Pages

Tuesday, August 30, 2011

ಮಾಯಾಂಗನೆ...!!!






ಗೆಳತಿ...

ನೀ ಮೊದಲು ನನ್ನ ಕಡೆ ನೋಡಿದಾಗ ಆಕಸ್ಮಿಕವೆಂದುಕೊಂಡೆ.....

ಎರಡನೆ ಸಲ ನೋಡಿದಾಗ ಸ್ವಾಭಾವಿಕ ಎಂದುಕೊಂಡೆ ...

ಮೂರನೇ ಸಲ ನೋಡಿದಾಗ ಸಹಜತೆ ಎಂದುಕೊಂಡೆ ...

ನಾಲ್ಕನೇ ಸಲ ನೋಡಿದಾಗ ನಿನ್ನ ಇಚ್ಹೆಯೇನುಸಾರ ಎಂದುಕೊಂಡೆ ...

ಐದನೇ ಸಲ ನೋಡಿದಾಗ ಎಲ್ಲೊ ನೋಡಿದ ನೆನಪೇನೋ ಎಂಬಂತೆ ಮೆಲುಕು ಹಾಕುತ್ತಿರಬಹುದು ಎಂದುಕೊಂಡೆ ....

ಆರನೆ ಸಲ ನೋಡಿದಾಗ ಏನೋ ವಿಳಾಸ ಕೇಳಲು ಇರಬಹುದೇನೋ ಅಂದುಕೊಂಡೆ ...

ಏಳನೇ ಸಲ ನೋಡಿದಾಗ ನಾನೇನಾದರೂ ವಿಚಿತ್ರವಾಗಿ ನಿನ್ನ ಕಣ್ಣಿಗೆ ಗೋಚರಿಸುತ್ತಿರುವೆನಾ ಎಂದುಕೊಂಡೆ ....

ಎಂಟನೆ ಸಲ ನೋಡಿದಾಗ ನಾನು ನಿನಗೆ ಇಷ್ಟವಾಗಿರಬಹುದು ಎಂದುಕೊಂಡೆ ....

ಒಂಬತ್ತನೇ ಸಲ ನೋಡಿದಾಗ ಇದು ಅತಿರೇಕಕ್ಕೆ ಹೋಗುತ್ತಿದೆ ಅಂದುಕೊಂಡೆ..

ಹತ್ತನೇ ಸಲ ನೋಡಿದಾಗ ನನ್ನ ಪಕ್ಕದವರನ್ನು ಎಂದುಕೊಂಡೆ ...

ಹನ್ನೊಂದನೇ ಸಲ ನೋಡಿದಾಗ ಆಟೋಗಾಗಿ ಎಂದುಕೊಂಡೆ ....

ಹನ್ನೆರಡನೆ ಸಲ ನೋಡಿದಾಗ ನನ್ನಲ್ಲಿ ಆಸೆ ಹುಟ್ಟಿಸಲು ಎಂದುಕೊಂಡೆ...

ಹದಿಮೂರನೇ ಸಲ ನೋಡಿದಾಗ ಇಷ್ಟ ಪಟ್ಟು ನೋಡಿರಬಹುದು ಎಂದುಕೊಂಡೆ...

ಇಷ್ಟು ಸಲ ನನ್ನ ಕಡೆ ನೋಡಿದ ನೀನು ....

ನನ್ನ ಮನದಲ್ಲಿ ಆಸೆ ಹುಟ್ಟಿಸಿ...ನನ್ನ ಕನಸುಗಳು ಹಿಮಾಲಯದೆತ್ತರಕ್ಕೆ ಹಾರುವಂತೆ ಮಾಡಿದೆ..

ನಾನು ರೆಕ್ಕೆ ಕಟ್ಟಿಕೊಂಡಂತೆ ಹಾರುತ್ತಲೇ ಇದ್ದೆ ....

ಆದರೆ ಗೆಳತಿ ನೀ.....................ನು ................. ಮಾಡಿದ್ದೇನು...?

ಬೆಂಕಿಯಂತೆ ಸುರ್ರನೆ ಬಂದ ಬೈಕನ್ನೇರಿ ......

ಬಿರುಗಾಳಿ ವೇಗದಲ್ಲಿ ....

ಮಿಂಚಿನಂತೆ ಮಾಯವಾದೆ...!!!











Sunday, August 28, 2011

ಭರವಸೆ





ಗೆಳತಿ .....

ನನ್ನ ಗೆಳೆಯನ ಮನೆಗೆಂದು ನಾ ಬಂದಿದ್ದಾಗ

ರಸ್ತೆಯ ತಿರುವಿನಲ್ಲಿ ನೀ ನಿಂತಿದ್ದೆ

ತಿರುವಿನ ಎಡಕ್ಕೆ ಚಲಿಸಬೇಕೋ ಬಲಕ್ಕೆ ಚಲಿಸಬೇಕೋ ಎಂಬ ಜಿಜ್ಞಾಸೆಯಲ್ಲಿ ನೀನಿದ್ದೆ

ನಾ ನಿನ್ನ ಮುಂದೆ ಹಾದು ಹೋಗುವಾಗ

ನೀ ನನ್ನ ಕೇಳಿದೆ ನಿನ್ನ ಗೆಳತಿಯ ಮನೆಯ ವಿಳಾಸ

ನಾ ವಿಳಾಸ ತೋರಿಸುವ ನೆಪದಲ್ಲಿ ನಿನ್ನನ್ನು ಮೂರನೇ ತಿರುವಿನ ಕಡೆಗೆ ಕರೆದೊಯ್ದೆ

ಆ ತಿರುವಿನಲ್ಲಿ ನಿನ್ನ ಗೆಳತಿಯ ಮನೆ ಬರುವಷ್ಟರಲ್ಲಿ

ನಿನ್ನ ಹೆಸರನ್ನು ಕೇಳಿಕೊಂಡೆ 'ಮಧುರಾ' ಎಂತಹ ಹೆಸರೇ ನಿನ್ನದು ....

ಆ ಕ್ಷಣದಲ್ಲೇ ನನ್ನ ಮನದಿ ಮಧುರ ಭಾವನೆ ಸುಳಿಯುವಂತೆ ಮಾಡಿದ್ದೆ

ನೀ ನನ್ನ ಹೆಸರು ಕೇಳಿದಾಗ ನಾನೆಂದೆ 'ಸುಮಂತ'

ಆಗಲೇ ನನಗನಿಸಿದ್ದು

ನಮ್ಮಿಬ್ಬರ ನಡುವೆ 'ಅಂತ' ರ ಇಲ್ಲವಾದಾಗ

ನಮ್ಮ ಬದುಕಾಗುತ್ತದೆ 'ಸುಮಧುರ'

ಅಂದಿನಿಂದ ಶುರುವಾಯಿತು ನೋಡು ನನ್ನ 'ಮಧುರ' ಯಾತ್ರೆ

ಆರು ಭೇಟಿಗಳಲ್ಲೇ ನೀ ನನ್ನ ಮೆಚ್ಚಿದ್ದೆ

ಏಳನೇ ಭೇಟಿಯಾಗಿದ್ದು ನದೀ ತೀರದಲ್ಲಿ

ನೀ ನದಿಯಂಚಿನಲ್ಲಿ ಕುಳಿತು ನಿನ್ನ ಪಾದಗಳನ್ನು ತೊಯ್ಸಿಕೊಳ್ಳುತ್ತಿದ್ದೆ

ನಿನ್ನ ಮುದ್ದಾದ ಪಾದಗಳನ್ನು ಮೀನುಗಳು ಸ್ಪರ್ಶಿಸಿ ಹೋಗುತ್ತಿದ್ದರೆ

ಆ ಸ್ಪರ್ಶಕ್ಕೆ ನೀ ಪುಳಕಗೊಂಡಾಗ

ನಿನ್ನ ನೋಡಿ ನಾನೂ ಪುಳಕಗೊಂಡೆ

ಆ ಕ್ಷಣದ ನಿನ್ನ ಸಂಭ್ರಮವನ್ನು ನಾ ಬದುಕಿನುದ್ದಕ್ಕೂ

ನೀಡುವೆನೆಂದು... ನಾ ಕಣ್ಣಲ್ಲೇ ಹೇಳಿದಾಗ ...

ನಿನ್ನ ಕಣ್ಣಲ್ಲಿನ ಆ ಸಂತೃಪ್ತಿ...ನಾ ಕಂಡಾಗ

ನಾ ಮೂಕನಾದೆ ಗೆಳತಿ

ಅದೆಷ್ಟು ಭರವಸೆ ನಿನಗೆ ನನ್ನ ಮೇಲೆ..!

ಮೌನ ಮಾತಾದಾಗ...!

ಪ್ರಿಯೆ

ಮೊದಲ ಬಾರಿ ನಾ ನಿನ್ನ ನೋಡಿದಾಗ

ನಿನ್ನ ಮೇಲೆ ನನಗೆ ಪ್ರೇಮಾಂಕುರವಾಯಿತು ...

ಅಂದೇ ನಾ ಕನಸು ಕಂಡಿದ್ದೆ

ನಿನ್ನ ಕೈ ಹಿಡಿದು ಸಮುದ್ರ ತೀರದಲ್ಲಿ ನಡೆಯುತ್ತಾ

ನಿನ್ನೆಲ್ಲ ಮಾತು ಕೇಳುತ್ತಾ...

ನಿನ್ನ ಪ್ರೀತಿಯನ್ನ ಅನುಭವಿಸುತ್ತಾ...

ನಿನ್ನ ಸಾಂಗತ್ಯವನ್ನು ಆನಂದಿಸುತ್ತಾ ...

ಹೆಜ್ಜೆ ಹಾಕಬೇಕೆಂದು ..

ನೀನು ಮಾತನಾಡದೆ ಮೌನವಾಗಿದ್ದರು ಸರಿ

ನಿನ್ನ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಂಡು

ಮೌನದಲ್ಲೇ ನಿನಗೆ ಉತ್ತರವನ್ನು ಕೊಡಬೇಕೆಂದು

ಆ ಘಳಿಗೆ ಬಂದೆ ಬಿಟ್ಟಿತು

ಅಂದು ನಾವಿಬ್ಬರು ಸಮದ್ರ ತೀರದಲ್ಲಿ

ಒದ್ದೆ ಪಾದಗಳಲ್ಲಿ ಹೆಜ್ಜೆ ಹಾಕುತ್ತಿದ್ದಾಗ

ಕೈ ಕೈ ಹಿಡಿದು ನಡೆಯುತ್ತಿದ್ದಾಗ

ನೀ ಮೌನವಾಗಿಯೇ ಕೇಳಿದೆ ಗೆಳತಿ

ನೀ ನನ್ನನ್ನು ಎಷ್ಟು ಪ್ರೀತಿಸುತ್ತಿಯೆಂದು ?

ಅದಕ್ಕೆ ನಾ ಹೇಳಿದೆ ಗೆಳತಿ

ನಾ ಹೇಗೆ ಹೇಳಲಿ ನನ್ನ ಪ್ರೀತಿಯ ಅಳತೆಯನ್ನು ....

ಅದನ್ನು ಅಳತೆ ಮಾಡಲು ಇನ್ನು ಮಾಪಕ ಬಂದಿಲ್ಲೆಂದು ....

ಆಕಾಶದಷ್ಟು ವಿಶಾಲವೆಂದರೆ ಅದು ತಪ್ಪಾಗುತ್ತದೆ .!

ಕಾರಣ

ಆಕಾಶದ ಅಳತೆ ನನಗೆ ಗೊತ್ತಿಲ್ಲ ...

ಸಮುದ್ರದಷ್ಟು ಆಳವೆಂದರೆ ಅದು ವಂಚನೆಯಾಗುತ್ತದೆ ಗೆಳತಿ

ಕಾರಣ

ಅದರ ಅಳವನ್ನು ಬಲ್ಲವನಲ್ಲ ನಾನು ..!

ನಾನು ಹೇಳಿದ್ದು ಇಷ್ಟೇ

ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು

ಅಳತೆ ಗೋಲು ಎಲ್ಲಿಂದ ತರಲಿ ಎಂದೂ ..

ಆದರೂ ಹೇಳಿದೆ...

ನೀನೆ ನನ್ನ ಜೀವವೆಂದು.....!

Saturday, August 27, 2011

'ತ್ಯಾಗ'



ಅಂದು ನಾ ಮುಂಗಾರು ಮಳೆ ನೋಡಿದಾಗ

ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಅರ್ಥ ಪೂರ್ಣ ಎಂದೆನಿಸಿತ್ತು

ತ್ಯಾಗದಲ್ಲಿ ಅರ್ಥವಿದೆ ಅನ್ನಿಸಿತ್ತು

ಆದರೆ ಗೆಳತಿ

ಇಂದು ನೀನು ಅಪ್ಪ ಅಮ್ಮನ ಮನ ನೋಯಿಸದಿರಲು

ನಮ್ಮ ಪ್ರೀತಿಯನ್ನು 'ತ್ಯಾಗ' ಮಾಡೋಣ ಎಂದಾಗ

ಮನಸು ದುಃಖಿಸುತ್ತಿದೆ ಗೆಳತಿ

'ತ್ಯಾಗ' ದ ಅರ್ಥ ಆಗ ಆಗಿರಲಿಲ್ಲ

ಈಗ ಆಗುತ್ತಿದೆ

ನೀನಿಲ್ಲದ ನನ್ನ ಬದುಕು ಮಂಜು ಮುಸುಕಿದೆ

ಆದರೂ ...

ಈ ತ್ಯಾಗದ ಹಿಂದೆ ನಿನ್ನ ಸಂತೋಷವಿದೆ

ಬದುಕಿನುದ್ದಕ್ಕೂ ಸಂಭ್ರಮವಿದೆ

ಎಂದು ನಾನು ಅರಿತುಕೊಂಡಾಗ

ಗೆಳತಿ

ತ್ಯಾಗ ನಿಜಕ್ಕೂ 'ಅಮರ' ವೆ ಎನಿಸಿತು

ಕಾರಣ

ಬದುಕಿನ 'ಸಿಹಿ' ಎಲ್ಲ ನಿನ್ನದಾಗಲಿ..

ಕಹಿ ಮಾತ್ರ ನನಗಿರಲಿ ....!

'ಬದಲಾವಣೆ'



ಬದುಕೆಂದರೆ,

ಅದು,

ಬರಿಗಾಲ ನಡಿಗೆ

ನಿತ್ಯ ಜಂಜಡಗಳ ಸಂತೆ

ಕಷ್ಟ ಕಾರ್ಪಣ್ಯಗಳ ಸಂಕೋಲೆ

ಸಾರವೇ ಇಲ್ಲದ ಹಗಲು ರಾತ್ರಿಗಳು

ದುಡ್ಡಿಗಾಗಿ ದುಡಿಮೆ

ಜೀವನಕ್ಕಾಗಿ ಹಣ

ನನ್ನವರು ಇಲ್ಲವೆಂಬ ದುಃಖ..

ಬದುಕಿ ಮಾಡುವುದೇನು...

ಯಾರಿಗೂ ಬೇಡವಾದ ನಾನು..

ಎಂದಷ್ಟೇ ತಿಳಿದಿದ್ದ ನನಗೆ

ನಿನ್ನ ಪ್ರೀತಿಯ ಸಿಂಚನದ ಮೂಲಕ

'ಪ್ರೇಮಲೋಕಕ್ಕೆ' ಕರೆದೊಯ್ದೆಯಲ್ಲಾ .....!!!!

ನಾನು ಈಗ ಸುಖಿ...ಅದು ನಿನ್ನ ಮಧುರ ಸಾಂಗತ್ಯದಿಂದ...

ಜಾನೂ....ನೀ ಬಲು ಜಾಣೇ...............!!!

Thursday, August 25, 2011

ಒಂದು ಕ್ಷಣ..!!!



ರಾಕೇಶ್ ಒಂದು ಕಂಪೆನಿಯ ಮುಖ್ಯಸ್ತ. ನೋಡಲು ಸುಂದರ, ಆಕರ್ಷಕ ವ್ಯಕ್ತಿತ್ವ, ಅದ್ಭುತ ಮಾತುಗಾರ. ಇದೆಲ್ಲದಕಿಂತ ಹೆಚ್ಚಾಗಿ ಒಳ್ಳೆಯ ಮನುಷ್ಯ. ಅಪ್ಪ ಅಮ್ಮ ಶಿವಮೊಗ್ಗದವರು..ಅಲ್ಲೇ ವಾಸ...ಅಣ್ಣ ಪುಣೆ ಯಲ್ಲಿ ಕೆಲಸ,ಅಣ್ಣ , ಅತ್ತಿಗೆ ಇಬ್ಬರು ಮಕ್ಕಳು ಬೇಸಿಗೆ ರಜಕ್ಕೆ ಶಿವಮೊಗ್ಗಕ್ಕೆ ಬರುತ್ತಾರೆ..ಏನಾದರೂ ಕಾರ್ಯಕ್ರಮ ಇದ್ದಾರೆ ಬರುತ್ತಾರೆ..ಬೆಂಗಳೂರಿನಲ್ಲಿ ಇವನು ಮನೆ ಮಾಡಿಕೊಂಡು..ಒಂಟಿಯಾಗಿ..ವಾಸ...ಇವನ ಸೈಲೆಂಟ್ nature ಗೆ PG adjust ಆಗೋಲ್ಲ ಅಂತ...ಮನೆ ಮಾಡಿದ..ಆಗಾಗ ಫ್ರೆಂಡ್ಸ್ ಎಲ್ಲ ಸೇರಿ ಮನೇಲಿ...ಪಾರ್ಟಿ ಮಾಡ್ತಾ, ಹರಟೆ ಹೊಡೆಯುತ್ತಿದ್ದರು...ಯಾರನ್ನು ರೂಂ ಮೆಟ್ ಮಾಡಿಕೊಳ್ಳುವ ಮನಸು ಇವನಿಗೆ ಇರಲಿಲ್ಲ...

ರಾತ್ರಿ ನಿದ್ದೆ ಬರ್ಲಿಲ್ಲ ಅಂದ್ರೆ..ಯಾವುದಾದರು ಪುಸ್ತಕ ಹಿಡ್ಕೊಂಡು ಕೂರೋ ವ್ಯಕ್ತಿ..ಬೇರೆಯ ಹುಡುಗರು..ರೂಂ ನಲ್ಲಿದ್ದರೆ..ಸುಮ್ನೆ ಅವರಿಗೂ..ತೊಂದರೆ..ನನಗು ತೊಂದರೆ...ಯಾಕೆ ಬೇಕು...? ಅಂತ ಸುಮ್ಮನಾಗಿದ್ದ..

ಅವನ ಸಂಗಕ್ಕಾಗಿ ಹುಡುಗಿಯರು ನಾ ಮುಂದು ತಾ ಮುಂದು ಎಂಬಂತೆ ಬರುತ್ತಿದ್ದರು..ಸ್ಪುರದ್ರೂಪಿ..ಬುದ್ಧಿವಂತ... ಇವನು ಮಾತ್ರ ಚೂಸಿ. ಒಮ್ಮೆ ದೇವಸ್ತಾನಕ್ಕೆ ಹೋದಾಗ ಒಂದು ಹುಡುಗಿಯನ್ನ ನೋಡಿದ. ನೋಡುತ್ತಿದ್ದ ಹಾಗೆ ಯಾವುದೊ ಹಳೆಯ ನೆನಪು, ದೃಶ್ಯ, ಮಾತು, ನಗು, ಮುಖ ಮನಸಿನ ಸ್ಮೃತಿ ಪಟಲದಲ್ಲಿ ಸುಲಿದು ಹೋಯ್ತು. ಅರೆ ಯಾರಿವಳು? ಇವಳನ್ನು ಎಲ್ಲೊ ನೋಡಿದ ಹಾಗಿದೆಯಲ್ಲ ಎಂದು ಮನಸು ಹೇಳುತ್ತಿತ್ತು.ನೋಡಲು ತುಂಬಾ ರೂಪವತಿಯಾಗಿದ್ದಳು. ತಿಳಿ ನೀಲಿ ಬನದ ಚುಡಿ ದಾರ್ ಹಾಕಿದ್ದಳು..ಮುಖ ನೋಡಿದ ತಕ್ಷಣ ಎಂತಹವರಿಗೂ ಮತ್ತೊಮ್ಮೆ ನೋಡಬೇಕೆನಿಸುವ ಹಾಗನ್ನಿಸುತ್ತಿತ್ತು. ಒಬ್ಬಳೇ ಬಂದ ಹಾಗಿತ್ತು..ಮನಸ್ಸು ಮಾತ್ರ ಕೇಳಬೇಕೆಂದು ಚಡಪಡಿಸುತ್ತಿತ್ತು..ಆದರೆ....ಕೇಳುವುದು ಹೇಗೆ? ಕೇಳಿದರೆ ತಪ್ಪು ತಿಳಿದುಕೊಳ್ಳಬಹುದು? ಇರಲಿ ನೋಡೋಣ ಮುಂದೆ..ಎಂದೂ ಅಂದು ಮಾತನಾಡಿಸದೆ ಮನೆಗೆ ಬಂದ.

ಇದೆ ವಿಚಾರವನ್ನು ತನ್ನ ಸಹೋದ್ಯೋಗಿ ಗೌರಿ ಗೆ ಹೇಳಿದ. ಅವಲೋ ಮಾದ್ರೆನ್ ಹುಡುಗಿ.. ಅವಳು ಮಾತನಾಡಿಸಿದ್ದಾರೆ ತಪ್ಪೆನಾಗ್ತಿತ್ತು? ಎಂದೂ ಇವನನ್ನೇ ಕೇಳಿದಳು. ಸರಿ ಅಂದು ಸಂಜೆ ಗೌರಿ ಮತ್ತು ರಾಕೇಶ್ ಇಬ್ಬರು ಕಾಫೀ ಡೇ ನಲ್ಲಿ ಕುಳಿತಿದ್ದಾಗ ..ತಾನು ದೇವಸ್ತಾನದಲ್ಲಿ ನೋಡಿದ ಹುಡುಗಿ ರಸ್ತೆ ದಾಟಲು ಪ್ರಯತ್ನ ಪಡುತ್ತ ಇದ್ದಳು..ಹೇಯ್ ಗೌರಿ...ನೋಡು ಆ ಹುಡುಗಿ...ಎಂದೂ ಒಳಗಿನಿಂದಲೇ ತೋರಿಸಿದ...

just wait i will be back....ಎಂದೂ ಗೌರಿ ಅಲ್ಲಿಂದ ಏಳಲು ಪ್ರಯತ್ನಿಸಿದಳು..hey stop da...not now...ಅಂದ.

ಏನೋ ನೀನು ತಲೆಗೆ ಹುಳ ಬಿಟ್ಟು ಕೊಂಡಿದಿಯಾ ಅದನ್ನ ಕ್ಲಿಯರ್ ಮಾಡೋಣ ಅಂದ್ರೆ ಅದಕ್ಕೂ ಒಪ್ಪೋಲ್ಲ. ಏನ್ ಹುಡುಗನಪ್ಪ...ನೀನು? ಸಂಕೋಚದ ಮುದ್ದೆ ಅಂದಳು....

ಅಂದು ರಾತ್ರಿ...ಶ್ವೇತ ಫೋನ್ ಮಾಡಿದಾಗ ಈ ವಿಷಯ ತಿಳಿಸಿದ...ಶ್ವೇತ ಮೈಸೂರಿನಲ್ಲಿ ಉದ್ಯೋಗಿ...ಇವನ ಕ್ಲಾಸ್ ಮೆಟ್. ಅವಳಿಗೆ ರಾಕೇಶ್ ಎಂದರೆ ತುಂಬಾ ಇಷ್ಟ ಒಬ್ಬ ಫ್ರೆಂಡ್ ಆಗಿ..ಅವಳು ಹೇಳಿದಳು...ಈ ಸಲ ಸಿಕ್ಕಾಗ ಮಾತ್ರ ಮಿಸ್ ಮಾಡದೇ ಮಾತನಾಡಿಸು...ಅವಳು ಯಾರು, ಏನ್ ಮಾಡುತ್ತಿದ್ದಾಳೆ..ಅನ್ನೋದು ಕೆದಕು...ಆಗಲಾದರೂ...ನಿನ್ನ ತಲೆಯಿಂದ ಈ ಯೋಚನೆ ಹೋಗಬಹುದು...ಮೊದಲು ಕ್ಲಿಯರ್ ಮಾಡಿಕೋ...ಸುಮ್ನೆ ತಲೆ ಕೆಡಿಸ್ಕೋಬೇಡ ಅಂತ...ಹೇಳಿ...ತನ್ನ ಬಾಯ್ ಫ್ರೆಂಡ್ ಫಾರಿನ್ ನಿಂದ ಬರ್ತಾ ಇದಾನೆ..ಮುಂದಿನ ತಿಂಗಳು...ನಿಶಿತಾರ್ಥ..ಅಂತ...ಹೇಳಿ...ಮಾತು ಮುಗಿಸಿದಳು...

ಮಧ್ಯ ರಾತ್ರಿಯಾದರೂ...ನಿದ್ದೆ ಹತ್ತಲಿಲ್ಲ...

ಎದ್ದು ಹೊರಗೆ ಬಂದು...ಸಿಗರೇಟ್...ಹಚ್ಚಿದ...ಟೆರೆಸ್ ನ ಒಂದು ಮೂಲೆಯಲ್ಲಿ ನಿಂತು...ಯೋಚಿಸ ತೊಡಗಿದ..

ಬೆಳಿಗ್ಗೆ ಭಾನುವಾರವಾದ್ದರಿಂದ...ರಾಹುಲ್ ಫೋನ್ ಮಾಡಿ...ಇಂದು 'thunder feel' ರೆಸಾರ್ಟ್ ಗೆ ಹೋಗೋಣ...ಪಾರ್ಟಿ ಮಾಡೋಣ.ಇಂದು ಸಹನಾ ಬರ್ತ್ ಡೇ ವಿಶ್ ಮಾಡಿದ್ಯ ಕೇಳಿದ....be ready i am coming within an hour...ಅಂದು ಫೋನಿಟ್ಟ...! ಇವನು ಸಹನಾ ಗೆ ಫೋನ್ ಮಾಡಿ...ವಿಶ್ ಮಾಡಿದ..!

ರಾಹುಲ್ ತನ್ನ ಸಫಾರಿ ಕಾರನ್ನು ೧೨೦ ರ ಸ್ಪೀಡ್ನಲ್ಲಿ ಓಡಿಸುತ್ತಿದ್ದ...ಹಿಂದೆ , ಅಮರ್, ಜ್ಯೋತಿ, ಇಂದಿರಾ, ಸಹನಾ ...ಜೋರಾಗಿ ಹರಟೆ ಹೊಡೆಯುತ್ತಿದ್ದರು...

ಇವನು ಮಾತ್ರ...ಅದೇ...ಹುಡುಗಿಯ ನೆನಪಲ್ಲಿ.........ಯೋಚನೆಯಲ್ಲಿ ಬಿದ್ದಿದ್ದ...ಯಾರವಳು...? ಯಾರವಳು...? ಎಷ್ಟು ಯೋಚಿಸಿದರು...ನೆನಪಗುತ್ತಿಲ್ಲವಲ್ಲ...?

ಬೆಂಗಳೂರಿನಿಂದ ೮೦ ಕಿಲೋ ಮೀಟರ್ ದೊರದಲ್ಲಿತ್ತು ರೆಸಾರ್ಟ್...ರಾಹುಲ್ ನ ...ಸ್ಪೀಡ್ ಗೆ ರೆಸಾರ್ಟ್ ತಲುಪಿದ್ದೂ...ಆಯಿತು....

ಇಂದು ಸಹನಾಳ...ಬರ್ತ್ ಡೇ ..ಇದ್ದುದ್ದರಿಂದ..ಈ ಪಾರ್ಟಿ...ಜೋರಾಗಿತ್ತೂ..ಮತ್ತೆ ರಾತ್ರಿ ಬಂದು...ಮನೆ ತಲುಪಿದಾಗ 11 ಆಗಿತ್ತು...

ಬೆಳಿಗ್ಗೆ ಎದ್ದಾಗ ಸ್ವಲ್ಪ ತಲೆ ನೋವು ಇದೆ ಅನ್ನಿಸಿತು.....ನಿನ್ನೆಯ ಹ್ಯಾಂಗ್ ಓವರ್ ಇಣುಕುತ್ತಿತ್ತು...oh..god..ಅವಳ ನೆನಪಲ್ಲಿ ಕುಡಿದದ್ದು ಸ್ವಲ್ಪ ಜಾಸ್ತಿಯಾಯ್ತು...ಈಗ...ತಲೆನೋವು...ಛೆ......ಅಂತ ...ಬಾತ್ ರೂಮಿನತ್ತ ಹೊರಟ.

ಆಫೀಸಿನಲ್ಲಿ...ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ...ಅಮ್ಮ ಫೋನ್ ಮಾಡಿದರು...hi...ಅಮ್ಮ ಹೇಗಿದ್ದೀಯ..ಅಪ್ಪಾಜಿ ಹೇಗಿದಾರೆ...ಅಂದ..ನೀನು ಮುಂದಿನ ಶನಿವಾರ ಊರಿಗೆ..ಬಾ ಭಾನುವಾರ ಒಂದು ಕಡೆ ಹುಡುಗೀನ ನೋಡಲು...ಹೋಗಬೇಕು...ಒಳ್ಳೆ ಸಂಭಂದ ಬಂದಿದೆ..

ಅಮ್ಮ..ಈಗಲೇ ಮದುವೆಗೆ ಏನ್ ಅವಸರ..ಮುಂದಿನ ವರ್ಷ ನೋಡೋಣ..ಅಂದ..

ಆಕಡೆ ಅಪ್ಪಾಜಿ..ಲೋ ಮಗನೆ ನಮಗಿರೋ ಒಂದೇ ಜವಾಬ್ದಾರಿ..ಆಸೆ ಅಂದ್ರೆ ನಿನ್ನ ಮದುವೆ...ಸುಮ್ನೆ ಬಾ ಹೋಗಿ ನೋಡಿಕೊಂಡು ಬರೋಣ ..ನಿನಗಿಷ್ಟವಾದರೆ ಮದುವೆ....! ಆಯ್ತಾ..

ಆಯಿತು ಅಪ್ಪಾಜಿ...ಬರ್ತೀನಿ...

ಬುಧವಾರ ಸಂಜೆ...ಎಲ್ಲರೂ ಸೇರಿ ಗರುಡಾ ಮಾಲ್ ಗೆ ಹೋಗಿ ಶಾಪಿಂಗ್ ಮಾಡಿ..ಅಲ್ಲೇ mac'donald..ನಲ್ಲಿ ಕುಳಿತು..ಬರ್ಗರ್ ತಿನ್ನುತ್ತಿದ್ದಾಗ..ಈ ಮದುವೆ ಪ್ರಪೋಸಲ್ ವಿಷಯ..ಅಮ್ಮ ಫೋನ್ ಮಾಡಿದ್ದೂ..ಹೇಳಿದ..ಅದಕ್ಕೆ..ಕಿರಣ್..ಸಹನಾ ಎಲ್ಲರೂ ...ಹೋಗಿ ಬಾರೋ..

ಹುಡುಗಿಯನ್ನು ನೋಡಿಕೊಂಡು ಬಾ...ಅಪ್ಪ ಅಮ್ಮನಿಗೂ ಸಮಾಧಾನ..

........ಅವಳು...?.......?...........?

ಮನಸಿನಲ್ಲಿ ಅಂದುಕೊಂಡ......ಲೋ ಮಗನೆ..ನನಗೆ ಗೊತ್ತು ನಿನ್ನ ಚಿಂತೆ...ನೀ ಹೋಗಿ ಬಾ ....

ಮನಸಿಲ್ಲದಿದ್ದರೂ...ಊರಿಗೆ ಹೋದ..

ಭಾನುವಾರ ಮುಂಜಾನೆ ಅಪ್ಪ ಅಮ್ಮ ಮಾವ...ಸೇರಿ..ಕಾರಿನಲ್ಲಿ ಹೊರಟರು...ಆ ಪ್ರಕೃತಿಯ ಮಡಿಲಿನಿಂದ..ತಂಗಾಳಿ ಬೀಸುತ್ತಿತ್ತು...ತೀರ್ಥಹಳ್ಳಿಯ ಆ ರಸ್ತೆ ನಿರ್ಜನವಾಗಿ ...ಪ್ರಕೃತಿ ಸೌಂದರ್ಯ..ಹೆಚ್ಚು ಆಪ್ತವಾಗುತ್ತಿತ್ತು..ನದಿ ತೀರದ ಆ ಹಳ್ಳಿ...ಮಲೆನಾಡಿನ ಸ್ಪಷ್ಟ ಚಿತ್ರಣವನ್ನು ನೀಡುತ್ತಿತ್ತು...

ಇವನ ಮನಸ್ಸು ಮಾತ್ರ.......ಅವಳ ಹಿಂದೆ ಸುತ್ತುತ್ತಿತ್ತು.....

ಬನ್ನಿ..ಬನ್ನಿ..ಎಂದೂ ಹುಡುಗಿಯ ತಂದೆ ಸ್ವಾಗತ..ಕೋರಿದರು..ಎಲ್ಲರೂ ಒಳಗೆ ಹೋಗಿ ಕುಳಿತಾಗ...ಮನೆ...ಸುಂದರವಾಗಿತ್ತು..ಎಲ್ಲರಿಗೂ..ಹುಡುಗಿಯ ತಾಯಿ..ನೀರು ಕೊಟ್ಟರು...

ಉಭಯಾ ಕುಶಲೋಪರಿ ಆಯಿತು...

ಶಾರದಾ...ಮಗಳನ್ನು ಕರೆದುಕೊಂಡು ಬಾ..

ರಾಕೇಶ್ ಪತ್ರಿಕೆ ಓದುತ್ತಿದ್ದ..ಮಾವ...ಲೋ ಪತ್ರಿಕೆ ಆಮೇಲೆ ಓದು..ಅಲ್ಲಿ ನೋಡು...ಮೆಲುದನಿಯಲ್ಲಿ ಹೇಳಿದರು..

ನಿಧಾನವಾಗಿ ತಲೆ ಎತ್ತಿ ನೋಡಿದ...!!!!

ಮಲೆನಾಡಿನ ಕಾಫೀ ಪರಿಮಳ ..........ಮನೆಯಲ್ಲ ಹರಡಿತ್ತು...

.........................

ಕಾಫೀ ಹಿಡಿದು ಬರುತ್ತಿದ್ದಳು ಹುಡುಗಿ...!!!. ಗುಲಾಬಿ ಬಣ್ಣದ ಸೀರೆಯುಟ್ಟು......ತಲೆ ತಗ್ಗಿಸಿ..ನಿಧಾನವಾಗಿ ನಡೆಯುತ್ತಾ..ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ..ಸಂಕೋಚದಿಂದ..ಬರುತ್ತಿದ್ದಳು..ಗೆಜ್ಜೆಯ ನಿನಾದ..ಹಿಮ್ಮೇಳವಾಗಿ ಕೇಳಿಸುತ್ತಿತ್ತು...
ಒಂದು ಕ್ಷಣ ಇವನಿಗೆ...ಒಹ್..ನಿಜವಾ ಇದು...ಅನ್ನಿಸಿತು.....!!!
ಸಾವರಿಸಿಕೊಂಡ...ಬಂದು...ಎಲ್ಲರಿಗೂ ಕಾಫೀ ಕೊಟ್ಟಳು..ಇವನು ಥ್ಯಾಂಕ್ಸ್..ಅಂದ..

ಎದುರು ಒಂದು ಸೋಫಾದ ಮೇಲೆ ಕೂರಲು ಹೇಳಿದರು...ತಂದೆ..

ಇವನಿಗೆ ಇನ್ನು ನಂಬಲು ಆಗುತ್ತಿಲ್ಲ....ಅದೇ ಮುಖ..ಅದೇ ಸೌಂದರ್ಯ..ಮತ್ತೆ ಮತ್ತೆ ನೋಡಬೇಕೆನಿಸುವ..ತವಕ.........!! ಅವಳೇ ಇವಳು...!!!

ಇವಳು...ನನ್ನ ಮಗಳು..ನಂದಿನಿ..MBA ಮಾಡಿಕೊಂಡು...ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ..ಅಲ್ಲಿ ಅಣ್ಣನ ಜೋತೆಯಲ್ಲಿದ್ದಾಳೆ...

ನಂದಿನಿ...ಒರೆ ನೋಟದಿಂದ..ಇವನತ್ತ ನೋಡಿದಳು..ಕಣ್ಣು ಕಣ್ಣು ಕಲೆತಾಗ...ಅವಳು ನಾಚಿಕೊಂಡು ದೃಷ್ಟಿ..ಬೇರೆ ಕಡೆ ತಿರುಗಿಸಿದಳು...

...ಸರಿ ಮಾರಾಯರೇ...ನಾವು ನಿಮಗೆ ಫೋನ್ ಮಡಿ ತಿಳಿಸುತ್ತೇವೆ...ಅಂತ ಅಲ್ಲಿಂದ ಹೊರಟರು...

ರಾಕೇಶ್ ಈ ಮದುವೆಗೆ ಒಪ್ಪಿದ್ದ...ಬೆಂಗಳೂರಿಗೆ ಬಂದವನೇ ಸ್ನೇಹಿತರನ್ನೆಲ್ಲ ಮನೆಗೆ ಕರೆದ..ಈ ವಿಷಯ ಹೇಳಿದ...ಎಲ್ಲರಿಗೂ...ಒಂದೇ ಖುಷಿ...ಸಂತೋಷ..ಸಂಭ್ರಮ ...ಅಷ್ಟರಲ್ಲಿ...ಇವನ ಆಫಿಸ್ ಗೆಳೆಯ ಸಾಗರ್ ಬಂದ..

ಬಂದವನಿಗೆ..ವಿಷಯ ತಿಳಿಸಿದ..ಎಲ್ಲರೂ ಫೋಟೋ ನೋಡುತ್ತಿದ್ದರು...

ಸಾಗರ್ ಫೋಟೋ ಕಸಿದು ಕೊಂದ...!!!..

ಲೋ ಈ ಹುಡುಗಿಯೇನೋ?

ಹೌದು...ಯಾಕೆ..

ಇವಳು ಯಾರು ಗೊತ್ತ...

ಯಾರು...? ಅದೇನೋ ಹೀಗೆ ಕೆಳುತ್ತಿಯ..

ನನ್ನ ಕಸಿನ್ ಮದುವೆಗೆ ತುಮಕೂರಿಗೆ ಹೋಗಿದ್ದಾಗ..ಅಲ್ಲಿ ಇದ್ದಳಲ್ಲ ನನ್ನ ಕಸಿನ್ ಸ್ವಪ್ನ ಲ ಕಲೀಗ್ ....ಇವಳ ಹೆಸರು...ನಂದಿನಿ..ತಾನೇ?

ನೀನು ಇವಳ ಜೊತೆ ಮಾತಡಿದಿಯ..ನಾನು ನನ್ನ ಹೆಂಡತಿ ನನ್ನ ಕಸಿನ್ ನೀನು ನಮ್ಮ ಇತರೆ ಕಸಿನ್ಸ್.ಈ ಹುಡುಗಿ ಅವತ್ತು ಮದುವೆಯಲ್ಲಿ ಎಷ್ಟು ಹರಟೆ...ಹೊಡೆದಿದ್ದೀವಿ...ಮರೆತು ಬಿಟ್ಯಾ..?

ನೀನು ಪದೇ ಪದೇ ಇವಳನ್ನೇ ನೋಡುತ್ತಿದ್ದೆ..ನಾನು ನಿನ್ನ ರೇಗಿಸಿದ್ದೆ...! ಅಂದ

ಒಹ್..ಹೌದಲ್ವ...

ಅವತ್ತು ಅವಳನ್ನ ನೋಡಿದ ಆ ಕ್ಷಣಗಳು..ನನ್ನ ಮನಸಿನಲ್ಲಿ ಎಷ್ಟು ಬೆರೂರಿದ್ದವು..!!! ತುಂಬಾ ಆಪ್ತಳೆನಿಸಿದ್ದಳು...!! ತನ್ನ ಮನಸಿನ ಭಾವನೆ ಮೊದಲ ಭೇಟಿಯಲ್ಲೇ ಹೇಗೆ ವ್ಯಕ್ತಪಡಿಸೋದು..ಅದು ಸಭ್ಯತೆಯಲ್ಲ..ಅದು ಸ್ನೇಹಿತನ ಕಸಿನ್ ಮದುವೆ..ಅವಳ ಸ್ನೇಹಿತೆ ಬೇರೆ ಇವಳು?

ಆದರೆ ಅದನ್ನು ಅವಳಿಗೆ ಹೇಳುವ ಸಮಯ ಬರಲೇ ಇಲ್ಲ..

ಕೆಲಸದ ಒತ್ತಡದ ನಡುವೆ ...ಮರೆತೂ ಬಿಟ್ಟಿದ್ದ...

ಅಬ್ಭಾ ....ಅಂತು ಅವಳನ್ನೇ ಮದುವೆ ಆಗುತ್ತಿದ್ದೆನಲ್ಲ...! ನನ್ನ ಅವತ್ತಿನ ಆಸೆ ಇಂದು ಈಡೇರುತ್ತಿದೆ..ಅಂದುಕೊಂಡು...

ಅವಳ ಫೋಟೋವನ್ನೇ ನೋಡುತ್ತಾ...!!!....ನಿಂತ..!!!! ಅವನ ಮನಸ್ಸೆಲ್ಲ...ಅವಳೇ ತುಂಬಿದ್ದಳು...!!!

Wednesday, August 24, 2011

ನಿರೂಪಕನ ಪೀಕಲಾಟ..!



ಸಾಮಾನ್ಯವಾಗಿ ಸಾರ್ವಜನಿಕ ಸಮಾರಂಭ, ಗಣೇಶನ ಉತ್ಸವ, ಇಂತಹ ಸಂದರ್ಬದಲ್ಲಿ ವೇದಿಕೆ ಕಾರ್ಯಕ್ರಮಗಳ ನಿರೂಪಣೆಗೆ ಹೋದಾಗ ಅಲ್ಲಿ ಕಾರ್ಯಕ್ರಮದ ಆಯೋಜಕರು ಒಂದೆರಡು ಗಂಟೆ ಮೊದಲೇ ಬರಲು ತಿಳಿಸಿರುತ್ತಾರೆ. ಸರೀ ತಯಾರಿ ಮಾಡಿಕೊಳ್ಳಲು ಅಲ್ಲಿ ಮೊದಲೇ ಹೋದರೆ ಆಸಾಮಿಗಳು ಯಾರು ಪತ್ತೆ ಇರೋಲ್ಲ. ಹೇಗೂ ಬಂದಿದ್ದೇನೆ ಇನ್ನು ವಾಪಾಸ್ ಹೋಗಲು ಆಗುವುದಿಲ್ಲವಲ್ಲ ಅಂತ ಅಲ್ಲೇ ವೈಟ್ ಮಾಡ್ತಾ ಕೂತಾಗ ಆಯೋಜಕರು ನೀಟ್ ಆಗಿ ಡ್ರೆಸ್ ಮಾಡಿಕೊಂಡು ಬರ್ತಾ ಸಾರಿ ಸರ್ ನಾನು ಇಲ್ಲೇ ಹೋಗಿದ್ದೆ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡೆ ತಡ ಆಯಿತು...ಬನ್ನಿ ಬನ್ನಿ ಕಾರ್ಯಕ್ರಮದ ಬಗ್ಗೆ, ಅತಿಥಿಗಳ ಬಗ್ಗೆ ಪಟ್ಟಿ ಮಾಡುತ್ತ ಪ್ಲಾನ್ ಮಾಡೋಣ ಅಂತ ಒಂದು ಕಡೆ ಕೂರಿಸಿಕೊಂಡು ಆಹ್ವಾನ ಪತ್ರಿಕೆಯಲ್ಲಿನ ಎಲ್ಲ ಹೆಸರುಗಳನ್ನೂ ತೋರಿಸುತ್ತ ಯಾರ್ಯಾರು ಭಾಷಣ ಮಾಡ್ತಾರೆ, ಯಾರ್ಯಾರು ಮಾಡೋಲ್ಲ, ಯಾರ ಬಗ್ಗೆ ಜಾಸ್ತಿ ಹೋಗಲಿ ಹೇಳಬೇಕು, ಯಾರ ಬಗ್ಗೆ ಕಡಿಮೆ. ಯಾರು ಹೆಚ್ಚು ಹಣ ಕೊಟ್ಟಿದಾರೆ ಅವರನ್ನು ದಾನ ವೀರ ಶೂರ ಕರ್ಣ ಅಂತ ಏನೆಲ್ಲ ಹೊಗಳಬೇಕು ಅನ್ನುವ ಪಾಠ ಒಪ್ಪಿಸುತ್ತಾರೆ...

ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಈ ಪಾಠ ಪಡೆ ಪಡೆ ರಿಪೀಟ್ ಆಗಿರುತ್ತೆ ಅನ್ನೋದು ಬೇರೆ ಮಾತು.

ಒಂದು ಕಡೆ ಜನಾ ಬಂದಿರ್ತಾರೆ, ಚೆರುಗಳು ತುಂಬಿರುತ್ತೆ, ಅತಿಥಿಗಳು ಇನ್ನು ಬಂದಿರುವುದಿಲ್ಲ ಆಗ ಮತ್ತೆ ಬಂದು ಸರಿ ನೀವು ಅಲ್ಲಿಯವರೆಗೂ ಏನಾದ್ರು ಮಾತಾಡ್ತಾ ಇರಿ ಮೈಕ್ ನಲ್ಲಿ ಎಂದೂ ಹೇಳಿ ಹೋಗುತ್ತಾರೆ.

ಮತ್ತೆ ಬಂದು ಸಾರ್ ಅನೌನ್ಚೆ ಮಾಡಿ ಸರ್..ಸಾಹೇಬರು, ನಾಯಕರು... ಇನ್ನು ೧೦ ನಿಮಿಷದಲ್ಲಿ ಬರ್ತಾರೆ, ೫ ನಿಮಿಷದಲ್ಲಿ ಬರ್ತಾರೆ ..೪..೩..೨..೧..ಅಂತ ಹೇಳಿ ಅಂತ ಪಡೆ ಪಡೆ ಹೇಳುತ್ತಾ ರಸ್ತೆ ಕಡೆ ನೋಡ್ತಾ ಇರ್ತಾರೆ.

ಸರಿ ಅತಿಥಿಗಳು ಬಂದರು, ವೇದಿಕೆಗೆ ಕರೆ ತಂದರು..ವೇದಿಕೆ ಮೇಲೆ ಆಸೀನರಗೋ ಮೊದಲೇ ನಿರೂಪಕನ ಬಳಿ ಬಂದು ನನ್ನನ್ನ ಸ್ವಲ್ಪ ಹೋಗಲೀ ಸರ್ ನಾನು ಈ ಭಾಗದ ಸಮಾಜ ಸೇವಕ ಅಂತ ಹೇಳಿ ಹೋಗ್ತಾರೆ...ಅವರ ಹಿಂದೆ ಅವರ ಹಿಂಬಾಲಕರು ಒಂದಷ್ಟು ಒಗ್ಗರಣೆ ಹಾಕ್ತಾರೆ.

ಕಾರ್ಯಕ್ರಮ ಶುರು ಆಯಿತು ಆಯೋಜಕರಲ್ಲಿ ಒಬ್ಬರು ಬಂದು ಸ್ವಾಗತ್ ಭಾಷಣ ಮಾಡ್ತಾರೆ ಅದು...ಅರ್ಧ ಗಂಟೆ..ಯಾರ ಹೆಸರು ಬಿಡೋದಿಲ್ಲ...ಅಷ್ಟು ಹಾನೆಸ್ಟ್.

ಇನ್ನು ಅತಿಥಿಗಳ ಭಾಷಣ ಬರುವ ಹೊತ್ತಿಗೆ ನಿರೂಪಕನಿಗೆ ೩-೪ ಸಲ ಹೇಳಿ ಕಳಿಸ್ತಾರೆ ವೇದಿಕೆಯ ಮೇಲಿಂದ..ಸಮಾಜ ಸೇವೆ (?) ಬಗ್ಗೆ ಜಾಸ್ತಿ ಹೇಳಿ ಈ ಭಾಗದ ಜನಪ್ರಿಯ ನಾಯಕ ಅಂತ ಹೇಳಿ....ಹೀಗೆ ಅವರ ಬಿರುದು ಬಾವಲಿಗಳನ್ನು ಹೇಳುತ್ತಾ ಹೋಗುತ್ತಾರೆ...

ಇನ್ನು ನಿರೂಪಕನಿಗೆ ಮಾತನಾಡುವ ಗೀಳು ಇದ್ದಲ್ಲಿ ಇಂತಹ ಬೃಹತ್ ವೇದಿಕೆ, ಕಿಕ್ಕಿರಿದ ಜನಸಂದಣಿ, ಎಲ್ಲವನ್ನು ಕಂಡು ಅವನೋಳಗಿರುವ ಮಾತುಗಾರ ಜಾಗೃತನಾಗುತ್ತಾನೆ. ತನ್ನ ವಾಕ್ ಚಾತುರ್ಯದ ಮೂಲಕ ತನ್ನ ಬಾಯಿ ಚಪಲವನ್ನು ತೀರಿಸಿಕೊಳ್ಳುತ್ತಾನೆ. ಕೇಳುಗರಿಗೆ ಅರ್ಥವಾಗಲಿ..ಬಿಡಲಿ..ಎನ್ನುವ ಗೋಜಿಗೆ ಹೋಗದೆ ತನ್ನ ಅನುಭವ, ತನ್ನ ಓದು, ತನ್ನ ಬರವಣಿಗೆ, ಜೊತೆಗೆ ಕಾವ್ಯ, ಚುಟುಕ, ಕವನ ಇವುಗಳ ಮೂಲಕ ಕೇಳುಗರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಸನ್ನಿವೇಶವನ್ನು ಪ್ರಯೋಗಿಸುತ್ತಾನೆ.

ಇನ್ನು ಭಾಷಣಕ್ಕೆ ನಿಂತ ಅತಿಥಿ (ಗಳು) ..ಸಮಾರಂಬದ ಉದ್ದೇಶವನ್ನು ಬಿಟ್ಟು ಬೇರೆಲ್ಲ ಮಾತನಾಡುತ್ತಾರೆ. ತನ್ನನ್ನು ತನು ಪುನ್ಖನುಪುನ್ಖವಾಗಿ ಹೊಗಳಿಕೊಂಡು ಮುಂದಿನ ಚುನಾವಣೆಗೆ ನಿಲ್ತಾ ಇದೀನಿ ನಿಮ್ಮ ಆಶಿರ್ವಾದ ನನಗೆ ಬೇಕು ಅಂತ ...ಹೇಳಿ ತನ್ನ ಸುಧೀರ್ಗ (?) ಭಾಷಣಕ್ಕೆ ತೆರೆ ಎಳೆಯುತ್ತಾನೆ.

ನಂತರ ಈ ರೀತಿಯ ನಾಯಕರು (?) ಹಲವಾರು ಮಂದಿ ಇದ್ದರಂತೂ ಮುಗಿದೇ ಹೋಯಿತು..

ಅಲ್ಲಿ ಜನಾ ಕಾಯುತ್ತಿರುವುದು ಹಾಸ್ಯೋತ್ಸವಕ್ಕೋ, ಅರ್ಕೆಷ್ಟ್ರಕ್ಕೋ ಅನ್ನೋದು ಈ ಅತಿಥಿಗಳು ಅರ್ಥಾನೆ ಮಾಡಿಕೊಳ್ಳುವುದಿಲ್ಲ. ಇನ್ನು ಅವರೆಲ್ಲರಿಗೂ ಹಾರ, ತುರಾಯಿ, ಸನ್ಮಾನ ಅಂತ ಅಗೋ ಹೊತ್ತಿಗೆ ರಾತ್ರಿ ೯ ಧಾಟಿರುತ್ತೆ.

ಅರ್ಕೆಸ್ತ್ರ ಮಂದಿ..ಇಷ್ಟು ತಡ ಮಾಡಿದರೆ ನಾವು ಹಾಡುವುದು ಯಾವಾಗ , ಜನರನ್ನ ರಂಜಿಸುವುದು ಎಲ್ಲಿ ಅಂತ ಚಿಂತೆ ಮಾಡ್ತಾ ಕೂತಿರ್ತಾರೆ.

ಇದುವರೆಗೂ ನಿರೂಪಕನನ್ನ ಇನ್ನಿಲ್ಲದಂತೆ ಮಾತನಾಡಿಸುತ್ತಿದ್ದ ಆಯೋಜಕರು, ಅತಿಥಿಗಳ ಹಿಂಬಾಲಕರು ...ಆಮೇಲೆ ನಿರೂಪಕನ ಕಡೆ ತಿರುಗಿ ಕೂಡ ನೋಡೋದಿಲ್ಲ.

ಆಗ ಅವರ ಗಮನವೆಲ್ಲ ಅತಿಥಿಗಳನ್ನು ಬೀಳ್ಕೊದುವುದರ ಕಡೆಗೆ, ಹಾಡುಗಳ ಕಡೆಗೆ & ತೀರ್ಥ ಪ್ರಸಾದದ ಕಡೆಗೆ !

ನಿರೂಪಕನಿಗೆ ಗಂಟಲು ಆರಿರುತ್ತದೆ..ಅಲ್ಲಿ ನೀರು ಕೊಡಲೂ ಯಾರೂ ಇರೋದಿಲ್ಲ...

ಒಂದೇ ಸಮಾಧಾನ ಎಂದರೆ..ಜನರ ಪ್ರಶಂಸೆ ಫೀಡ್ ಬ್ಯಾಕ್ ಮಾತ್ರ ತಕ್ಷಣ ಸಿಗುತ್ತೆ...! ಅದರಲ್ಲೂ ಹುಡುಗಿಯರ ಪ್ರಶಂಸೆ ಸಿಕ್ಕರಂತೂ .....ರೆಕ್ಕೆ ಕಟ್ಟಿಕೊಂಡು ಹಾರುವುದೊಂದೇ ಬಾಕಿ...!!!

ಆತಂಕ..!



ನನ್ನ ನಿನ್ನ ನಡುವೆ ಅಂತರ ಹೆಚ್ಚಾದಷ್ಟು

ನನಗೆ ಏನೋ ಅನ್ನಿಸುತ್ತಿದೆ ಪ್ರಿಯೆ...

ಅದು ವಿರಹವಾ?

ನೀನು ಬದಲಾದೆಯಾ?

ನಾನು ಯಾತನೆ ಪಡುವುದನ್ನು ನೋಡಲು ಆಸೆಯಾ?

ಅಥವಾ ...ನನ್ನಿಂದ ದೂರಾಗುವೆ ಯೋಚನೆಯಾ?

ತಿಳಿಯದೆ ಕಂಗಾಲಾಗಿದ್ದೇನೆ...

ಕಾರಣ ಹೇಳುವೆಯಾ?

Monday, August 22, 2011

ನಿರೀಕ್ಷೆ...!


ಚಿನ್ನು,

ನೀನು ನನ್ನ ಭೇಟಿ ಮಾಡಲು ಬರುವೆಯೆಂದು ತಿಳಿದ ಆ ಘಳಿಗೆಯಿಂದ
ನಾನು ನಾನಾಗಿ ಉಳಿಯಲಿಲ್ಲ

ನನ್ನ ಕನಸುಗಳು ಗರಿ ಬಿಚ್ಚಿ ಕುಣಿಯಲಾರಮ್ಬಿಸಿವೆ

ನನ್ನ ಮನಸು ಕುನಿಯಲಾರಮ್ಬಿಸಿದೆ

ನನ್ನ ಮನಸು ಪುಳಕಾಗಿದೆ

ನನ್ನೆಲ್ಲ ಕನಸುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಹವನಿಸುತ್ತಿರುವೆ

ನೀ ಬಂದಾಗ ಸುರಿಯುತ್ತಿರುವ ಮಳೆಯಲ್ಲಿ ನಿನ್ನ ಜೊತೆ ನಡೆಯಬೇಕೆಂಬ ಬಯಕೆ ಹೆಚ್ಚುತ್ತಿದೆ

ನಮ್ಮಿಬ್ಬರ ಕನಸುಗಳ ಸಾಕಾರ ಗೊಳಿಸಲು ಯೋಜನೆ ರೂಪಿಸಬೇಕಿದೆ

ನಮ್ಮಿಬ್ಬರ ನಡುವೆ ಪ್ರೇಮ ಚಿಗುರಲಾರಮ್ಬಿಸಿದ ದಿನದಿಂದ ನಾವಾಡಿದ ಮಾತುಗಳನ್ನು ಮೆಲುಕು ಹಾಕಬೇಕಿದೆ

ಪ್ರೀತಿಯ ಉನ್ಮಾದದಲ್ಲಿ ತೆಲಬೆಕೆನಿಸಿದೆ

ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೆನಿಸಿದೆ.

ಭವಿತವ್ಯದ ಬಗ್ಗೆ ಚಿಂತಿಸಬೇಕಿದೆ

ನಿನ್ನ ಕಣ್ಣ ಆ ತುಂಟ ನೋಟ ನೋದಬೇಕೆನಿಸಿದೆ

ನಿನ್ನ ಕೈ ಹಿಡಿದು ನಾನಿನ್ದ್ದೇನೆ ಚಿಂತಿಸಬೇಡ ಎಂದು ಹೇಳಬೇಕೆನಿಸಿದೆ

ಬೇಗ ಬರುವೆಯ ಗೆಳತಿ ....

ನನ್ನ ನಿರೀಕ್ಷೆಯನ್ನು ಸಾಕಾರ ಮಾಡುವೆಯಾ

ನನ್ನ ಪ್ರೀತಿಯ ಸವಿಯನ್ನು ಸವಿಯುವೆಯಾ...

ನಿನ್ನ ಪ್ರೀತಿಯ ಸವಿಯನ್ನು ನನಗೆ ನೀಡುವೆಯಾ

ನಿನ್ನ ನಿರೀಕ್ಷೆಯ ಪ್ರತಿ ಘಳಿಗೆಯೂ ಯಾತನಾಮಯವಾಗಿದೆ...

ಈ ಯಾತನೆಯನ್ನು ನೀಗಿಸಿ ...ನನ್ನನ್ನು ಉಳಿಸುವೆಯಾ...?

Sunday, August 21, 2011

ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ...??!!



ಗೆಳತಿ,



'ಅಳು' ವೆಂದರೆನೆಂದು ನನಗೆ ಗೊತ್ತಿರಲಿಲ್ಲ...

ಬದುಕಿನಲ್ಲಿ..!

ನೋವು, ಕಷ್ಟ,ದುಃಖ ದುಮ್ಮನವೇ ಹಾಸು, ಹೊದ್ದು ಮಲಗಿದ್ದವನು ನಾನು..
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ...!

ಬದುಕಿನ ಅನೇಕ ವರ್ಷಗಳನ್ನು ಕಷ್ಟ, ಕಾರ್ಪಣ್ಯ, ಬಡತನದ ನೋವಿನಲ್ಲಿ ಕಳೆದವನು ನಾನು..
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ..!

ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದಿದ್ದಾರೆ ನಾನು ಮಾತ್ರ ದುಃಖದ ಮಡುವಿನಲ್ಲಿ...
ಬೆಂದು ಬಸವಳಿಯುತ್ತಿದ್ದೇನೆ ಎಂದು ಯೋಚಿಸುತ್ತಿದ್ದವನು ನಾನೂ..
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ...!

ಬದುಕಿನ ಮೊದಲ ದಿನದಿಂದ ನೀನು ನನ್ನ ಬದುಕಿನೊಳಗೆ..
ಪ್ರವೇಶಿಸುವ ತನಕ ನೋವಿನಲ್ಲಿ ಮುಳುಗಿದ್ದವನು ನಾನೂ,,.
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ..!

ಬಡತನದ ಬೇಗೆಯಲ್ಲಿ ಮಿಂದೆದ್ದೆ...
ಇಂದಿನ ಊಟಕ್ಕೆ ಏನು ಮಾಡಬೇಕೆಂದು ಕಂಗಾಲಾಗಿದ್ದವನು ನಾನೂ
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ..!

ಆದರೆ ...

ಗೆಳತಿ...

,,,,,,,,,
.......
ಒಂದೇ ಮಾತಿನಲ್ಲಿ ನೀನು ಹೇಳಿಬಿಟ್ಟೆಯಲ್ಲ ....

ನನ್ನನ್ನು ಮರೆತುಬಿದೂ ಎಂದೂ.....

ಆಗ...

ಬಿಕ್ಕಿ ಬಿಕ್ಕಿ.....ಅತ್ತುಬಿಟ್ಟೆ.....!!

Saturday, August 20, 2011

ಸಂತೃಪ್ತಿ...

ಓ ನನ್ನ ಜನುಮದ ಗೆಳತಿ...

ಎಲ್ಲ ಪ್ರೇಮಿಗಳಂತೆ ನಾವು ಮರ ಸುತ್ತಲಿಲ್ಲ...
ಕೈ ಕೈ ಹಿಡಿದು ಓಡಾಡಲಿಲ್ಲ...

ಕಾಫೀ ಪಾನೀಯ ಎಂದು ಹೋಟೆಲ್ ನ ಕಡೆ ಹೆಜ್ಜೆ ಹಾಕಲಿಲ್ಲ...
ಪಾರ್ಕಿನಲ್ಲಿ ಕುಳಿತು ಹರಟಲಿಲ್ಲ...

ಅನಾವಶ್ಯಕ ಸಂದೇಶಗಳ ವಿನಿಮಯ ಮಾಡಿಕೊಳ್ಳಲಿಲ್ಲ...
ಸದಾಕಾಲ ಮೊಬೈಲ್ ಗೆ ಅಂಟಿಕೊಲ್ಲಲಿಲ್ಲ...

ಇಷ್ಟಾಗಿಯೂ ......!

ನಾವಿಬ್ಬರು ಹತ್ತಿರವಾಗುವುದು ಬಿಡಲಿಲ್ಲ...
ಬೇರೆ ವಿಚಾರಗಳ ಬಗ್ಗೆ ಕಿವಿ ತಾಕಿಸದೆ ಇರಲಿಲ್ಲ...

ಮನೆಯವರಿಗೆ ತಿಳಿಸಲು ತಡ ಮಾಡಲಿಲ್ಲ....

ಅದಕ್ಕೆ.....!

ಅವರು ಒಪ್ಪದಿದ್ದರೆ ಮುಂದೇನು? ಎಂಭ ಭಯ ಕಾಡದೆ ಇರಲಿಲ್ಲ....
ಹೇಳಲೇ ಬೇಕಿದ್ದ ಎಸ್ಟೋ ಸಂಗತಿಗಳಿಗೆ ಮನದಲ್ಲೇ ಕಡಿವಾಣ ಹಾಕುವುದು ಮರೆಯಲಿಲ್ಲ....

ನೀನು ಹಾಗೆ ಉಳಿದೆಯಲ್ಲ...!
ನಾನೂ ಹಾಗೆ ಉಳಿದೆನಲ್ಲಾ..!!

ನಮ್ಮಿಬ್ಬರಿಗೂ ಯಾವುದೇ ಜವಾಬ್ದಾರಿಗಲಿರಲಿಲ್ಲ...

ಆದರೂ......

ಬದುಕಿನ ಬಗ್ಗೆ ಆಸಕ್ತಿ ಹೆಚ್ಚಿತ್ತಲ್ಲಾ..
ನಮ್ಮಯ ಬಂಧನವನ್ನು ಶಾಶ್ವಥಗೊಲಿಸಬೇಕು ಎಂಬ ಹಂಬಲ ವಿತ್ತಲ್ಲಾ..

ಮದುವೆ ಬಂದನದಿಂದ ಬೆಸೆಯಬೇಕೆಂಬ ಆಸೆ ನಮ್ಮದಾಗಿತ್ತಲ್ಲ...
ಆದ್ದರಿಂದಲೇ ಹೀಗಿದ್ದೆವೆನ್ನುವುದು ಪರಸ್ಪರ ಇಬ್ಬರಿಗೂ ಅರ್ಥವಾಗಿತ್ತಲ್ಲ..

ಅದೆಲ್ಲಕ್ಕಿಂತ...

ಮನೆಯಲ್ಲಿ ವಿಷಯ ತಿಳಿಸಿದಾಗ ಅವರು...Yes...ಎಂದಿದ್ದೆ ಸೋಜಿಗವಾಗಿತ್ತಲ್ಲ...

ಬೇಡದ ಚಿಂತೆಯಿಂದಾಗಿ ನಮಗೆ ಕೆಲವು ಮಧುರಾ ಗಳಿಗೆಗಳು ಸಿಗಲಿಲ್ಲವಲ್ಲ...

ಎಂದು ನಮ್ಮನ್ನು ನಾವೇ ಶಪಿಸಿಕೊಂದೆವಲ್ಲ...!

ಇಂದು ಮದುವೆಯನ್ನು ಆಗಿದ್ದೆವಲ್ಲಾ ....!!!
ನಮ್ಮಿಬ್ಬರ ಪ್ರೀತಿಯ ಕುರುಹಾಗಿ...

ಆರತಿಗೆ ಮಗಳು...
ಕೀರುತಿಗೆ...ಮಗ..ಹುಟ್ಟಿರುವರಲ್ಲಾ...

ನಮ್ಮ ಬಂಧನ ಗಟ್ಟಿ ಗೊಲಿಸಿದ್ದರಲ್ಲಾ..

ನಮ್ಮ ಪ್ರೇಮ ಸಾಫಲ್ಯ ಕಂಡಿದೆಯಲ್ಲಾ...

ನಮ್ಮಿಬ್ಬರ ಕುಟುಂಬಗಳನ್ನು ಬೆಸೆದಿದ್ದೀವಲ್ಲಾ..

ಗೌರವವನ್ನು ಕಾಪಡಿಕೊಂದೆವೆಂಬಾ ಎಂಬ ತೃಪ್ತಿ ನಮ್ಮಿಬ್ಬರಿಗೂ ಇದೆಯಲ್ಲ..

ಇಂತಹುದೇ ತೃಪ್ತಿ ಎಲ್ಲ ಪ್ರೇಮಿಗಳಿಗೂ ಸಿಗಲೀ ಎನ್ನುವ ಹಾರೈಕೆ ನಮ್ಮಿಬ್ಬರದಾಗಿದೆಯಲ್ಲಾ..

ಅಷ್ಟು ಸಾಕು...

ಇನ್ನೇನು ಬೇಕು ಈ ಬದುಕಿಗೆ ....? ಜನ್ಮ ಸಾರ್ಥಕ ವಾಗಿದೆಯಲ್ಲ...!!!

ಸ್ವಗತ .....!!!!


ಅಂದು ಮುಸ್ಸಂಜೆ ಭೇಟಿಯಾಗಿ...ಒಬ್ಬರಿಗೊಬ್ಬರು ಪರಿಚಯವಾಗಿ..
ಇಬ್ಬರೂ ಬಹಳ ಹತ್ತಿರ ಹತ್ತಿರವಾಗಿ...

ತೀವ್ರಗಾಗಿ,,,

ಪರಸ್ಪರ ಜೊತೆಯಾಗಿ..

ನನ್ನಲ್ಲೂ...ನಿನ್ನಲ್ಲು...ಪುಳಕ ಹೆಚ್ಚಾಗಿ...

ರೋಮಾಂಚನ ಸುಖವಾಗಿ...
ಜಗವೆಲ್ಲ ಮರೆಯುವಂತಾಗಿ...

ಯಾವುದಕ್ಕೂ ಹೆದರದಂತಾಗಿ..
ನೂರಾನೆ ಬಲ ಬಂದಂತಾಗಿ...

ಸಂಕೋಚ ಸುಳಿಯದಂತಾಗಿ..

ಅದೂ ...

ನಮ್ಮಿಬ್ಬರಿಗೂ ತಿಳಿಯದಂತಾಗಿ..
ನಾವೇ ಪ್ರಣಯ ಪಕ್ಷಿಗಳಾಗಿ..

ನಮ್ಮ ಸಮ ಯಾರಿಲ್ಲೆಂದು..ನಾವೇ ಪ್ರೇಮಿಗಳಾಗಿ...
ಪ್ರೇಮದ ಬಳ್ಳಿ ಚಿಗುರಿದಂತಾಗಿ..

ಮಗ್ಗು ಬಿರಿದು...ಕಾಯಾಗಿ...

ಹಣ್ಣಾಗಿ...

ಇಬ್ಬರಿಗೂ ತಿನ್ನುವ ಬಯಕೆಯಾಗಿ...

ಪ್ರೇಮದ ವಿಷಯ ಮನೆಯಲ್ಲಿ ತಿಳಿಸುವಂತಾಗಿ..
ಅವರು ತಿರಸ್ಕರಿಸುವಂತಾಗಿ..

ನಾವಿಬ್ಬರು ದೂರಾಗಿ...

ನಾನೊಂದು ತೀರದಲ್ಲಿ ನಿಲ್ಲುವಂತಾಗಿ...
ನೀನೊಂದು ದಡದಲ್ಲಿ ಕೂರುವಂತಾಗಿ...

ಪ್ರತಿ ದಿನವೂ ನಿನ್ನ ನೆನಪಾಗಿ ..
ಕಾಲ ದೂಡುತ್ತಿರುವೆ ಬೇಸರವಾಗಿ..

ನಿನಗೂ ಹೀಗನ್ನಿಸುತ್ತಿರಬಹುದು ಎಂಬಂತಾಗಿ..

ಏನೊಂದು ತಿಳಿಯದೆ ಕಂಗಾಲಾಗಿ ...
ಬರೆಯುತ್ತಿರುವೆ ಈ ವಿರಹವನು ಕವನವಾಗಿ...

ನನ್ನ ಕವನವನ್ನು ಓದುವ ಅವಕಾಶ ನಿನ್ನದಾಗಿ..
ಓಡೋಡಿ ಬರುವೆಯಾ ನನ್ನವಳಾಗಿ...

ಇಂತಿ ನಿನ್ನ ಒಲುಮೆಯ.

ಗೆಳೆಯ.....!

Friday, August 19, 2011

ಏಕೆ ಹೀಗಾಯ್ತೋ ......?





ಮರದ ಕೆಳಗೆ ನಾ ನಿಂತಿರಲು..
ಮಳೆಯೂ ಸೋನೆಯಾಗಿ ಸುರಿಯುತಿರಲು...

ಅಲ್ಲಿ ಮಿಂಚಂತೆ ನೀ ಬರಲು..
ಬಂದು ನಿನ್ನ ಮೊಗ ತೋರಲು....

ಏರಿತು ನನ್ನ ಎದೆಯ ಬಿಸಿಯುಸಿರು...

...............???

ಕತ್ತಲಾಯಿತು ಇಡೀ ಜಗತ್ತು...
ಇದುವೆನಾ ....ಅದು?....?

ಅದರ ಹೆಸರು ಪ್ರೇಮವೇ?

ಹಾಗನ್ನುವುದು ಇದ್ದನ್ನೇನೆ...?

ಗೊಂದಲದಲ್ಲಿದೇನೆ... ಗೆಳತಿ...ತಿಲಿಹೆಳುವೆಯಾ?

ನನ್ನನ್ನು ಈ ಗೊಂದಲದಿಂದ ಪಾರುಮಾಡುವೆಯಾ...?

ನಿವೇದನೆ...!!!!


ಪ್ರಿಯೆ,

ನಿನ್ನ ಕಂಡ ಮೊದಲ ದಿನವೇ ನಾ ಕಳೆದು ಹೋದೆ
ಅಂದಿನಿಂದ ನನ್ನ ಬಗ್ಗೆ ನಾ ಮರೆತು ಹೋದೆ

ನಿನ್ನ ಅಂದ ನಿನ್ನ ಚಂದ ಎಷ್ಟು ಸುಂದರ
ನಿನ್ನ ಮಾತು ನಿನ್ನ ನಡಿಗೆ ಇನ್ನು ಸುಮಧುರ

ನಿನ್ನ ಒನಪು ನಿನ್ನ ನಗುವು ಹೀಗೆ ಇದ್ದರೆ
ನನ್ನ ಬದುಕು ನಿತ್ಯ ಸುಮಧುರ ಕಾವ್ಯಧಾರೆ

ಇಷ್ಟು ದಿನವು ನನ್ನ ಬಳಿಗೆ ಏಕೆ ಬಾರದೆ
ನನ್ನ ಮನದಿ ದುಖ ದುಗುಡ ಹೆಚ್ಚು ಮಾಡಿದೆ

ಇನ್ನು ನೀನು ಹೆಚ್ಚು ದಿನವು ಸಿಗದೇ ಉಳಿದರೆ
ನನ್ನ ಹೃದಯ ಭಾರವಾಗಿ ಕಂಪಿಸದಿರೆ

ಇಷ್ಟು ಹೇಳಿ ನನ್ನ ನೋವು ನುಂಗುತಿರುವೇನು
ನನ್ನ ಮನದ ನೋವು ಅಳಿಸ ಬರುವೆಯೇನು?

Thursday, August 18, 2011

ಮಧುರ ನೆನಪು...




ಹೊರಗೆ ಅದ್ಭುತವಾದ ಮಳೆ...
ಮನಸಿನಲ್ಲಿ ಹಳೆಯ ನೆನಪುಗಳ ...ಸರಮಾಲೆ

ಪ್ರತಿ ಕ್ಷಣ ನೀ ನನ್ನನ್ನು ಕಾಡುತ್ತಿರುವೆ..
ಕಳೆದ ಆ ಮಧುರ ಕ್ಷಣಗಳನ್ನು ನೆನಪಿಸುತ್ತಿರುವೆ...

ಹೇಳದೆ ಏಕೆ ಹೊರಟೆ ನನ್ನ ಬದುಕಿನ ಬಂಡಿಯಿಂದ
ಮತ್ತೆ ಬರುವೆಯ ಎಂಬಂತೆ ಕಾಯುತ್ತಿರುವೆ ಹಗಲಿರುಳು ಆಸೆ ಕಣ್ಣಿನಿಂದ


ನಾ ಮಾಡಿದ ಅಪರಾಧವಾದರೂ ಏನು ಎಂದು ನಿನ್ನ ಕೆಲಬೇಕೆನ್ನಿಸುತಿದೆ
ಆದರೆ ಕೇಳಬೇಕೆಂದರೆ ನಿನ್ನ ಇರುವಿಕೆ ಎಲ್ಲೆಂದು ತಿಳಿಯದಾಗಿದೆ..


ಬದುಕಿನ ಬಂಡಿಯಲ್ಲಿ ಈ ಯಾತನೆ ಮರೆಯದಂತಾಗಿದೆ
ಮರೆಯಲೆತ್ನಿಸಿದಷ್ಟು ನೀ ನನ್ನನ್ನು ಅವರಿಸಿಕೊಂಡಂತಾಗಿದೆ ..


ನೀ ಎಲ್ಲಿರುವೆಯೋ ಹೇಗಿರುವೆಯೋ ಎಂದು ತಿಳಿಯದಿದ್ದರೂ
ನಾ ಮಾತ್ರ ಆಸೆ ಕಂಗಳಿಂದ ಎದುರು ನೋಡುತ್ತಿದ್ದೇನೆ ಕಾರಣ
ಮತ್ತೆ ನೀ ನನ್ನ ಬದುಕಿನೊಳಗೆ ಕಾಲಿಡುವೆಯೆಂದು...?

ಆ ದಿನಗಳು........



ಅದು ಕಾಲೇಜಿನ ಮೊದಲ ದಿನ. ಆಗ ತಾನೇ ಹಳ್ಳಿಯ ಕನ್ನಡ ಮಾದ್ಯಮದ ಶಾಲೆಯಿಂದ ಬಂದಂತಹ ನನಗೆ ಒಳಗೆ ಕೀಳರಿಮೆ..ಹೆಚ್ಚಾಗಿತ್ತು..ಕಾರಣ ನಮ್ಮ ತರಗತಿಯ ಬಹುತೇಕ ಸ್ನೇಹಿತರು ಆಂಗ್ಲ ಮಾದ್ಯಮದ ವಿದ್ಯಾರ್ಥಿಗಳು..ಅವರಿಗೆ ಇಂಗ್ಲಿಷ್ ಸುಲಭ ಸುಲಭ..ಇವರ ಮಧ್ಯೆ ನಾನು ಹೇಗೋ ಏನೋ ? ಎಂಬಂತೆ ಅಮಾಯಕತೆಯ ಮುಖ ಹೊತ್ತು ಮೊದಲ ದಿನ ಕಾಲೇಜಿಗೆ ಬಂದೆ.

ಬುರ್ತ್ತಿದ್ದ ಹಾಗೆಯೇ ಕ್ಲಾಸ್ ರೂಮು ಎಲ್ಲಿದೆ ಎಂದು ಹುಡುಕುವುದೇ ಒಂದು ಆತಂಕ ನನಗೆ. ಕ್ಲಾಸ್ ರೂಂ ಹುಡುಕಿ ಒಳಗೆ ಅಡಿಯಿಟ್ಟರೆ ಅಬ್ಬ...ಕ್ಲಾಸ್ ತುಂಬಿ ತುಳುಕಾಡುತ್ತಿದೆ ನಿಧಾನವಾಗಿ ಒಳಗೆ ಹೋದೆ ಎಲ್ಲರು...ಹೋ...........ಎಂದು ಕೂಗುತ್ತ ವೆಲ್ಕಮ್ ಮಾಡಿದರು ಕಾರಣ ಬಸ್ಸು ತಡವಾಗಿದ್ದರಿಂದ ನಾನು ಸ್ವಲ್ಪ ತಡವಾಗಿದ್ದೆ..ಆದರೆ ಉಪನ್ಯಾಸಕರು ಇನ್ನು ಬಂದಿರಲಿಲ್ಲ...

ಅಕ್ಕ ಪಕ್ಕದ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳೋಣ ಎನ್ನುವಸ್ತರಲ್ಲಿ ಉಪನ್ಯಾಸಕರು ಬಂದರು. ಮೊದಲ ದಿನದ ಮೊದಲ ತರಗತಿ ಇಂಗ್ಲಿಷ್.

goooooooooooood....................morning sirrrrrrrrrrrrrrrrrrrrrr.................ಎಂದು ಎಲ್ಲರು ಒಂದೇ ಕೋರಸ್ ನಲ್ಲಿ ಉಳಿದರು. ನಾನು ಗುಂಪಲ್ಲಿ ಗೋವಿಂದ ಅನ್ನೋ ಹಾಗೆ ಗುಡ್ ಮಾರ್ನಿಂಗ್ ಹೇಳಿದೆ...


ಸರಿ ಶುರುವಾಯ್ತು...ಉಭಾಯಕುಶುಲೋಪರಿ.....ಉಪನ್ಯಾಸಕರು ಹೇಳಿದರು..ನನ್ನ ಹೆಸರು..ಬಾಲಸುಬ್ರಮಣ್ಯಂ ಇಂಗ್ಲಿಷ್ ಉಪನ್ಯಾಸಕ...ಈಗ ನಿಮ್ಮ ನಿಮ್ಮ ಪರಿಚಯ ಮಾಡಿಕೊಳ್ಳಿ...ಎಲ್ಲಿಂದ ಬಂದೀರಿ, ನಿಮ್ಮ ಮಾರ್ಕ್ಸ್ ಎಷ್ಟು, ಜೀವನದಲ್ಲಿ ಏನಾಗಬೇಕು ಅಂತ ಅಂದುಕೊಂಡಿದ್ದೀರಿ..ಎಂದು,

ಡೌನ್ಲೋಡ್: ಎಟ್ಯ್ಪೆ೧.ಕಂ/ಫ.ಫ್ಪ್
ಮೊದಲ ಒಬ್ಬ ಸುಕೋಮಲ ಹುಡುಗಿಯಿಂದ ಶುರುವಾಯ್ತು...ಮೊದಲ ಬೆಂಚಿನ ಮೊದಲ ವಿಧ್ಯಾರ್ಥಿನಿ..Hi my name is somya ...my SSLC percentage is 89% and i want to become IAS.

ಹೀಗೆ ಶುರುವಾಗಿ ಪ್ರತಿಯೊಬ್ಬರು ಅವರವರ ಆಸೆ ಗುರಿಗಳನ್ನು ಹೇಳುತ್ತಾ ಬಂದರು. ನನ್ನ ಸರದಿ ಹತ್ತಿರ ಬರುತ್ತಿದ್ದಂತೆ ಎಡೆ ಧವ ಧವ ಕಾರಣ ನಮ್ಮ ಹಳ್ಳಿ ಶಾಲೇಲಿ ನಾನೇ ರಾಜ...ಅಲ್ಲಿ ನಾನೆ ಲೀಡರ್ ..ಇಡೀ ಶಾಲೆಗೆ ನಾನು ಗೊತ್ತು ಎಲ್ಲ ಕಾರ್ಯಕ್ರಮ ಸ್ಚೂಲ್ದ್ ಡೇ, ಸ್ಪೋರ್ಟ್ಸ್ ಡೇ, ಸರಸ್ವತಿ ಪೂಜೆ, ಪ್ರಭಂದ ಸ್ಪರ್ದೆ ಇವೆಲ್ಲಕ್ಕೂ ನಾನೆ ಹೋಗ್ತಾ ಇದ್ದೆ ಎಲ್ಲ ಶಿಕ್ಷಕರಿಗೂ ನಾನು ಅಚ್ಚುಮೆಚ್ಚು....

ಆದರೆ ಇಲ್ಲಿ ಎಂದರೋ ಮಹಾನುಭಾವುಲು...ಅನ್ನೋ ಹಾಗೆ ನನ್ನ ಅಂಕಗಳು ಇಲ್ಲಿನ ವಿದ್ಯಾರ್ಥಿಗಳ ಅಂಕಗಳ ಹತ್ತಿರ ಸುಳಿಯಲಿಲ್ಲ ಅಸ್ತೆ ಅಲ್ಲದೆ ಮೊದಲ ದಿನವೇ ಆತ್ಮ ವಿಶ್ವಾಸ ಕಡಿಮೆ ಆಗಿತ್ತು. ಸರಿ ನನ್ನ ಪರಿಚಯ ಹೇಳಿಕೊಂಡೆ ಜೀವನದಲ್ಲಿ ಒಬ್ಬ ಉತ್ತಮ ನೆತಾರನಗಬೇಕು, ಬದುಕು ಅಂದರೆ ಬರೀ ಡಾಕ್ಟ್ರು, ಎಂಜಿನೀರ್ ಅಸ್ತೆ ಅಲ್ಲ ನಾನು ಯಾವುದೇ ಕೆಲಸ ಮಾಡಿದರು ಯಾವುದೇ ಕ್ಷೇತ್ರಕ್ಕೂ ಹೋದರು the best.....ಆಗಬೇಕು ಅನ್ನೋದು ನನ್ನ ಆಸೆ ಎಂದು ಒಂದು ಪುಟ್ಟ ಭಾಷಣ ಮಾಡಿದೆ...ಎದ್ದು ನಿಲ್ಲುವ ವರಗೆ ಇದ್ದ ಆತಂಕ ಅದೆಲ್ಲಿ ಮಯವಗಿತ್ತೋ...ಗೊತ್ತಿಲ್ಲ..

ಹೀಗೆ ದಿನಗಳು ಉರುಲಿತಿದಂತೆ ಎಲ್ಲರು ಅಚ್ಚುಮೆಚ್ಚಿನ ಸ್ನೇಹಿತರು ಸ್ನೇಹಿತೆಯರು ಆದರು..

ತರಗತಿಯ ಎಲ್ಲ ಹುಡುಗಿಯರು ಬಹಳ ಕ್ಲೋಸ್ ಆಗಿದ್ದರಿಂದ ಬಹಳ ಫ್ರೆಂಡ್ಲಿ ಆಗಿ ಮೂವ್ ಮಾಡ್ತಿದ್ದೆ. ಅದೇ ಪ್ರತಿ ದಿನ ಬಸ್ಸಿನಲ್ಲಿ ಬರುವಾಗ ಬೇರೆ ಕಾಲೇಜಿನ ಹುಡುಗಿಯೊಬ್ಬಳು ನನ್ನನ್ನು ತುಂಬಾ ಕಾದುತ್ತಿದ್ದಳು...ಅಂದರೆ ಅವಳನ್ನ ನೋಡಿದರೆ ಏನೋ ಕುಶಿ, ಸಂಬ್ರಮ, ಸಂತೋಷ,..

ಅವಳು ಎಡಗಡೆ ಸೀಟ್ ನಲ್ಲಿ ಕುಳಿತರೆ ನಾನು ಅವಳ ಹಿಂದಿನ ಸೀಟ್...ಬಸ್ ಏನಾದ್ರು ರಶ್ ಇದ್ರೆ ನಾನು ಅವಳಿಗೆ ಸಮೀಪದಲ್ಲೇ ನಿಲ್ಲುವುದು ....

ಅವಳ ಜೊತೆ ಇದ್ದ ಇತರೆ ಹುಡುಗಿಯರನ್ನು ಸರಿಯಾಗಿ ನೋಡಿದ್ದೇ..ಇಲ್ಲ ಹೇಗಿದ್ದರೂ ಏನು ಎಂದು..ನನ್ನ ಪೂರ್ತಿ ಏಕಾಗ್ರತೆ ಇವಳ ಮೇಲೆ...

ಅವಳೂ ಒಂದು ದಿನ ಮಾತನಾಡಲಿಲ್ಲ....ನಾನು ಒಂದು ದಿನ ಮಾತನಾಡಲಿಲ್ಲ


ನೋಡಿದಾಗ ಮಾತ್ರ ಸ್ಮೈಲ್ ಮಾಡುತ್ತಿದ್ದಳು.....

ಪ್ರಪಂಚ ಪ್ರಳಯ ಅದ್ರು ಸರಿ ನಾನು ಕಾಲೇಜಿಗೆ ಹೋಗಲೇ ಬೇಕು ಅಂತ ನಾನು ಹೊರಟರೆ ಕೆಲವೊಮ್ಮೆ ಅವಳು ಚಕ್ಕರ್ ಹಾಕುತ್ತಿದ್ದಳು ಬಸ್ಸಿನಲ್ಲಿ ಬರುತ್ತಿರಲಿಲ್ಲ

ಅವತ್ತೆಲ್ಲ ಬಸ್ಸು ಬಣ ಬಣ ...ಯಾರು ಇಸ್ತವಾಗ್ತಾ ಇರ್ಲಿಲ್ಲ...ಒಂದು ಕಡೆ ಕಂಡಕ್ಟರ್ ನನ್ನ ಡ್ರೈವರ್ ನ ನೋಡಿ ಕೋಪ ಉಕ್ಕಿ ಬರ್ತಿತ್ತು ...ನನ್ನವಳನ್ನು ಯಾಕೆ ಕರೆತರಲಿಲ್ಲ ಎಂದು..

ಪಾಪ ಬಡಪಾಯಿಗಳು...ಅವರೇನು ಮಾಡಲು ಸಾದ್ಯ...ಎಂದು ನನಗೆ ನಾನೇ ಸಮಾದಾನ ಮಾಡಿಕೊಳ್ಳುತ್ತಿದ್ದೆ...

ಅದೊಂದು ದಿನ ಒಬ್ಬ ಪುಟ್ಟ ಹುಡುಗ ಪ್ರತಿದಿನ ನಮ್ಮ ಜೊತೆ ಪ್ರಯಾಣ ಮಾಡುತ್ತಿದ್ದ..ಅವನು ಅವಳ ಪಕ್ಕ ಕುಳಿತಿದ್ದ ಅವನು ಬಸ್ಸು ಇಳಿದ ತಕ್ಷಣ ಅವನನ್ನ ಫ್ರೆಂಡ್ ಮಾಡಿಕೊಂಡೆ...ಅವಳ ಹೆಸರೇನು ಎಂದು ಚಾಕ್ ಲೇಟ್ ಕೊಡಿಸಿದೆ...

ಆಗ ಅವನು ನಾಳೆ ಹೇಳುತ್ತೇನೆ ಅಂತ...ಓಡಿದ

ಸರಿ ನಾಳೆ ಮತ್ತೆ ಅವನಿಗೆ ಚಾಕ್ ಲೇಟ್ ಸೇವೆ ಶುರು...ಹೀಗೆ ಚೆನ್ನಾಗಿ ಉಪಯೋಗಿಸಿಕೊಂಡ ಆ ಪುಟ್ಟ ಹುಡುಗ...ಹೆಸರನ್ನು ಅವಳ ಎಲ್ಲ ವಿಚಾರಗಳನ್ನು ಹೇಳಿದ


ಆ ಹೆಸರು ಕಿವಿಗೆ ಬಿದ್ದರೆನೆ ರೋಮಾಂಚನ ಆಗ್ತಾ ಇತ್ತು......

ಒಂದು ಇಡೀ ವರ್ಷವಾಯ್ತು ಅವಳನ್ನ ಮಾತನಾಡಿಸಲು........

ಇಬ್ಬರ ನಡುವಿನ ಗೆಳೆತನ ಬೆಸೆಯಿತು...ಬೇರೆ ಬೇರೆ ಸೀಟ್ ಗಳಲ್ಲಿ ಕುಳಿತು ಕೊಳ್ಳುತ್ತಿದ್ದ ನಾವು ಈಗ ಒಂದೇ ಸೀಟ್ ನಲ್ಲಿ ಕುಳಿತುಕೊಳ್ಳಲು ಶುರು ಮಾಡಿದೆವು.

.......ಅವಳ ಎಲ್ಲ ಗೆಳತಿಯರು ಈಗ ನನಗೆ ಪರಿಚಯವಾಗಿ ಕ್ಲೋಸ್ ಆದರು.

ಕಾಲೇಜಿನ ಸ್ನೇಹಿತೆಯರ ಜೊತೆ ಸರಾಗವಾಗಿ ಮಾತನಾಡುತ್ತಿದ್ದ ನಾನು ಇವಳ ಜೊತೆ ಸ್ವಲ್ಪ ಯೋಚಿಸಿ ಮಾತನಾಡುತ್ತಿದ್ದೆ...ಎಲ್ಲಾದರು ಮನಸಿನ ಭಾವನೆ ಬ್ಲಾಸ್ಟ್ ಆದರೆ ಎಂಬ ಆತಂಕದಿಂದ...


.....ಬದುಕು...ಹೀಗೆ ನಡೆಯುತ್ತಿತ್ತು....ಕಾಲೇಜು ಸ್ನೇಹಿತರು..ಬಸ್ಸಿನ ಈ ಸುಂದರಿ..ಇನ್ನೇನು ಬೇಕು ಬದುಕಲ್ಲಿ....

ಪ್ರತಿ ದಿನ ಮಾತು ಕಥೆ ಎಲ್ಲ ನಡೆಯುತ್ತಿದ್ದರು ಅದಕ್ಕಿಂತ ಮುಂದೆ ಹೋಗಲು ಸಾದ್ಯವೇ ಆಗುತ್ತಿರಲಿಲ್ಲ.

ಸರಿ ದ್ವಿತೀಯ ಪಿ ಯು ಪರೀಕ್ಷೆ ಮುಗಿಯಿತು...

ನಾನು ಇನ್ನು ಮೂರು ವರ್ಷ ಒಟ್ಟಿಗೆ ಪಯಣ ಮಾಡುತ್ತೇವೆ...ಡಿಗ್ರೀ ನಲ್ಲಾದರು ನನ್ನ ಪ್ರೇಮ ನಿವೇದನೆ ಮಾಡಲೇ ಬೇಕು ಎಂಬ ಹಠ ತೊಟ್ಟೆ...

ಪಿ ಯು ಪಲಿತಾಂಶ ಬಂತು...

ನಾನೂ ಪಾಸ್ ಆಗಿದ್ದೆ..............ಅವಳು ಪಾಸ್ ಆಗಿದ್ದಳು...


ನನ್ನದು ಡಿಗ್ರಿ ಅದ್ಮಿಶೇನ್ ಆಯಿತು...ಅವಳು ಬೇರೆ ಕಾಲೇಜು ಆಗಿದ್ದರಿಂದ ಮತ್ತೆ ಅದೇ ಕಾಲೇಜಿಗೆ ಸೇರಿರುತ್ತಲೇ ಬಿಡು ಎಂದುಕೊಂಡು ..ಪದವಿ ಕಾಲೇಜಿನ ಮೊದಲ ದಿನಕ್ಕಾಗಿ..ಕಾಯುತ್ತ ಕೂತೆ...


...ಮೊದಲ ದಿನ ಬಂತು...

ಬಸ್ಸು....ಬಂತು....

ನಾನೂ ಬಸ್ಸು ಹತ್ತಿ ಅವಳಿಗಾಗಿ ಹುಡುಕಿದೆ....ಎಲ್ಲಿದ್ದಾಳೆ..???

ಎಲ್ಲಿದ್ದಾಳೆ? ಹುಡುಕಿದೆ ಹುಡುಕಿದೆ....ಹುದುಕಾಆಆಆಆಆಆಆಆದಿದೆ ?


ಆ ಪುಟ್ಟ ಹುಡುಗ ಹೇಳಿದ...ಅಕ್ಕ...ಬೆಂಗಳೂರಿನ ಕಾಲೇಜಿಗೆ ಸೇರಿದ್ದಾಳೆ ...ಅಲ್ಲೇ ಅವರ ಚಿಕ್ಕಮ್ಮನ ಮನೆಯಲ್ಲಿ ಇದ್ದು ಓದುತ್ತಳಂತೆ..ಅಂತ...

ಮನಸಿನ ತುಂಬೆಲ್ಲ ಅವಳದೇ ಗುಂಗು ತುಂಬಿಕೊಂಡು...ಈ ಮೂರೂ ವರ್ಷದಲ್ಲಿ ಎಂದಾದರೂ ಒಂದು ದಿನ ...ನೀನಂದ್ರೆ ನನಗಿಸ್ತ ಕಣೆ...ಅಂತ ಹೇಳಬೇಕು...ಎಂಬ ನನ್ನ ಆಸೆ....ಹಾಗೆ ಉಳಿಯಿತು...


...ವರುಷಗಳು ಕಳೆಯಿತು...ಪದವಿ ಯಾ ಕೊನೆಯ ವರುಷದಲ್ಲಿ ಇದ್ದಾಗ....ಅದೇ ಹುಡುಗ...ಬಂದು ಹೇಳಿದ...ಅಣ್ಣ ಅಕ್ಕನಿಗೆ ಮದುವೆ ಆಯಿತು..ಅಂದ..

ಜಂಗಾ ಬಲ ಉಡುಗಿ ಹೋಯ್ತು...ನನ್ನ ಕನಸಿನ ಗೋಪುರಕ್ಕೆ ಯಾರೋ ಬಂದು ಬಾಂಬ್ ಇತ್ತಂತೆ ಆಯಿತು..

ಇಷ್ಟು ಬೇಗ ಯಾಕೆ ಅಂದೇ...ಅದಕ್ಕೆ ಅವರ ತಂದೆಗೆ ತುಂಬಾ ಹುಷಾರಿರಲಿಲ್ಲ...ಅದಕ್ಕೆ ಅವರು ಮಗಳ ಮದುವೆ ನೋಡಬೇಕು ಅಂದರಂತೆ...

ಸರಿ ಯಾರೋ ಸಂಬಂದದಲ್ಲಿ ಹುಡುಗ ಇದ್ದನಂತೆ...ಅದಕ್ಕೆ...ಮದುವೆ ಮಾಡಿಸಿ ಬಿಟ್ಟರು..ಅಂದ..


ಒಹ್...ದೇವರ್ರೆ...

ಏನು ನಿನ್ನ ಲೀಲೆ...

ವರುಷಗಳು ನಾನು ಕಾದಿದ್ದು...ಇದಕ್ಕೇನ...ಎಂದು ಮನಸ್ಸು ರೋದಿಸುತ್ತಿತ್ತು...

ಇತ್ತೆಚೆಗೊಂದು ದಿನ ಅವಳು ತನ್ನ ಇಬ್ಬರು ಮಕ್ಕಳ ಜೊತೆ ಕಾಣಿಸಿದಳು...ನೋಡಿದಾಗ ಮಾತನಾಡಿಸುವ ಧೈರ್ಯ ಬರಲಿಲ್ಲ...

ಇದೆಲ್ಲ ನೆನಪಾಯ್ತು.....................................

............................................................


.............ಅಂದ ನನ್ನ ಗೆಳೆಯ..!

Wednesday, August 17, 2011

ಮೊದಲ ಪ್ರೇಮ .....?!!!




...................


ಮನಸು ಪ್ರತಿ ಸಾರಿಯೂ ಅವಳತ್ತ ಹೊರಳುತ್ತಿತ್ತು ಅವಳು ಯಾವಾಗ ತರಗತಿಗೆ ಬರುವಳೋ ಯಾವಾಗ ಅವಳನ್ನ ನೋದುವೇನೋ ಎನ್ನುವ ಕಾತುರ ಪ್ರತಿದಿನ ಪ್ರತಿಕ್ಷಣ ಅನ್ನಿಸ್ಸುತ್ತಿತ್ತು.

ಒಂದು ದಿನ ರಜಾ ಹಾಕಿದರಂತೂ ಮನಸು ಏನೋ ಕಳೆದುಕೊಂಡಂತೆ. ಏನೋ ಅಸಮಾದಾನ,.ಏನೋ ಆತಂಕ ಏನೋ ಕಳೆದುಕೊಂಡಂತೆ?

ಪ್ರತಿ ದಿನ ಬರೀ ನೋಡಿ ಆನಂದ ಪಡುತ್ತಿದ್ದವನು ಒಮ್ಮಿಂದೊಮ್ಮೆಲೆ ಧೈರ್ಯ ಮಾಡಿ ಮಾತನದಿಸೆ ಬಿಡೋಣ ಎಂಬ ಧೈರ್ಯ ಹೆಚ್ಚಾಯಿತು. ಮುಂಜಾನೆ ತರಗತಿಗೆ ೨ ತಾಸು ಮೊದಲೇ ಕ್ಯಾಂಪಸ್ ಗೆ ಹೋದೆ ಅವಳಿಗಾಗಿ ಕಾಯುತ್ತಲಿದ್ದೆ.ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಕುಳಿತಲ್ಲಿಂದಲೇ ಪೇಚಾಡುತ್ತ ಪಡೆ ಪಡೆ ಟೈಮ್ ನೋಡುತ್ತಲಿದ್ದೆ. ಯಾವಾಗ ಅವಳು ಬರುವಳೋ, ಯಾವಾಗ ನಾನು ಅವಳನ್ನ ಮಾತನಾಡಿಸುವೇನೋ, ಇದು ಮೊದಲ ಪರಿಚಯವಾದರು ಸರಿ ಮನಸಿನ ಭಾವನೆಯನ್ನು ಯಾವಾಗ ಹೇಳುವೇನೋ ಎಂಬ ತುಡಿತ ಹೆಚ್ಚಾಗುತ್ತಲೇ ಇತ್ತು..

ಮೊದಲ ದಿನ ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳಿಗಾಗಿ ಸ್ವಾಗತ ಕಾರ್ಯಕ್ರಮ ಏರ್ಪಾಟು ಮಾಡಲಾಗಿತ್ತು. ಅವಳು ಗುಲಾಬಿ ಬಣ್ಣದ ಸಲ್ವಾರ್ನಲ್ಲಿ ಕೂದಲನ್ನು ಇಳಿಬಿಟ್ಟು ಹಣೆಯ ಮೇಲೊಂದು ಪುಟ್ಟ ಬಿಂದಿ ಇಟ್ಟುಕೊಂಡು ತನ್ನ ಮುಂಗುರಳನ್ನು ಹಿಂದಕ್ಕೆ ಸರಿಸುತ್ತ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಕಾಲೇಜಿನ ಕಡೆಗೆ ಬರುತ್ತಿರುವಾಗಲೇ ನಾನವಳನ್ನ ಮೊದಲ ಸಲ ನೋಡಿದ್ದು. ನೋಡ ನೋಡುತ್ತಿದ್ದಂತೆಯೇ ಮನಸು ಗರಿ ಬಿಚ್ಚಿ ಕುಣಿಯಲಾರಮ್ಬಿಸಿತು. ಮನಸಿನಲ್ಲಿ ಏನೋ ಸಂತೋಷ ಸಂಬ್ರಮ ಖುಷಿ. ಆದರೆ ಕೆಲವೇ ಕ್ಷಣಗಳಲ್ಲಿ ತಿಳಿಯಿತು ಅವಳು ನಮ್ಮದೇ ಕ್ಲಾಸ್ ನವಲೆಂದು. ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲಿಕ್ಕೆ ಎಂದು ಮನಸಿನಲ್ಲೇ ಅಂದುಕೊಂಡೆ. Love at First sight ಅಂದ್ರೆ ಇದೇನಾ...ಗೊತ್ತಿಲ್ಲ?

ಆದರೆ ಅಂದುಕೊಂದಸ್ತು ಸುಲಭವಾಗಲಿಲ್ಲ ಅವಳನ್ನ ಪರಿಚಯ ಮಾಡಿಕೊಳ್ಳುವುದು. ಕಾರಣ ಅವಳು ಮಾತು ಬೆಳ್ಳಿ ಮೌನ ಬಂಗಾರ ಎಂಬಂತಿರುತ್ತಿದ್ದಳು. ಹುಡುಗಿಯರ ಹತ್ತಿರವೇ ಹೆಚ್ಚು ಮಾತನಾಡುತ್ತಿರಲಿಲ್ಲ ಇನ್ನು ಹುಡುಗರ ಹತ್ತಿರ...?

ಈ ವಿಚಾರ ಗೊತ್ತಾದ ಮೇಲೆ ಈಗಲೇ ಮಾತನಾಡಿಸುವುದು ಒಳ್ಳೆಯದಲ್ಲ ಸ್ವಲ್ಪ ಸಮಯ ಕಳೆಯಲಿ ಆಮೇಲೆ ಮಾತನಾಡಿಸೋಣ, ನನ್ನ ಮನಸ್ಸಿನ ಭಾವನೆ ಹೇಳೋಣ ಎಂದುಕೊಂಡು ಅವಳ ರುಚಿ, ಅಭಿರುಚಿ, ವಿವರ ಕಲೆಹಾಕಲು ಆರಂಬಿಸಿದೆ.

ಅಪ್ಪ ಸರ್ಕಾರಿ ಅಧಿಕಾರಿ, ಒಬ್ಬ ಅಣ್ಣನಿದ್ದಾನೆ ಅವನು ಮುಂಬೈ ನಲ್ಲಿ ಉದ್ಯೋಗದಲ್ಲಿದ್ದಾನೆ, ಇನ್ನು ಒಬ್ಬಳು ಪುಟ್ಟ ತಂಗಿ ಇನ್ನು ಹೈಸ್ಚೂಲ್ ಮೊದಲ ವರ್ಷದಲ್ಲಿದಲೇ ಈಗ ಸದ್ಯಕ್ಕೆ ಮನೆಯಲ್ಲಿರುವವರು ಅವಳ ತಾಯಿಯೂ ಸೇರಿ ೪ ಮಂದಿ.

ಅವಳ ಮನೆಯ ವಿಳಾಸ ಪತ್ತೆ ಮಡಿ ಅವಳ ಚಲನ ವಲನ ಗಮನಿಸಿ ಅವಳ ದಿನಚರಿ ಗಮನಿಸಿದ್ದು ಅತ್ಯು. ಪಿ.ಯು ಮಂಗಳೂರಿನಲ್ಲಿ ಮುಗಿಸಿ ಪದವಿಗೆ ನಮ್ಮ ಕಾಲೇಜಿಗೆ ಸೇರಿದ್ದಳು. ಅಪ್ಪ Transferble ಜಾಬ್ ನಲ್ಲಿ ಇದ್ದುದರಿಂದ ನಮ್ಮ ಕಾಲೇಜಿಗೆ ಸೇರಿದ್ದಳು.

ಇಸ್ಟೆಲ್ಲಾ ವಿವರ ಸಿಕ್ಕ ಮೇಲೆ ಇನ್ನು ಕುಶಿ ಆಯಿತು. ಮನಸಿನಲ್ಲಿ ಅಂದುಕೊಂಡೆ...ಮಗಾ ಒಳ್ಳೆ ರೆಸೆರ್ಚ್ ಮಾಡಿದಿಯ ಅಂತ..

ಇನ್ನೇನು ಕಾಲೇಜಿನ ಬೆಲ್ಲು ಹೊಡೆಯಲು ಕೇವಲ ೧೦ ನಿಮಿಷ ವಿದೆ ಎನ್ನುವಾಗ ರಸ್ತೆಯತ್ತ ನೋಡಿದೆ...ದೊರದಲ್ಲಿ ಅವಳ ಸುಂದರ ಸುಕೊಮಲವಾದ ಮುಖ ಕಾಣಿಸಿತು. ಮನಸಿನ ಉದ್ವೇಗ ಹೆಚ್ಚಾಯಿತು. ಅವಳು ಹತ್ತಿರ ಬರುತ್ತಿದ್ದಂತೆ...ಎದೆಯ ಬಡಿತ ಹೆಚ್ಚಾಗುತ್ತಿತ್ತು.

ಇನ್ನೇನು ಹಾತೀರ ಬಂದಳು...ನನಗು ಅವಳಿಗೂ ಕೇವಲ ೧೦ ಹೆಜ್ಜೆ...................................


.......................................................

........................................ಮಾತನಾಡಿಸಲು ಧೈರ್ಯ ಮಾಡಿ ಮುಂದೆ ಅಡಿಯಿತ್ತೆ....

............................................................ಥಟ್ಟನೆ ಎಚ್ಚರ ವಾಯ್ತು, ಅಲಾರ್ಮ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ................ಸಮಯ ಬೆಳಿಗ್ಗೆ ೬ ಘಂಟೆ ...ಒಹ್ ......


ಕನಸಾ...ಛೆ ...ಪುರ್ತಿಯಾಗಲೇ ಇಲ್ಲ ಎಂಬ ಬೇಸರದಲ್ಲಿ...ಎದ್ದು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ...!!!

Tuesday, August 16, 2011

ಆಪರೇಶನ್ ಕ್ಯಾಟ್ ..!!!



ಇತ್ತೆಚೆಗೊಂದು ದಿನ ಮನೆಯಲ್ಲಿ ಯಾವುದೊ ಒಂದು ಪುಸ್ತಕ ಓದುತ್ತ ಕುಲಿತಿದ್ದಗೆ ಒಮ್ಮಿನೋದೊಮ್ಮೇಲೆ ಒಂದು ಬೆಕ್ಕು ಕಿಟಕಿ ಮೂಲಕ ಒಳಬಂತು. ಬಾಯಿಯಲ್ಲಿ ಏನೋ ಕಚ್ಚಿ ತಂದಿದ್ದು ನೋಡಿ ಇಲಿ ಎಂದುಕೊಂಡು ಬೆಕ್ಕನ್ನ ಫಾಲೌ ಮಾಡಿದೆ. ಅದು ಸೀದಾ ಹೋಗಿ ವಾರ್ಡ್ ರೋಬ್ ಸೇರಿಕೊಲ್ಲಬೇಕೆ.

ನಾನೆಂದು ಬೆಕ್ಕನ್ನ ಮುಟ್ಟಿಲ್ಲ, ಮುಟ್ಟಿಲ್ಲ ಅನ್ನೋದಕ್ಕಿಂತ ಭಯ ಅಂದ್ರೆ ಸೂಕ್ತ. ಸರಿ ಹೋಗಿ ವರ್ಡ್ ರೋಬ್ ಬಾಗಿಲನ್ನ ಪೂರ್ತಿ ಸರಿಸಿದರೆ ಪಿಳಿ ಪಿಳಿ ಕಣ್ಣು ಬಿಡುತ್ತಿವೆ ೫ ಬೆಕ್ಕಿನ ಮರಿಗಳು. ನನಗೋ...ಮೈ ಜುಮ್ ಎನ್ನಿಸಿತು..ಹೊರಗೆ ಮಳೆ ಬಂದು ನಿಂತಿದೆ...ರಾತ್ರಿ ೯ ಗಂಟೆ ಆಗಿದೆ ಸರಿ ಅದನ್ನು ಈಗ ಟಚ್ ಮಾಡಲು ಹೋದರೆ ತಾಯಿ ಬೆಕ್ಕು ಸುಮ್ಮನಿರುವುದೇ? ಅದರಲ್ಲೂ ಅಂತಹ ಮಳೆಯ ವಾತವರಣದಲ್ಲಿ ಅಮಾನವೀಯವಾಗಿ ಹೇಗೆ ಹೊರ ಹಾಕುವುದು? ಸ್ವಲ್ಪ ಯೋಚಿಸಿದೆ..ಎಷ್ಟು ದಿನದಿಂದ ಇದು ನನ್ನ ಮನೆಯಲ್ಲಿ ವಸವಿದೆಯೋ ಗೊತ್ತಿಲ್ಲ ಅದರಲ್ಲೂ ನಾನೊಬ್ಬನೇ ಇದ್ದೇನೆ ಎಂದು ಅರಿತು ಕಂಪೆನಿ ಕೊಡುವುದಕ್ಕೆ ಬಂದಿರಬೇಕು ಎಂದು ಸಮಾದಾನ ಮಾಡಿಕೊಂಡು ಮಲಗೋಣ ಎಂದು ಗಟ್ಟಿ ಧೈರ್ಯ ತಂದುಕೊಂಡೆ.

ಅದು ನನಗೇನು ತೊಂದರೆ ಕೊಡುವುದಿಲ್ಲ ಎಂಬ ಅರಿವಿದ್ದರು ಮನಸ್ಸಿಗೆ ಏನೋ ಆತಂಕ...ರಾತ್ರಿ ಪೂರ ನೆಮ್ಮದಿಯಾಗಿ ನಿದ್ದೆ ಏನು ಮಾಡಲಿಕ್ಕೆ ಆಗಲಿಲ್ಲ. ಸರಿ ಬೆಳಿಗ್ಗೆ ಎದ್ದು ಹೇಗೆ ಈ ಬೆಕ್ಕನ್ನ ಜಾಗ ಖಾಲಿ ಮಾಡಿಸುವುದು ಎಂಬ ತಲೆಬಿಸಿಯಲ್ಲಿ ಇದ್ದಾಗ...

ಒಬ್ಬ ಹುಡುಗ ಎದುರು ಮನೆಯಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಅವನನ್ನ ಹತ್ತಿರ ಕರೆದು ಈ ವಿಚಾರ ಹೇಳಿದೆ ಅದಕ್ಕವನು ಒಹ್...ನಾನು ನಮ್ಮ ಮನೆಗೆ ತೊಗೊಂಡ್ ಹೋಗ್ತೀನಿ ಅಲ್ಲಿ ಯಾರಿಗಾದರೂ ಮರಿಗಳನ್ನು ಕೊಡುತ್ತೇನೆ ಅಂದ, ನನಗೆ ತಾಯಿ ಮಕ್ಕಳನ್ನು ಹೇಗೆ ಬೇರೆ ಮಾಡುವುದು, ಆಮೇಲೆ ಪಾಪ ಪ್ರಜ್ಞೆ ಕಾಡುವುದು ಗ್ಯಾರಂಟಿ ಎಂದು ಯೋಚಿಸಿ ಬೇಡ ಅವುಗಳನ್ನ ಬೇರೆ ಮಾಡಬೇಡ ಎಂದೇ ಅದಕ್ಕವನು ಸರಿ ಖಾಲಿ ಮಾಡಿಸುತ್ತೇನೆ ನೀವು ತಲೆ ಬಿಸಿ ಮಾಡ್ಕೋಬೇಡಿ ಅಂದ. ಅಬ್ಬ ಒಳ್ಳೆ ಕೆಲಸ ಆಯಿತು ಅಂತ ಆ ಹುಡುಗನನ್ನು ಮನೆಗೆ ಬರಮಾಡಿಕೊಂಡೆ.

ಹುಡುಗ ಒಳಗೆ ಬಂದು ನಿದಾನವಾಗಿ ವರ್ಡ್ ರೋಬ್ ನೋಡಿದ. ತಾಯಿ ಮಕ್ಕಳಿಬ್ಬರು ಸ್ವಚಂದವಾಗಿ ರೆಸ್ಟ್ ತೊಗೋತ ಇದ್ದರು. ಸದ್ದು ಮಾಡುತ್ತ ತಾಯಿ ಬೆಕ್ಕನ್ನ ಹೊರಗೆ ಓಡಿಸಿದ...೫ ಮರಿಗಳನ್ನು ನಿದಾನವಾಗಿ ಹಿಡಿದು ಹೊರತಂದು ಟೆರೆಸ್ ಮೇಲೆ ಇತ್ತ...ಸ್ವಲ್ಪ ಹೊತ್ತು ದೂರದಲ್ಲಿ ಕುಳಿತು ನೋಡುತ್ತಾ ಇದ್ದೆ ತಾಯಿ ಬೆಕ್ಕು ತನ್ನೆಲ್ಲ ಮರಿಗಳನ್ನ ಹೊತ್ತು ಬೇರೆ ಲೋಕಷೆನ್ ಗೆ ಶಿಫ್ಟ್ ಆಯಿತು.

ಅಂತು ಇಂತೂ 'Operation Cat' ಸುಖಾಂತ್ಯ ಕಂಡಿತು. ನನಗು ಸ್ವಲ್ಪ ನೆಮ್ಮದಿ ಆಯಿತು.

ಕಥೆಯ ನೀತಿ: ಬೇರೆಯವರ ಬೆಕ್ಕು ಬಂದು ನಿಮ್ಮ ಮನೇಲಿ ಮರಿ ಹಾಕಬಾರದು ಎಂದಾದರೆ ನಿಮ್ಮ ಕಿಟಕಿ ಬಾಗಿಲನ್ನು ಸರಿಯಾಗಿ ಭದ್ರ ಮಾಡಿ.

Thursday, August 11, 2011

''ಪ್ರೇಮ ತರಂಗ'




ರೈಲು ಬಿಡದಿ ಸ್ಟೇಷನ್ ದಾಟಿ ಮುನ್ನುಗ್ಗುತ್ತಿತ್ತು. ಶ್ವೇತ ಮನಸಿನಲ್ಲೇ ಲೆಕ್ಕಾಚಾರ ಹಾಕುತ್ತಿದ್ದಳು. ನನಗೆ ಎಂಟು ಜನ ಆಫೀಸಿನಲ್ಲಿ ಪ್ರಪೋಸ್ ಮಾಡಿದಾರೆ ಆದರೆ ನಾನು ಮಾತ್ರ ಸುಧನ್ವನ ಹಿಂದೆ ಬಿದ್ದಿದ್ದೇನೆ. ಅವನೋ...Moodi...ಏನು ಹೆಚ್ಚು ಮಾತಾಡೋಲ್ಲ.

ಈ ಮೂರು ಗಂಟೆಗಳ ಪ್ರಯಾಣವನ್ನು ಉಪಯೋಗಿಸಿಕೊಳ್ಳಬೇಕು, ಹೇಗಾದರು ಮಾಡಿ ಇವತ್ತು ನನ್ನ ಮನಸ್ಸಿನ ಆಸೆಯನ್ನು 'ಸುಧನ್ವ'ನಿಗೆ ಹೇಳಬೇಕು ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ ರೈಲನ್ನು ಹತ್ತಿದ್ದಳು..ಬಿಡದಿ ನಿಲ್ದಾಣ ಬಂದರೂ ಒಂದೇ ಒಂದು ಮಾತು ಸುಧನ್ವನ ಬಾಯಿಂದ ಹೊರಬಿದ್ದಿಲ್ಲ, ಇವಳೋ ಮಾತನಾಡಿಸಲು ಶತಪ್ರಯತ್ನ ಮಾಡುತ್ತಿದ್ದಾಳೆ....!

ಸುಧನ್ವ ನೀನು ಮಾತನಾಡದಿದ್ದರೆ ನಾನು ಬೇರೆ ಬೋಗಿಗೆ ಹೋಗಿ ಕುಳಿತುಕೊಳ್ಳುತ್ತೇನೆ ಎಂದು ಕೋಪದಲ್ಲಿ ಹೇಳಿದಾಗ ಸುಧನ್ವ ನಿಧಾನವಾಗಿ ಏನಾಯ್ತು? ಅಂದ. ನಾನು ಇಷ್ಟು ಹೊತ್ತಿನಿಂದ ಮಾತನಾಡ್ತಾ ಇದೀನಿ ನೀನು ಒಂದು ಮಾತು ಕೂಡ ಆಡಲಿಲ್ಲ...ಅಂದಳು ಸವೆತ ಮುನಿಸಿನಿಂದ. ಸಾರಿ ಶ್ವೇತ...ನಾನು ಏನೋ ಯೋಚಿಸುತ್ತಿದ್ದೆ...ಅಂದ....
ಸಧ್ಯ ಈಗಲಾದರೂ ಟ್ರಾಕ್ ಗೆ ಬಂದನಲ್ಲ ಎಂದು ಖುಷಿಯಿಂದ ಮಾತು ಮುಂದುವರೆಸುತ್ತ ಕೇಳಿದಳು ಏನು ಇದುವರೆಗೂ ಕನಸು ಕಾನುತ್ತಿದ್ಯಾ? ಎಂದು. ಇಲ್ಲ ಅಂತ ತಲೆ ಆಡಿಸಿದ ಸುಧನ್ವ ಅಲ್ಲ ಅಪರಿಚಿತರೆಲ್ಲ ಪರಿಚಯ ಮಾಡಿಕೊಂಡು ರೈಲಿನಲ್ಲಿ ಮಾತನಾಡುತ್ತಿದ್ದರೆ ನೀನೋ ಸೈಲೆಂಟ್ ಆಗಿದಿಯ..?! ಏನೋ ಇದು?

ಸರಿ ನಾನೊಂದು ಮಾತು ಕೇಳ್ತೀನಿ ಹೇಳ್ತಿಯ? ಅಂದಳು ಶ್ವೇತ...ಹೂಂ ಅಂದ ಸುಧನ್ವ.
ಪ್ರೀತಿ ಬಗ್ಗೆ ನಿನ್ನ ಅಭಿಪ್ರಾಯ? ಎಂದಳು..

ಪ್ರೀತಿ...

ಪದದ ಅರ್ಥವೇ ಸಾಗರದಷ್ಟು ಆಳ, ಆಕಾಶದಷ್ಟು ವಿಶಾಲ ...ಎಂದು ನಿಟ್ಟುಸಿರು ಬಿಟ್ಟ!

ಪಕ್ಕದಲ್ಲಿದ್ದ ಶ್ವೇತ ಕೇಳಿದಳು...ಸ್ವಲ್ಪ ವಿಸ್ತಾರವಾಗಿ ಹೇಳ್ಬಾರ್ದ?

ಸೀಟಿನಿಂದ ಮೇಲೆದ್ದ ಸುಧನ್ವ ಬಾಗಿಲ ಬಳಿ ಹೋಗಿ ಸಿಗರಟು ಹಚ್ಚಿ ಪುಂಖಾನುಪುಂಖವಾಗಿ ಸೇದತೊಡಗಿದ. ಹಿಂದೆಯೇ ಬಂದ ಶ್ವೇತ ಮತ್ತೆ ಪ್ರಶ್ನೆ ಮಾಡಿದಳು...ಪ್ಲೀಸ್ ಹೇಳೋ?

...ಅದೊಂದು ಕಾರ್ಯಗರಕ್ಕೆಂದು ನಾನು ಬೆಂಗಳೂರಿಗೆ ಹೋಗಿದ್ದೆ ಅಲ್ಲಿದ್ದ ೬೦ ಮಂದಿ ಹುಡುಗಿಯರಲ್ಲಿ ಬೇಡ ಬೇಡವೆಂದರೂ ಅವಳತ್ತಲೇ ಹೊರಳುತ್ತಿತ್ತು ನನ್ನ ನೋಟ. ಇಡೀ ಕಾರ್ಯಾಗಾರದ ಆ ೫ ದಿನವೂ ನನ್ನ ದೃಷ್ಟಿ ಅವಳ ಮೇಲೆಯೇ ಇತ್ತು. ಕಾರ್ಯಗಾರದಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಲು ಪಡೆ ಪಡೆ ನಾನೇ ಎದ್ದು ನಿಲ್ಲುತ್ತಿದ್ದೆ>. ಪ್ರತಿ ಸಾರಿಯೂ ಅವಳು ನನ್ನನ್ನೇ ನೋಡುತ್ತಿದ್ದಳು. ಅವಳು ನನ್ನನ್ನು ನೋಡಲಿ ಎಂಬ ಕಾರಣಕ್ಕಾಗಿಯಾದರೂ ನಾನು ಉತ್ತರ ಹೇಳಲೆಬೇಕಿತ್ತು! ಹೇಳುತ್ತಿದ್ದೆ!!
ಹೆಚ್ಚು ಸಮಯ ಹಿಡಿಯಲಿಲ್ಲ ಅವಳು ನನ್ನನ್ನು ಮಾತನಾಡಿಸಲು. ಎರಡನೆ ದಿನ ತಿಂಡಿ ತಿನ್ನಲು ಎಲ್ಲರು ಸಾಲಾಗಿ ಹೋಗುತ್ತಿದ್ದಾಗ ಎಲ್ಲಿದ್ದಲೋ? ಎದುರು ಪ್ರತ್ಯಕ್ಷವಾಗಿ Hi, I am Nandini...ಅಂದಳು. ಹಲೋ I am sudhanva from Mysore..ಅಂದೇ.

ಉಭಾಯಾಕುಶಲೋಪರಿ..ಶುರುವಾಯ್ತು. ಪ್ರಥಮ ನೋಟದಲ್ಲೇ ಮತ್ತಷ್ಟು ಸ್ಪೂರ್ತಿ ನೀಡಿದ್ದಳಲ್ಲ ಬಹುಶಹ ಇಬ್ಬರಿಗೂ ಕ್ಲೋಸ್ ಆಗಲಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ..!

ನನ್ನ ಅವಳ ರುಚಿ-ಅಭಿರುಚಿ, ವಿದ್ಯೆ-ಊರು, ತಿಂಡಿ-ತಿನಿಸು ಹೀಗೆ ಪ್ರತಿಯೊಂದರ ಬಗ್ಗೆಯೂ ಸಂಬಾಷಣೆ ನಿರರ್ಗಳವಾಗಿ ನಡೆಯುತ್ತಿತ್ತು.

ಇತರ ಶಿಭಿರಾರ್ಥಿಗಲಿಗೋ ನಮ್ಮ ಮೇಲೆಯೇ ದೃಷ್ಟಿ ನೆಟ್ಟಿತ್ತು. ತಿಂಡಿ ಮುಗಿಸಿಕೊಂಡು ಕಾರ್ಯಾಗಾರದ ಹಾಲ್ ಸೇರಿಕೊಲ್ಲುವಷ್ಟರಲ್ಲಿ ನನ್ನ ಗೆಳೆಯರ ಪ್ರಶ್ನೆಗಳು ಶುರು? ಯಾರವಳು...? ಏನು ಮಾತನದುತ್ತಿದ್ದಿರಿ? ಇತ್ಯಾದಿ..ಇತ್ಯಾದಿ? ಅವರತ್ತ ಮುಗುಳ್ನಕ್ಕು ನನ್ನ ಸೀಟ್ ನಲ್ಲಿ ಕೂತೆ?

ಅಲ್ಲಿದ್ದ ೫ ದಿನವೂ ಬಹುಶ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತ ಆನಂದ ನನಗೆ. ಬದುಕಿನಲ್ಲಿ ಹೊಸ ಅನುಭವ..ಮನಸು ಪ್ರಫುಲ್ಲಾ ...!
ಪ್ರತಿದಿನವೂ ಮಾತನಾಡಿ ಮಾತನಾಡಿ ಬಹಳ ವರ್ಷದ ಸ್ನೇಹಿತರೆನೋ ಅನ್ನುವಂತಿತ್ತು ನಮಗೆ. ಸರಿ ಕೊನೆಯ ದಿನ ಮರಳಿ ಗೂಡಿಗೆ ಎಂಬಂತೆ ಊರಿಗೆ ಹೊರಡಲೇ ಬೇಕಿತ್ತು..!? ಸರಿ ಅವಳು ಆಗ ತಾನೇ BE ಮುಗಿಸಿ ಉದ್ಯೋಗದ ಹುದುಕಾತದಲ್ಲಿದ್ದಳು. ಅವಳದು ಬೆಂಗಳೂರೇ ಆಗಿರೋದ್ರಿಂದ ಬೇಗ ಮರೀತಲೇ, ಫ್ರೆಂಡ್ಸ್ ಜಾಸ್ತಿ, ಮಾಯಾನಗರಿ..ಇದು ಎಲ್ಲವನ್ನು ಮರೆಸುತ್ತೆ ಅನ್ನುವ ಆತಂಕದಲ್ಲೇ ರೈಲನ್ನು ಹತ್ತಿ ಮೈಸೂರಿಗೆ ಹೊರಟೆ..!

ಮನೆಗೆ ಹೋಗುತ್ತಿದ್ದ ಹಾಗೆ ಅಮ್ಮ ಕೇಳಿದಳು..ಹೇಗಿತ್ತೋ...ಕಾರ್ಯಗಾರ?
ನಾನು ಭಾರವಾದ ಮನಸ್ಸಿನಿಂದ ಚೆನ್ನಾಗಿತ್ತು...ಎಂದು ಹೇಳಿ ರೂಂ ಸೇರಿಕೊಂಡೆ...
ರೂಂ ಸೇರಿಕೊಂಡು ೫ ನಿಮಿಷ ಕಳೆದಿಲ್ಲ ಮೊಬೈಲ್ ಫೋನ್ ರಿಂಗ್ ಆಯಿತು. ಯಾರೂ ಅಂತ ನೋಡಿದರೆ...ನಂದಿನಿ!! ಖುಷಿಯಾಗಿ ಮೊಬೈಲ್ ಎತ್ತಿಕೊಂಡು ಹಲೋ ಎಂದೇ...Hiiiii...ಎಂಬ ಸ್ವೀಟ್ ವಾಯ್ಸ್. ಸಾರ್ಥಕವಾಯ್ತು ನಂಬರ್ ಕೊಟ್ಟಿದ್ದಕ್ಕೆ ಎಂದುಕೊಂಡು..ಕಳೆದ ೫ ದಿನಗಳ ಶಿಬಿರದ ಬಗ್ಗೆ, ಒಡನಾಟದ ಬಗ್ಗೆ ಶಿಭಿರಾರ್ಥಿಗಳ ಬಗ್ಗೆ ಅಲ್ಲಿ ನಡೆದ ಘಟನಾವಳಿಗಳ ಬಗ್ಗೆ ಹರಟೆ ಹೊಡೆದಿದ್ದೆ ಹೊಡೆದಿದ್ದು...ನಕ್ಕಿದ್ದೆ ನಕ್ಕಿದ್ದು!!!

ಹೀಗೆ ಕಳೆಯಿತು ಆರು ತಿಂಗಳು. ನಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಪ್ರತಿದಿನ ಚಾಟ್ ಮಾಡ್ತಾ ಇದ್ವಿ, ಫೋನ್ ನಲ್ಲಿ ಮಾತನಾಡ್ತಾ ಇದ್ವಿ, ಒಂದೆರಡು ಸಲ ಬೆಂಗಳೂರಿನ ವರೆಗೂ ಹೋಗಿ ಭೇಟಿಯೂ ಆಗಿದ್ದೆ. ಸರೀ ಮನಸ್ಸಿನ ಭಾವನೆ ಎಷ್ಟು ದಿನ ಅಂತ ಮುಚ್ಚಿಡೋಕೆ ಸಾಧ್ಯಾ?

One fine day..ಮೆಸೇಜ್ ಮಾಡಿದೆ ನಾಳೆ ಬೆನಗ್ಲೂರಿಗೆ ಬರುತ್ತಿದ್ದೇನೆ ಎಂದು. OK ಎಂದಳು.
ಅವತ್ತು ರಾತ್ರಿಯಿಡೀ ನಿದ್ದೆಯೇ ಹತ್ತಿರಕ್ಕೆ ಸುಳಿಯಲಿಲ್ಲ>>!

ಇಬ್ಬರು ಹೋಗಿ ಒಂದು ಪ್ರಶಾಂತವಾದ ಪಾರ್ಕ್ ನಲ್ಲಿ ಕುಳಿತೆವು..ನನಗೆ ಒಳಗೆ ಆತಂಕ...ಹೇಗೆ ಪ್ರಪೋಸ್ ಮಾಡುವುದು ಎಂದು? ಪ್ರಪೋಸೆ ಮಾಡಿದರೆ ನಮ್ಮ ಎಲ್ಲಿ ನಮ್ಮ ಗೆಳೆತನಕ್ಕೆ ಧಕ್ಕೆ ಯಗುತ್ತೋ? ಎಂದು. ೫-೧೦ ನಿಮಿಶವದು ಎಂದು ಮಾತನಾಡಲಿಲ್ಲ. ಅವಳು ಕೆಳುತ್ತಲಿದ್ದಳು ಏನು ವಿಷಯ ಎಂದು?

ಒಳಗೆ ಧವ ಧವ ....ಸಾವರಿಸಿಕೊಂಡು,ಧೈರ್ಯ ಮಾಡಿಕೊಂಡು ತಂದಿದ್ದ ಗಿಫ್ಟ್ ಕೈಗಿತ್ತು ....

......I....Love....You......ಅಂದೇ>>!!!!

ಒಂದೆರಡು ನಿಮಿಷವಾದರು ಅವಳು react ಮಾಡದಿರುವುದನ್ನ ಕಂಡು ನನ್ನ ಎಡೆ ಇನ್ನು ಜೋರಾಗಿ ಹೊಡೆದುಕೊಳ್ಳುತ್ತಿತ್ತು...ಆತಂಕ, ಉದ್ವೇಗ, ಮನೆ ಮಾಡಿತ್ತು...!

????????? ಸಾರಿ ಕಣೋ ...ನಿನ್ನ ಮೇಲೆ ನನಗೆ ಅಂತಹ ಭಾವನೆ ಇಲ್ಲ...You are good friend of mine...! Infact ನನಗೆ marriage fix ಆಗಿದೆ.

ಅದು ನನ್ನ ಅತ್ತೆಯ ಮಗನ ಜೊತೆ. ನಿನ್ನ ಮಾತು, ಬುದ್ದಿವಂತಿಕೆ, ನಿನ್ನ ವ್ಯಕ್ತಿತ್ವ ನೋಡಿ ನಿನ್ನ ಇಷ್ಟ ಪತ್ತೆ ಅದೂ ಒಂದು ಒಳ್ಳೆ ಫ್ರೆಂಡ್ ಆಗಿ.ಪ್ಲೀಸ್ ತಪ್ಪು ತಿಳ್ಕೊಬೇಡ..Don't be disappoint ....

ಅಂದದ್ದೇ ಅಲ್ಲಿಂದ ಹೊರಟಳು....!!

ರೈಲು ನಿಧಾನವಾಗಿ ಮೈಸೂರು ರೈಲು ನಿಲ್ದಾಣದಲ್ಲಿ ನಿಲ್ಲುತ್ತಿತ್ತು...ಸುಧನ್ವನ ಕಣ್ಣಿನಿಂದ ಕಣ್ಣೀರ ಧಾರೆ ಹರಿಯುತ್ತಿತ್ತು..

ಶ್ವೇತ ಕೂಡ ಕನ್ನೋರೆಸಿಕೊಂಡಳು...ಅವನ ಬುಜವನ್ನ ತಟ್ಟುತ್ತ....

ತನ್ನ ಬ್ಯಾಗನ್ನ ಹೆಗಲಿಗೇರಿಸಿಕೊಂಡು ಭಾರವಾದ ಹೆಜ್ಜೆಗಳನ್ನಿಡುತ್ತ ಸುಧನ್ವ ಅಲ್ಲಿಂದ ಹೊರನಡೆದ...!!!!!!!



ಹೆಚ್. ಆರ್. ಪ್ರಭಾಕರ್.

Wednesday, August 10, 2011

ಲೋಕದದ ಡೊಂಕ ನೀವೇಕೆ ತಿದ್ದುವಿರಿ...

ಪ್ರತಿಯೊಬ್ಬ ವ್ಯಕ್ತಿಯಲ್ಲೂ ತಪ್ಪು ಹುಡುಕುವುದು ಕೆಲವರ ಸಹಜ ಗುಣ. ನಾವು ಹುಡುಕಿದ ತಪ್ಪಿಗಿಂತ ನಾವಾಡುವ ಮಾತಿನಿಂದ ಎದುರು ವ್ಯಕ್ತಿಯನ್ನ ನೋಯಿಸುವುದು ಹೆಚ್ಚಿನ ಸಂದರ್ಬದಲ್ಲಿ ಮಾಡುತ್ತೇವೆ. ಅದಕ್ಕಿಂತಲೂ ಆತ ಮಾಡಿದ ತಪ್ಪಿನ ಅರಿವಾಗುವಂತೆ ಮಾಡುವುದು, ತಪ್ಪನ್ನು ಸರಿಪಡಿಸುಕೊಳ್ಳುವಂತೆ ಪ್ರೇರೇಪಿಸುವುದು, ಮತ್ತೆ ತಪ್ಪು ಮಾಡದಂತೆ ಆತ್ಮ ವಿಶ್ವಾಸ ತುಂಬುವುದು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತೆ. ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಅನ್ನೋ ಹಾಗೆ ನಮ್ಮೆಲ್ಲರ ತಪ್ಪುಗಳನ್ನ ತಿದ್ದಿಕೊಂಡು ಸರಿದರಿಯತ್ತ ನಡೆದು ತೋರಿಸುವುದು ನಿಜವಾದ ಮನುಷ್ಯನ ಲಕ್ಷಣ ಅಲ್ಲವೇ?