಸನಿಹ
ಮರೆಸಿತು ಎಲ್ಲ ಮೋಹ

ನೀ
ಕೊಟ್ಟ ಮೊದಲ ಕೊಡುಗೆ
ಅದುವೇ ನಮ್ಮಿಬ್ಬರ ಬಾಳಿಗೆ ಬೆಸುಗೆ!

Saturday, September 3, 2011

ಕಾರಣ ....




ನೋಡಿದ್ದು ಎರಡೆ ಸಲ

ನನಗಿನ್ನೂ ಅರ್ಥವಾಗಿಲ್ಲ

ನಾ ಏಕೆ ನಿನ್ನ ಇಷ್ಟ ಪಟ್ಟೆ ಎಂದು

ನಿನ್ನ ಸೌಂದರ್ಯದ ಖನಿಗೋ ...

ನಿನ್ನ ಮುಗ್ಧ ಮಾತಿಗೋ ...

ಹೊಳೆಯುವ ನಕ್ಷತ್ರದಂತ ನಿನ್ನ ನಗುವಿಗೋ ...

ಹಂಸದಂತ ನಿನ್ನ ನಡಿಗೆಗೋ ...

ನಕ್ಕರೆ ಗುಳಿ ಬೀಳುವ ನಿನ್ನ ಕೆನ್ನೆಗೋ ...

ಅಥವಾ

ಮೊದಲ ನಗುವಿನಲ್ಲೇ ನನ್ನಲ್ಲಿ ಭರವಸೆ ಹುಟ್ಟಿಸಿದ ರೀತಿಗೋ..?

ಆದರೆ ನಿಜ ಹೇಳಲಾ ಗೆಳತಿ

ಎಷ್ಟೇ ಯೋಚಿಸಿದರೂ ಕಾರಣವಂತು ತಿಳಿಯುತ್ತಿಲ್ಲ

ಕಾರಣ ತಿಳಿದು ಏನಾಗಬೇಕಿದೆ ನನಗೆ

ನೀ ನನ್ನವಳಾದರೆ

ಅಷ್ಟೇ ಸಾಕು ನನ್ನ ಬದುಕಿಗೆ ...!

ಸಂಭ್ರಮಾಚರಣೆ...!!!



ಅಂದು ನೀ ಹಾಡಿದ ಆ ಹಾಡು

ನಿನಗೆ ಬಹುಮಾನವನ್ನೇನೋ ತಂದು ಕೊಟ್ಟಿತು

ಆ ಹಾಡು ಕೇಳಿದ ನಾನು ನಿನ್ನ ಕೇಳಿದೆ

ನೀನೆ ನನ್ನ ಬದುಕಿನ ಬಹುಮಾನವಾಗೆಂದು

ಆದರೆ ಗೆಳತಿ ನೀ ಒಪ್ಪಲಿಲ್ಲ ಆ ಕ್ಷಣದಲ್ಲಿ

ನಾನಾದೆ ನಿರಂತರ ಮದಿರೆ ದಾಸ

ಆ ದಾಸ್ಯದಿಂದ ಪಾರುಮಾಡಲು

ನೀನೆ ಬರಬೇಕಾಯಿತಲ್ಲ ..!

ನೀ ಬಂದ ಮೇಲೆ ಅದೇ ಸಂಭ್ರಮಕ್ಕೆ

ಮತ್ತೆ ಮದಿರೆಯತ್ತ ಹೊರಳುತ್ತಿದೆ ನನ್ನ ಮನ..!