ಬದುಕಿನ ಬಹುಪಾಲು ಸಂದರ್ಭಗಳಲ್ಲಿ ಅನಿರೀಕ್ಷಿತಗಳು, ಅಪಾಯಗಳು, ಸಂಬಂಧಗಳು, ಸಂಕಷ್ಟಗಳು, ಸುಖ-ಸಂತೋಷಗಳು, ದುಃಖ-ದುಮ್ಮಾನಗಳು ಸಂಭವಿಸಿದರೂ ಧೃತಿಗೆಡದೆ, ಹಿಗ್ಗದೆ, ಕುಗ್ಗದೆ, ಮುನ್ನಡೆಯುವುದೇ ಬದುಕು...ಅದೇ ನನ್ನ ಬದುಕಿನ ಶೈಲಿ ! (ವಿ.ಸೂ. ಬರವಣಿಗೆ ಟ್ರಾನ್ಸ್ಲೇಟ್ ಮಾಡುವಾಗ ವ್ಯಾಕರಣ ದೋಷ ಇಣುಕಿದರೆ ಮನ್ನಿಸುವ ಔದಾರ್ಯ ನಿಮ್ಮದಾಗಲಿ)
Saturday, August 27, 2011
'ತ್ಯಾಗ'
ಅಂದು ನಾ ಮುಂಗಾರು ಮಳೆ ನೋಡಿದಾಗ
ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಅರ್ಥ ಪೂರ್ಣ ಎಂದೆನಿಸಿತ್ತು
ತ್ಯಾಗದಲ್ಲಿ ಅರ್ಥವಿದೆ ಅನ್ನಿಸಿತ್ತು
ಆದರೆ ಗೆಳತಿ
ಇಂದು ನೀನು ಅಪ್ಪ ಅಮ್ಮನ ಮನ ನೋಯಿಸದಿರಲು
ನಮ್ಮ ಪ್ರೀತಿಯನ್ನು 'ತ್ಯಾಗ' ಮಾಡೋಣ ಎಂದಾಗ
ಮನಸು ದುಃಖಿಸುತ್ತಿದೆ ಗೆಳತಿ
'ತ್ಯಾಗ' ದ ಅರ್ಥ ಆಗ ಆಗಿರಲಿಲ್ಲ
ಈಗ ಆಗುತ್ತಿದೆ
ನೀನಿಲ್ಲದ ನನ್ನ ಬದುಕು ಮಂಜು ಮುಸುಕಿದೆ
ಆದರೂ ...
ಈ ತ್ಯಾಗದ ಹಿಂದೆ ನಿನ್ನ ಸಂತೋಷವಿದೆ
ಬದುಕಿನುದ್ದಕ್ಕೂ ಸಂಭ್ರಮವಿದೆ
ಎಂದು ನಾನು ಅರಿತುಕೊಂಡಾಗ
ಗೆಳತಿ
ತ್ಯಾಗ ನಿಜಕ್ಕೂ 'ಅಮರ' ವೆ ಎನಿಸಿತು
ಕಾರಣ
ಬದುಕಿನ 'ಸಿಹಿ' ಎಲ್ಲ ನಿನ್ನದಾಗಲಿ..
ಕಹಿ ಮಾತ್ರ ನನಗಿರಲಿ ....!
Subscribe to:
Post Comments (Atom)
No comments:
Post a Comment