ಬದುಕಿನ ಬಹುಪಾಲು ಸಂದರ್ಭಗಳಲ್ಲಿ ಅನಿರೀಕ್ಷಿತಗಳು, ಅಪಾಯಗಳು, ಸಂಬಂಧಗಳು, ಸಂಕಷ್ಟಗಳು, ಸುಖ-ಸಂತೋಷಗಳು, ದುಃಖ-ದುಮ್ಮಾನಗಳು ಸಂಭವಿಸಿದರೂ ಧೃತಿಗೆಡದೆ, ಹಿಗ್ಗದೆ, ಕುಗ್ಗದೆ, ಮುನ್ನಡೆಯುವುದೇ ಬದುಕು...ಅದೇ ನನ್ನ ಬದುಕಿನ ಶೈಲಿ ! (ವಿ.ಸೂ. ಬರವಣಿಗೆ ಟ್ರಾನ್ಸ್ಲೇಟ್ ಮಾಡುವಾಗ ವ್ಯಾಕರಣ ದೋಷ ಇಣುಕಿದರೆ ಮನ್ನಿಸುವ ಔದಾರ್ಯ ನಿಮ್ಮದಾಗಲಿ)
Wednesday, August 10, 2011
ಲೋಕದದ ಡೊಂಕ ನೀವೇಕೆ ತಿದ್ದುವಿರಿ...
ಪ್ರತಿಯೊಬ್ಬ ವ್ಯಕ್ತಿಯಲ್ಲೂ ತಪ್ಪು ಹುಡುಕುವುದು ಕೆಲವರ ಸಹಜ ಗುಣ. ನಾವು ಹುಡುಕಿದ ತಪ್ಪಿಗಿಂತ ನಾವಾಡುವ ಮಾತಿನಿಂದ ಎದುರು ವ್ಯಕ್ತಿಯನ್ನ ನೋಯಿಸುವುದು ಹೆಚ್ಚಿನ ಸಂದರ್ಬದಲ್ಲಿ ಮಾಡುತ್ತೇವೆ. ಅದಕ್ಕಿಂತಲೂ ಆತ ಮಾಡಿದ ತಪ್ಪಿನ ಅರಿವಾಗುವಂತೆ ಮಾಡುವುದು, ತಪ್ಪನ್ನು ಸರಿಪಡಿಸುಕೊಳ್ಳುವಂತೆ ಪ್ರೇರೇಪಿಸುವುದು, ಮತ್ತೆ ತಪ್ಪು ಮಾಡದಂತೆ ಆತ್ಮ ವಿಶ್ವಾಸ ತುಂಬುವುದು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತೆ. ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಅನ್ನೋ ಹಾಗೆ ನಮ್ಮೆಲ್ಲರ ತಪ್ಪುಗಳನ್ನ ತಿದ್ದಿಕೊಂಡು ಸರಿದರಿಯತ್ತ ನಡೆದು ತೋರಿಸುವುದು ನಿಜವಾದ ಮನುಷ್ಯನ ಲಕ್ಷಣ ಅಲ್ಲವೇ?
Subscribe to:
Post Comments (Atom)
No comments:
Post a Comment